Saturday, 19 September 2020

ಪೆರಿಯಾರ್ ವಿಚಾರಗಳು

ಪೆರಿಯಾರ್ ವಿಚಾರಗಳು:


•ರಾಮಾಯಣ ಮತ್ತು ಮನುಸ್ಮೃತಿಗಳನ್ನು ಸುಟ್ಟು 
ಹಾಕುವಂತೆ ಕರೆ ನೀಡಿದರು.

•೧೯೨೯ ರಲ್ಲಿ ಅವರು ಗಾಂಧೀಜಿಯವರೊಂದಿಗೆ ವರ್ಣಶ್ರಮ ಧರ್ಮ ನಾಶವಾದರೆ ಮಾತ್ರ ಜಾತಿ ಪದ್ಧತಿ ತೊಲಗುವುದು ಎಂದು ಪ್ರತಿಪಾದಿಸಿದರು.

•ಗ್ರೀಸ್, ಈಜಿಪ್ಟ್, ಟರ್ಕಿ, ರಷ್ಯಾ, ಜರ್ಮನಿ, ಸ್ಪೇನ್, ಫ್ರಾನ್ಸ್, ಪೋರ್ಚುಗಲ್ ಹಾಗೂ ಇಂಗ್ಲೆಂಡ್ ಮೊದಲಾದ ದೇಶಗಳಿಗೆ ಭೇಟಿ ನೀಡಿದರು.

•ಹಿಂದಿ ವಿರೋಧಿ ಕಾರ್ಯ ಚಟುವಟಿಕೆಗಳಿಗಾಗಿ, ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ರೂ‌.೨೦೦೦/- ದಂಡನೆಯನ್ನು ವಿಧಿಸಲಾಯಿತು.

•ಬ್ರಾಹ್ಮಣೀಯ ಭಾರತಕ್ಕೆ ಸ್ವಾತಂತ್ರ್ಯ ದೊರಕಿದೆ ಎಂದು ಭಾವಿಸಿದ ಅವರು ಸ್ವಾತಂತ್ರ್ಯ ದಿನವನ್ನು ಕರಾಳ, ಸಂತಾಪ ದಿನ ಎಂದು ಘೋಷಿಸಿದರು.

•ರಾಷ್ಟ್ರೀಯತೆಯ ನಿಷ್ಠುರ ವಿಮರ್ಶಕರು.

•ಹಿಂದೂ ಧರ್ಮದ ಪಠ್ಯಗಳನ್ನು, ದೇವರ ವಿಗ್ರಹ ಮತ್ತು ಸಂಕೇತಗಳನ್ನು ರಾಮಾಯಣ ಮತ್ತು ಮಹಾಭಾರತದಂತ ಸಂಪ್ರದಾಯಿಕ ಕಥನಗಳನ್ನು ತೀವ್ರವಾಗಿ ವಿರೋಧಿಸಿದರು.

•ಧರ್ಮ ಜನಸಮೂಹದ ಮಾದಕವಸ್ತು ಎಂದು ತಿಳಿದಿದ್ದರು.

•ಖಾಸಗಿ ಆಸ್ತಿ ಮತ್ತು ಬಂಡವಾಳಶಾಹಿತ್ವ ಮನುಷ್ಯವಿರೋಧಿ ಎಂದು ಅವುಗಳ ಮೇಲೆ ತೀವ್ರವಾದ ಆಕ್ರಮಣವನ್ನು ಮಾಡಲಾರಂಭಿಸಿದರು.

•ಮಹಿಳೆಯರು, ಅವರ ಚಾರಿತ್ರ್ಯ, ಪ್ರೇಮ,ಜನನ ನಿಯಂತ್ರಣ, ವೈಧವ್ಯದ ಮತ್ತು ಅವರ ವಿಮೋಚನೆಯ ಬಗ್ಗೆ ಪೇರಿಯರ್ ಬಹಳ ಗಂಭೀರವಾಗಿದ್ದರು.

•ಪಾತಿವ್ರತ್ಯತೆಯ ಪರಿಕಲ್ಪನೆಯನ್ನು ಸಾಂಪ್ರದಾಯಿಕವಾದ ಕಥೆಗಳು ಮತ್ತು ಧರ್ಮ ಹೇಳುವ ಹಾಗೆ ಮಹಿಳೆಯರು ಹುಟ್ಟುಹಾಕಿದ್ದಲ್ಲ ಬದಲಿಗೆ ಇದು ಪುರುಷರು ಮಹಿಳೆಯರನ್ನು ಗುಲಾಮರನ್ನಾಗಿಸಿಕೊಳ್ಳುವುದಕ್ಕೆ ಅವರ ಮೇಲೆ ಹೇರಲ್ಪಟ್ಟ ಸಂಗತಿಯಾಗಿದೆ.

• ಮನುಕುಲಕ್ಕೆ ಅಗತ್ಯ ಇಲ್ಲ ಎನಿಸಿದರೆ,ಹೆಣ್ಣುಮಕ್ಕಳು ಹಡೆಯುವುದನ್ನು ಬಿಟ್ಟು ಬಿಡಬಹುದೆಂಬ ಮೊಂಡುವಾದವನ್ನು ಮಾಡುತ್ತಿದ್ದರು. ನಂತರ ಗಂಡು ಮತ್ತು ಹೆಣ್ಣಿನ ದೈಹಿಕ ಸಂಪರ್ಕವಿಲ್ಲದೆ, ಮಕ್ಕಳಿಗೆ ಜನ್ಮಕೊಡುವ ವೈಜ್ಞಾನಿಕ ವಿಧಾನಗಳನ್ನು ಆವಿಷ್ಕರಿಸಬೇಕೆಂದು ಹೇಳುತ್ತಿದ್ದರು.

•ಈ ದೇಶದಲ್ಲಿ ಒಂದು ಹೆಣ್ಣಾದವಳು ಪತಿವ್ರತೆಯಾಗಿರಬೇಕೆಂದರೆ, ಅವಳು ಎಷ್ಟರಮಟ್ಟಿಗೆ ದಾಸ್ಯದ ಭಾವನೆಯೊಂದಿಗಿರುವಳೊ, ಅಷ್ಟರಮಟ್ಟಿಗೆ ಅವಳು ಶ್ರೇಷ್ಠ ಪತಿವ್ರತೆಯಾಗಿ ಭಾವಿಸಲ್ಪಡುತ್ತಾಳೆ‌. ಎಂಬುದನ್ನು ಪ್ರಶ್ನಿಸಿದರು.

•ಸಾಮಾನ್ಯವಾಗಿ ಭಾರತೀಯ ಸ್ತ್ರೀಯರ ಸಮೂಹವನ್ನೇ ಸಂಪೂರ್ಣವಾಗಿ ಹುಟ್ಟಿನಿಂದಲೇ ಸ್ವಾತಂತ್ರ್ಯಕ್ಕೆ ಅನರ್ಹರೆಂದೂ, ಪುರುಷರ ದಾಸ್ಯದಲ್ಲೇ ಇರಲು ದೇವರಿಂದಲೇ ಸೃಷ್ಟಿಸಲ್ಪಟ್ಟವರೆಂದು ಭಾವಿಸಿ, ಅವರನ್ನು ಚಲಿಸುವ ಹೆಣಗಳಂತೆ ನಡೆಸಿಕೊಳ್ಳುವುತ್ತಿದ್ದಾರೆ.

•ಭಗವದ್ಗೀತೆಯ ಆಧಾರದ ಮೇಲೆ ಗಾಂಧಿ ಪ್ರತಿಪಾದಿಸುತ್ತಿದ್ದ ವರ್ಣಾಶ್ರಮ ಧರ್ಮದ ಕಲ್ಪನೆ ಆ ಮೂಲಕ ಅವರು ಕಟ್ಟುತ್ತಿದ್ದ ಹಿಂದೂ ಐಡೆಂಟಿಟಿಯನ್ನು ಪೆರಿಯಾರ್ ತೀವ್ರವಾಗಿ ಪ್ರಶ್ನಿಸಿದರು.

•ಬ್ರಾಹ್ಮಣರು  ಬ್ರಾಹ್ಮಣೇತರರಲ್ಲಿ ರಾಜಕೀಯ ಮತ್ತು ರಾಷ್ಟ್ರೀಯ ಭಾವನೆ ಮೊದಲಾದವುಗಳ ಸೋಗಿನಲ್ಲಿ ಚಳುವಳಿಯನ್ನು ಹತ್ತಿಕ್ಕಲು ಮುಂದಾಗುತ್ತಿದ್ದಾರೆ.ಜೊತೆಗೆ ಧರ್ಮ, ಪುರಾಣ, ಹರಿಕಥೆ ಮೊದಲಾದವುಗಳ ಹೆಸರಿನಲ್ಲಿ ತಮ್ಮ ಬದುಕನ್ನು ನಡೆಸುವ ಈ ಪರಾವಲಂಬಿಗಳು ಸ್ವಾಭಿಮಾನಿ ಚಳುವಳಿಯನ್ನು ವಿರೋಧಿಸಲು ದೇವರು-ಧರ್ಮದ ಬಗ್ಗೆ ಸಾರ್ವಜನಿಕರಲ್ಲಿರುವ ಗೊಂದಲವನ್ನು ತಮಗೆ ಅನುಕೂಲವಾಗುವಂತೆ ಬಳಸಿಕೊಂಡು ವಿಚಾರಗಳನ್ನು ತಿರುಚಿ ಹೇಳುತ್ತಿದ್ದಾರೆ.

•ನಿಮ್ಮ ಧರ್ಮ ಏನು ?ತತ್ವ ಏನು..? ಎಂದರೆ ಕೆಲವು ಶಾಸ್ತ್ರ ವಿಧಿಗಳನ್ನು ಹೇಳುತ್ತಾನೆ ಹೊರತು ನಿಜವಾದ ತತ್ವವು ಯಾವ ಉದ್ದೇಶದಿಂದ ಪ್ರಾರಂಭದಲ್ಲಿ ಸೃಷ್ಟಿಸಲ್ಪಟ್ಟಿದೆ ಎಂಬುದನ್ನು ಹೇಳುವುದಿಲ್ಲ.

•ಧರ್ಮವೂ ದೇವರ ಮತ್ತು ಜನರ ಮಧ್ಯೆ ದಲ್ಲಾಳಿಗಳನ್ನು ಸೃಷ್ಟಿಮಾಡಿ ದಲ್ಲಾಳಿಗಳ ಆಚರಣೆಗಳು ಮತ್ತು ಮಾತುಗಳು ಎಷ್ಟೇ ನೀಚ ತನದಿಂದ ಕುಡಿದರೂ ಸ್ವಂತ ಅರಿವು, ಪ್ರತ್ಯಕ್ಷ ಅನುಭವಕ್ಕಿಂತ ಶ್ರೇಷ್ಠವೆಂದು ನಂಬು ಹಾಗೆ ಮಾಡುತ್ತದೆ.

•ನನಗೆ ಮತ ಅಭಿಮಾನ ಇಲ್ಲ ಅಂದುಕೊಳ್ಳಬೇಡಿ. 25 ವರ್ಷಗಳ ಕಾಲ ನಾನು ಒಂದು ದೇವಸ್ಥಾನಕ್ಕೆ ಧರ್ಮ ಕರ್ತನಾಗಿ, ಆ ದೇವಸ್ಥಾನದ ಕಾರ್ಯಗಳನ್ನೆಲ್ಲ ಶಿಸ್ತಿನಿಂದ ನಡೆಸಿಕೊಂಡು ಬಂದಿದೆ. ಮೂರುನಾಲ್ಕು ಸಲ, ದೇಶದ ವಿಷಯಕ್ಕಾಗಿ ಜೈಲಿಗೆ ಹೋಗಿರುವನು. ಆದರೆ ಅಭಿಮಾನವೆಲ್ಲ ನಮ್ಮ ಬಡ ಸಹೋದರರಿಗೆ ವಿಮೋಚನೆಯನ್ನು ತಾರದು.

•ಈ ದೇಶದ ಶೈವರು ತೋರಿದ ಕ್ರೂರತೆಯನ್ನು ನಾವು ಹೇಳಲು ಅಸಾಧ್ಯ. ಇಂದಿಗೂ ಸಹ ಮಧುರೈಯಲ್ಲಿ, ಜೈನರನ್ನು ಕಳುವು [ಚೂಪಾದ ಆಯುಧವನ್ನು ನೆಲದಲ್ಲಿ ನೇರವಾಗಿ ನಿಲ್ಲಿಸಿ, ಚೂಪು ಭಾಗದ ಮೇಲೆ ಜನರನ್ನು ಕುಳ್ಳಿರಿಸಿ ಅವರ ದೇಹಗಳನ್ನು ಎರಡು ಭಾಗವಾಗಿ ಸೀಳುವ ಕ್ರಿಯೆಗೆ 'ಕಳುವು' ಎನ್ನುತ್ತಾರೆ ] ಶಿಕ್ಷೆಗೆ ಈಡು ಮಾಡಿದ್ದರ ನೆನಪಿಗೆ ಹಬ್ಬವನ್ನು ಆಚರಿಸುತ್ತಾರೆ.

•ವೈಷ್ಣವರ ಯೋಗ್ಯತೆಯಾದರೂ ಏನು..? ಇಂದು ನಮ್ಮ ದೇವಸ್ಥಾನಗಳಲ್ಲಿರುವ ಶ್ರೀರಂಗಂ, ಕಾಂಚಿಪುರಂ ,ಪಳನಿ, ತಿರುಪತಿ, ಮೊದಲಾದೆಡೆಗಳ ದೇವಸ್ಥಾನಗಳ ಸ್ಥಳಗಳು ಹಿಂದೆ ಬೌದ್ಧ ಸಂಸ್ಥೆಗಳ ವಿಹಾರ ತಾಣಗಳಾಗಿದ್ದವು. ಇಲ್ಲೆಲ್ಲಾ ಇದ್ದ ಬುದ್ಧನ ಪುತ್ಥಳಿಗಳನ್ನು ರಂಗನಾಥ, ವರದರಸ, ಏಕಾಂಬರ, ಸುಬ್ರಹ್ಮಣ್ಯ, ವೆಂಕಟಾಚಲಪತಿಗಳಾಗಿ ಬದಲಾಯಿಸಲಾಗಿದೆ. (ವೇದಸಲಂ)

Saturday, 29 August 2020

ಹಿಂದೂ ಧರ್ಮದ ತತ್ವಜ್ಞಾನ

ಮನು ಒಬ್ಬನೇ ಹೀಗೆ ಜಗತ್ತಿನಲ್ಲಿ ಸಾಮಾನ್ಯ ಮನುಷ್ಯನಿಗೆ ಜ್ಞಾನದ ಹಕ್ಕನ್ನು ನಿರಾಕರಿಸಿದ ಏಕೈಕ ವ್ಯಕ್ತಿ.:- 

ಹಿಂದೂ ಧರ್ಮದಲ್ಲಿ ಸಾಮಾಜಿಕ ಅಸಮಾನತೆ ಮತ್ತು ಧಾರ್ಮಿಕ ಅಸಮಾನತೆಗಳೆರಡನ್ನು ತಾತ್ವಿಕವಾಗಿ ಬೆಸೆಯಲಾಗಿದೆ.

ಹಿಂದೂ ಧರ್ಮವು ಸಮಾನತೆಯನ್ನು ಒಪ್ಪುತ್ತದೆಯೇ..?
•ವರ್ಣ ಜಾತಿಯ ಮೂಲ.
•ಮನು ಗುಲಾಮ ಪದ್ಧತಿಯನ್ನು ಒಪ್ಪಿಕೊಂಡಿದ್ದಾನೆ. ಅದನ್ನು ಶೂದ್ರರಿಗೆ ಮಾತ್ರ ಸೀಮಿತಗೊಳಿಸಿದ್ದಾನೆ.
ಉದ್ಯೋಗ ಸ್ವಾತಂತ್ರ ಹಾಗೂ ಶಿಕ್ಷಣದ ಸಮಾನತೆಯ ಹಕ್ಕನ್ನು ಹಿಂದೂಧರ್ಮ ನಿರಾಕರಿಸುತ್ತದೆ.

•ಹಿಂದೂ ಧರ್ಮದ ತತ್ವಜ್ಞಾನದಲ್ಲಿ ಸಾಮಾನ್ಯ ಮನುಷ್ಯರಂತೆ ಒಟ್ಟಾರೆ ಸಮಾಜದ ಹಿತವನ್ನು ನಿರಾಕರಿಸಿ ತುಳಿದು ಮತ್ತು ಬಲಿಕೊಟ್ಟು ಅತಿಮಾನವ ವರ್ಗದ ಹಿತಾಸಕ್ತಿಯನ್ನು ಕಾಪಾಡಲಾಗಿದೆ.

•ಹಿಂದೂ ಧರ್ಮದ ತತ್ವಜ್ಞಾನವು ಅತಿಮಾನವನಿಗೆ ಸ್ವರ್ಗವಾದರೆ; ಸಾಮಾನ್ಯ ಮನುಷ್ಯನಿಗೆ ನರಕವಾಗಿದೆ.

•ಹಿಂದೂ ಧರ್ಮದಲ್ಲಿ ಉತ್ತಮ ಗುಣ ವೆಂಬುದು ಸಮಾಜದ ಒಳಿತಿಗೆ ಅಥವಾ ದೇವತಾರಾಧನೆಗೆ ಸಂಬಂಧಿಸಿದ್ದಲ್ಲ. ಅದು ಬ್ರಾಹ್ಮಣರಿಗೆ ನೀಡುವ ಗೌರವ ಮತ್ತು ದಕ್ಷಿಣೆ ಎಂದು ತಿಳಿಯಲಾಗಿದೆ. ಹಿಂದೂ ನೀತಿಶಾಸ್ತ್ರ ವೆಂದರೆ ಶ್ರೇಷ್ಠ ವ್ಯಕ್ತಿಯ ಆರಾಧನೆ.

•ಹಿಂದೂ ಧರ್ಮವೇ..!ನಿನ್ನ ಹೆಸರೇ ಅಸಮಾನತೆ. ಅಸಮಾನತೆಯೇ ಹಿಂದೂ ಧರ್ಮದ ಆತ್ಮ.

•ಆರ್ಥಿಕ ಭದ್ರತೆ ಇಲ್ಲದ ಸ್ವಾತಂತ್ರ್ಯಕ್ಕೆ ಯಾವುದೇ ಬೆಲೆಯಿಲ್ಲ.

•ಬ್ರಾಹ್ಮಣರು ಬರೆದ ಸಾಹಿತ್ಯವೆಲ್ಲವೂ ಇಸವಿ, ದಿನಾಂಕ ವಿಲ್ಲದ ಇತಿಹಾಸ.

•ಕೊಲ್ಲುವುದೇ ಕ್ಷತ್ರಿಯನ ಕರ್ತವ್ಯವೆಂದು ಹೇಳುವ ಭಗವದ್ಗೀತೆಯ ತಾತ್ವಿಕ ಸಮರ್ಥನೆ.

ಭಗವದ್ಗೀತೆಯ ಹೃದಯವೇ ಚಾತುರ್ವರ್ಣದ ಸಮರ್ಥನೆ ಮತ್ತು ಅನುಷ್ಠಾನದಲ್ಲಿ ಅದರ ಆಚರಣೆಯನ್ನು ತರುವುದು.


•ಬ್ರಹ್ಮ, ವಿಷ್ಣು ,ಶಿವ ಇವರ ಏಳುಬೀಳುಗಳನ್ನು ಪ್ರಸ್ತಾಪಿಸಲಾಗಿದೆ. ಸ್ಥಾನ ಮತ್ತು ಅಧಿಕಾರಕ್ಕಾಗಿ ನಡೆದ ಹೋರಾಟವೇ ಆಗಿದೆ.~ಗಾಡ್ಸ ಅಟ್ ವಾರ್.

•ಇವರುಗಳು ಪರಸ್ಪರ ಸ್ನೇಹಿತರಾಗಿರುವದಕ್ಕಿಂತ,ಶತ್ರುಗಳಾಗಿದ್ದು; ಸರ್ವೋತ್ಕೃಷ್ಟತೆಗೂ, ಪರಮಾಧಿಕಾರಕ್ಕಾಗಿ ನಡೆದ ಕಚ್ಚಾಟ‌. 

•ರಾಮಾಯಣದ ಉತ್ತರಕಾಂಡದಲ್ಲಿ ರಾಮನು-ಸೀತೆಯು ಒಟ್ಟಿಗೆ ಕುಳಿತು ಮದ್ಯಪಾನ ಹಾಗೂ ಮಾಂಸ ಸೇವನೆ ಮಾಡುತ್ತಿದ್ದುದ್ದರ ಉಲ್ಲೇಖ ಇದೆ.

•ಶಿವ ಮೊದಲ ವೇದ ವಿರೋಧಿಯಾಗಿದ್ದನೆಂದು ಸಾಕಷ್ಟು ಸ್ಪಷ್ಟವಾದ ನಿದರ್ಶನಗಳಿವೆ.

• ಬುದ್ಧನ ವಿಗ್ರಹ ಕೇವಲ ಒಂದು ಚಿತ್ರ ಅಥವಾ ಪ್ರತಿಮೆ. ಅದಕ್ಕೆ ಆತ್ಮವಿಲ್ಲ. 

•ಬ್ರಾಹ್ಮಣರು ಹಿಂದೂ ದೈವಗಳಿಗೆ ಆತ್ಮವನ್ನು ಆರೋಪಿಸಿ ಅವರನ್ನು ಸಜೀವ ವ್ಯಕ್ತಿಗಳನ್ನಾಗಿ ಮಾಡಿದರೆಕೇ..? ಪ್ರಾಣಪ್ರತಿಷ್ಠಾಪನ. ಹಿಂದುಗಳು ಬಹುದೇವತ ಆರಾಧಕರು ಭಕ್ತಿಯಲ್ಲಿ ಎಂದು ಅಚಲ ವಾಗಿರಲಿಲ್ಲ. ದೈವಕ್ಕೆ ನಿಷ್ಠೆ, ಶ್ರದ್ಧೆ ವಿಶ್ವಾಸವೂ ಇರಲಿಲ್ಲ.

•ಹಿಂದೂ ಭಾರತದ ಮೇಲೆ ಮುಸ್ಲಿಂ ದಾಳಿಕೋರರ ದಂಡೆಯಾತ್ರೆಗಳಿಗಿಂತ ಬೌದ್ಧ ಭಾರತದ ಮೇಲೆ ಬ್ರಾಹ್ಮಣ ದಾಳಿಕೋರರ ದಂಡೆಯಾತ್ರೆಗಳು ಅತ್ಯಂತ ಘೋರ ,ಪೈಶಾಚಿಕ.

•ಬೌದ್ಧ ಧರ್ಮವನ್ನು ನಾಶಮಾಡಿ ಬ್ರಾಹ್ಮಣ ಧರ್ಮವನ್ನು ಮರು ಸ್ಥಾಪಿಸುವುದೇ ಪುಷ್ಯಮಿತ್ರನ ಕ್ರಾಂತಿಯ ಏಕೈಕ ಗುರಿ ಉದ್ದೇಶವಾಗಿತ್ತೆಂಬುದಕ್ಕೆ ಸಂದೇಹವಿಲ್ಲ. (ಮನುಸ್ಮೃತಿ ಕಾನೂನು ಸಂಹಿತೆ ರೂಪುಗೊಂಡಿತು)

•ಬೌದ್ಧಧರ್ಮದ ಪ್ರಹಾರದಿಂದ ತಮ್ಮನ್ನು ರಕ್ಷಿಸಿಕೊಳ್ಳಲು  ಭಗವದ್ಗೀತೆ ಅಸ್ತಿತ್ವಕ್ಕೆ ಬಂತು. ಹಾಗೆ ಬೌದ್ಧ ಸಾಹಿತ್ಯದಿಂದ ತಾತ್ವಿಕ, ನೈತಿಕ ಮೌಲ್ಯಗಳನ್ನು ಎರವಲು ಪಡೆದದ್ದು ಕಾಣಬಹುದು.

•ಭಗವದ್ಗೀತೆಯ ಹೃದಯವೇ ಚಾತುರ್ವರ್ಣದ ಸಮರ್ಥನೆ ಮತ್ತು ಅನುಷ್ಠಾನದಲ್ಲಿ ಅದರ ಆಚರಣೆಯನ್ನು ತರುವುದು. ಭಗವದ್ಗೀತೆಯು ದೇವ ವಾಣಿಯಲ್ಲ. ಆದ್ದರಿಂದ ಅದು ಯಾವ ಸಂದೇಶವನ್ನು ಕೊಡಲಾರದು. ಅದನ್ನು ಹುಡುಕುವುದು ವ್ಯರ್ಥ. ಭಗವದ್ಗೀತೆಯು ಧರ್ಮ ಗ್ರಂಥವಲ್ಲ, ದರ್ಶನ ಗ್ರಂಥವು ಅಲ್ಲ ಎಂಬುದೇ ನನ್ನ ಉತ್ತರ. ತಾತ್ವಿಕ ನೆಲೆಗಟ್ಟಿನ ಮೇಲೆ ಕೆಲವು ಧಾರ್ಮಿಕ ನಂಬಿಕೆಗಳನ್ನು ಸಮರ್ಥಿಸುವುದೇ ಭಗವದ್ಗೀತೆಯ ಉದ್ದೇಶ. ಚಾತುರ್ವರ್ಣ ದೈವ ಸೃಷ್ಟಿಯೆಂದು, ಆದ್ದರಿಂದ ಪವಿತ್ರವೆಂದು ಭಗವದ್ಗೀತೆ ನಿಸ್ಸಂದೇಹವಾಗಿ ಹೇಳುತ್ತದೆ. ಮೂಢನಂಬಿಕೆಯೇ ಅದರ ಹೊಲಸು (ಕರ್ಮಸಿದ್ಧಾಂತ). ಕರ್ಮವೆಂದರೆ ಧಾರ್ಮಿಕ ವ್ರತಗಳು ಮತ್ತು ಆಚರಣೆಗಳು. ಕೊಲ್ಲುವುದೇ ಕ್ಷತ್ರಿಯನ ಕರ್ತವ್ಯವೆಂದು ಹೇಳುವ ಭಗವದ್ಗೀತೆಯ ತಾತ್ವಿಕ ಸಮರ್ಥನೆ . ಕೊಲೆಯಾಗುವುದು ದೇಹ ಆದರೆ ಆತ್ಮವಲ್ಲ ಎಂದು ಹೇಳುತ್ತದೆ. ಇದನ್ನು (ಒಬ್ಬ ಕೊಲೆ ಮಾಡಿದ ವ್ಯಕ್ತಿ ನ್ಯಾಯಾಲಯದ ಮುಂದೆ ತನ್ನ ಅಪರಾಧಕ್ಕೆ ಈ ನಿದರ್ಶನವನ್ನು ಕೊಟ್ಟು ಸಮರ್ಥನೆ ಮಾಡಿಕೊಂಡರೇ ನಗೆಪಾಟಲಿಗೆ ಗುರಿಯಾಗಬಹುದು,  ಬಾಲಿಶ ಎನಿಸುತ್ತದೆ.)

• ಹಿಂದೂ ಧರ್ಮವೆಂದರೆ ಅನೇಕ ನಂಬಿಕೆ ಮತ್ತು ಸಿದ್ಧಾಂತಗಳ ಒಂದು ಸಂಕೀರ್ಣ ಸಮೂಹ.

•ಯಜ್ಞವು ಕಗ್ಗೊಲೆಯನ್ನು ಒಳಗೊಂಡಿತ್ತಷ್ಟೇ ಅಲ್ಲ. ಅದೊಂದು ಸ್ವೇಚ್ಛಾ ವಿಹಾರೋತ್ಸವವಾಗಿತ್ತು.ಸುಟ್ಟ ಮಾಂಸವಲ್ಲದೆ ಮಧ್ಯವೂ ಅಲ್ಲಿರುತ್ತಿತ್ತು. ಬ್ರಾಹ್ಮಣರು ಸೋಮ ಮತ್ತು ಸುರಪಾನ ಮಾಡುತ್ತಿದ್ದರು.ಪ್ರತಿಯೊಂದು ಯಜ್ಞವು ಮುಗಿದ ನಂತರ ಜೂಜಾಟವಾಡುತ್ತಿದ್ದರು ಮತ್ತು ಇನ್ನೂ ಅಸಾಧಾರಣವಾದ ಒಂದು ಮಾತೆಂದರೆ ಇದರ ಜೊತೆಯಲ್ಲಿಯೇ ಬಯಲಿನಲ್ಲಿ ಮೈಥುನ ಸಂಭೋಗ ನಡೆಯುತ್ತಿತ್ತು. ಯಜ್ಞವೆಂದರೆ ವ್ಯಭಿಚಾರವಾಗಿತ್ತು ಮತ್ತು ಅದರಲ್ಲಿ ಧರ್ಮವೆಂಬುದು ಏನೂ ಉಳಿದಿರಲಿಲ್ಲ.

• ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್

•ಆಸ್ತಿಯ ಖಾಸಿಗೆ ಒಡೆತನದಿಂದ ಒಂದು ವರ್ಗಕ್ಕೆ ಅಧಿಕಾರವೂ, ಇನ್ನೊಂದು ವರ್ಗಕ್ಕೆ ದುಃಖವೂ ಉಂಟಾಗುತ್ತದೆ.

•ಅಷ್ಟಾಂಗ ಮಾರ್ಗ ತತ್ವವು ವರ್ಗಸಂಘರ್ಷ ಇದೆ ಎಂದು ಹಾಗೂ ಆ ವರ್ಗ  ಸಂಘರ್ಷವೇ ದುಃಖದ (ಶೋಷಣೆಯ) ಮೂಲ ಎಂದು ಗುರುತಿಸುತ್ತದೆ.

•ಸಮಾಜದ ಒಳಿತಿಗಾಗಿ ದುಃಖವನ್ನು (ಶೋಷಣೆ) ನಿರ್ಮೂಲ ಮಾಡಲು ಖಾಸಗಿ ಆಸ್ತಿಯನ್ನು ತೊಡೆದು ಹಾಕಬೇಕು.

(ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳು ಸಂಪುಟ :~೩)

Thursday, 23 July 2020

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ

ಹಿಂದೂ ಸಮಾಜ ವ್ಯವಸ್ಥೆಯು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಈ ಸಿದ್ಧಾಂತಗಳನ್ನು ಎಷ್ಟರಮಟ್ಟಿಗೆ ಗೌರವಿಸುತ್ತದೆ..?

ಚಲನವಲನ ಸ್ವಾತಂತ್ರ್ಯ:~ ಸೂಕ್ತ ನ್ಯಾಯಾಂಗ ಕ್ರಮವಿಲ್ಲದೆ ವ್ಯಕ್ತಿಯನ್ನು ಬಂಧಿಸುವಂತಿಲ್ಲ.

ವಾಕ್ ಸ್ವಾತಂತ್ರ್ಯ ~ ಆಲೋಚನೆ, ಓದು ಬರಹ, ಚರ್ಚೆ ಇವುಗಳ ಸ್ವಾತಂತ್ರ್ಯ ಇದರಲ್ಲಿ ಸೇರುತ್ತದೆ

ಕ್ರಿಯಾ ಸ್ವಾತಂತ್ರ್ಯ:~ ತನಗೆ ಇಷ್ಟ ಬಂದ ಕೆಲಸಮಾಡಲು ವ್ಯಕ್ತಿಗೆ ಅವಕಾಶವಿರುವುದು.



•ವರ್ಣ ಜಾತಿಯ ಮೂಲ.

•ಮನು ಗುಲಾಮ ಪದ್ಧತಿಯನ್ನು ಒಪ್ಪಿಕೊಂಡಿದ್ದಾನೆ. ಅದನ್ನು ಶೂದ್ರರಿ (ಸ್ತ್ರೀ)ಗೆ  ಮಾತ್ರ ಸೀಮಿತಗೊಳಿಸಿದ್ದಾನೆ.

•ಉದ್ಯೋಗ ಸ್ವಾತಂತ್ರ ಹಾಗೂ ಶಿಕ್ಷಣದ ಸಮಾನತೆಯ ಹಕ್ಕನ್ನು ಹಿಂದೂಧರ್ಮ ನಿರಾಕರಿಸುತ್ತದೆ.

•ಸಹಪಂಕ್ತಿಭೋಜನ (ಪಕ್ಕಾ -ಕಚ್ಚಾ ಆಹಾರ) ಹಾಗೂ ವಿವಾಹ ಪದ್ಧತಿ (ಭಿನ್ನಗೋತ್ರ , ಅಂತರ್ಜಾತಿ ವಿವಾಹಕ್ಕೆ ವಿರೋಧ) ಇವು ಧಾರ್ಮಿಕತೆಯ ಹೆಸರಿನಲ್ಲಿ ಜಾತಿ ರಾಜಕಾರಣ ಮಾಡುತ್ತಾ ಅಸಮಾನತೆಯನ್ನು ಪ್ರತಿನಿಧಿಸುತ್ತದೆ.

•ಇಂತಹ ಭಾವನೆಗಳ ಮೇಲೆ ಆಧಾರಿತವಾಗಿರುವ ಸಮಾಜವ್ಯವಸ್ಥೆಯಲ್ಲಿ ಸೋದರಿಕೆ ಎನ್ನುವುದು ಹೇಗೆತಾನೆ ಇರಲು ಸಾಧ್ಯ.? ಜಾತಿಗಳ ನಡುವಣ ಸಂಬಂಧ ಸೋದರತ್ವದ ಭಾವನೆಯಿಂದ ನಡೆಯುವುದು ಬಹುದೂರವೇ ಉಳಿಯಿತು. ವಾಸ್ತವವಾಗಿ ಅದು ಭ್ರಾತೃಘಾತಕವಾಗಿದೆ.

•ಹಿಂದೂ ಸಮಾಜ ವ್ಯವಸ್ಥೆಯು ಶ್ರೇಣಿಕೃತ ಅಸಮಾನತೆ ಮೇಲೆ ಆಧರಿಸಿದೆ ಹಾಗೂ ಪ್ರತಿಯೊಂದು ವರ್ಗದ ವೃತ್ತಿಗಳನ್ನು ನಿಗದಿಗೊಳಿಸಿ ಅವರು ವಂಶಪರಂಪರೆಯಾಗಿ ಅದೇ ವೃತ್ತಿಯನ್ನು ನಿರ್ವಹಿಸಿಕೊಂಡು ಹೋಗುತ್ತಿರಬೇಕೆಂದು ಕಡ್ಡಾಯ ಪಡಿಸಿರುವುದು. 
ವ್ಯಕ್ತಿಯ ಸೃಜನಶೀಲತೆ, ವೈಜ್ಞಾನಿಕ ಸಂಶೋಧನೆಗೆ  ಹಾಗು ದೇಶದ ಆರ್ಥಿಕ ಬೆಳವಣಿಗೆ ಕುಂಠಿತವಾಗಿ ಮಾರಕವಾಗಿ ಪರಿಣಮಿಸಿದೆ. ಬಹು ಸಂಖ್ಯಾತರಿರುವ ಭಾರತದಲ್ಲಿ ಅತಿಹೆಚ್ಚು ಸಂಪತ್ತು ಅಲ್ಪಸಂಖ್ಯಾತ(ಬ್ರಾಹ್ಮಣ, ಮೇಲ್ವರ್ಗ)ರಲ್ಲಿ ಸಂಗ್ರಹವಾಗಿದೆ.

ಆರ್ಥಿಕತೆಯ ಅಸಮರ್ಪಕ ಹಂಚಿಕೆ ಹಾಗೂ ಕ್ರೋಡೀಕರಣವೇ ಬಹುಸಂಖ್ಯಾತರ ದುಃಖಕ್ಕೆ (ಶೋಷಣೆ) ಕಾರಣವಾಗಿ. 

Saturday, 23 May 2020

ನಾನು ಕೊಂದ ಹುಡುಗಿ

ನಾನು ಕೊಂದ ಹುಡುಗಿ’ ಅಜ್ಜಂಪುರ ಸೀತಾರಾಮಯ್ಯನವರು ‘ಆನಂದ’ ಎನ್ನುವ ಕಾವ್ಯನಾಮದಲ್ಲಿ ಬರೆದ ಒಂದು ಸಣ್ಣ ಕತೆ. ನನ್ನನ್ನು ಬಹಳ ಗಾಢವಾಗಿ ಕಾಡಿದ ಕತೆ ಅದು.

ಪ್ರಾಚೀನ ದೇವಸ್ಥಾನದ ಶಿಲ್ಪಕಲೆಗಳನ್ನು ಅಧ್ಯಯನ ಮಾಡುವ ಒಬ್ಬ ಸಂಶೋಧಕ ಇರುತ್ತಾನೆ. ಊರಿಂದ ಊರಿಗೆ ಪ್ರಾಚೀನ ಚಿಲ್ಪ ಕಲೆಗಳ ಬಗೆ ಅಧ್ಯಯನ ಮಾಡುತ್ತಾ ಹೋಗ್ತಾ ಇದ್ದೋನು ಅವನು. ಒಂದು ಸಣ್ಣ,ಪುಟ್ಟ ಹಳ್ಳೀಲಿ ಒಂದೆರಡು ದಿನದ ಮಟ್ಟಿಗೆ ಉಳಿಯಬೇಕಾಗುತ್ತದೆ. ಆ ಹಳ್ಳಿಯ ದೊಡ್ಡ ಮನುಷ್ಯರೊಬ್ಬರು ತಮ್ಮ ಮನೆಯಲ್ಲಿ ಅವನಿಗೆ ಆತಿಥ್ಯ ನೀಡುತ್ತಾರೆ. ಅಂದು ಸಂಜೆ ಹಳಿಯ ಒಬ್ಬ ದೊಡ್ಡ ಮನುಷ್ಯರೊಬ್ಬರ ಮನೆಯಲ್ಲಿ ಊಟಕ್ಕೆ ಕೂತಾಗ, ಗೆಜ್ಜೆ ಸದ್ದಿನ ಹೆಜ್ಜೆಯನಿಡುತ್ತಾ…

ಸುಂದರ ಹೆಣ್ಣುಮಗಳೊಬ್ಬಳು ನಾಚುತ್ತಲೇ ಬಂದು ಊಟ ಬಡಿಸಿ ಹೋಗುತ್ತಾಳೆ. ಆನಂತರ ಮನೆಯ ಹಿಂದಿನ ತೋಟದಲ್ಲಿ ನಡೆಯುತ್ತ ಇರುವಾಗ, ಆ ಸುಂದರ ಹೆಣ್ಣುಮಗಳು ಯಾರೆಂದು ಆ ಮನೆಯ ಕೆಲಸಗಾರನನ್ನು ವಿಚಾರಿಸುತ್ತಾನೆ. ‘ಅವಳು ನಮ್ಮ ಯಜಮಾನ್ರ ಮಗಳು, ಯಾಕೆ ಸ್ವಾಮಿ’ ಎಂದು ಇವನನ್ನು ಅನುಮಾನಿಸುತ್ತಾ ಉತ್ತರಿಸುತ್ತಾನೆ ಮನೆಯ ಕೆಲಸಗಾರ.

ತಾನು ಮುಗ್ಧವಾಗಿ ಕೇಳಿದ್ದನ್ನು ಕೆಲಸಗಾರನು ತನ್ನನ್ನು ಅಪಾರ್ಥ ಮಾಡಿಕೊಂಡನಲ್ಲ ಎಂದು ಕಸಿವಿಸಿಗೊಳ್ಳುತ್ತಲೇ, ತನ್ನ ಕೋಣೆಯನ್ನು ಸೇರಿ ತನ್ನ ಹೆಂಡತಿಗೆ ಈ ಬಗ್ಗೆ ಕಾಗದ ಪತ್ರ ಬರೆಯುವಾಗ ಯಾರೋ ಒಬ್ಬರು ಬಾಗಿಲು ತಟ್ಟಿದಂತಾಗುತ್ತದೆ.

ಬಾಗಿಲು ತೆಗೆದರೆ ಆಶ್ಚರ್ಯ. ಮದುವಣಗಿತ್ತಿಯಂತೆ ಅಲಂಕಾರ ಮಾಡಿಕೊಂಡು ಕೈಯಲ್ಲಿ ಹಾಲಿನ ಲೋಟ, ತಾಂಬೂಲ ಹಿಡಿದು ಒಳಗೆ ಬಂದವಳು ಆ ಸುಂದರ ಹೆಣ್ಣುಮಗಳು..! ಕೋಣೆಯ ಒಳಗೆ ಬಂದು ಬಾಗಿಲ ಚಿಲಕ ಹಾಕುತ್ತಾಳೆ.

ಏನೂ ಅರ್ಥವಾಗದೆ ನೋಡುತ್ತಿದ್ದವನಿಗೆ- ‘ನೀವು, ನನ್ನ ಬಗ್ಗೆ ವಿಚಾರಿಸಿದರಂತೆ. ಹೌದಾ ಎಂದು ಕೇಳುತ್ತಾಳೆ! ನಿನ್ನ ಬಗೆ ಅವರು ವಿಚಾರಿಸಿದ್ದಾರೆ ಹೋಗಿ ಅವರನ್ನ ನೋಡ್ಕೋ ಅಂತ ನನ್ನ ಅಪ್ಪ ನಿಮ್ಮ ಬಳಿಗೆ ನನ್ನನ್ನು ಕಳುಹಿಸಿಕೊಟ್ಟರು ಎನ್ನುತ್ತಾ ಮಂಚದ ಮೇಲೆ ಹೋಗಿ ಕೂರುತ್ತಾಳೆ.

ಯಾರು ತಪ್ಪು ತಿಳಿಯಬೇಡಿ! ವಿಷಯ ಇಷ್ಟೇ, ಆ ಊರಿನ ದೊಡ್ಡ ಮನುಷ್ಯರ ಮೊದಲ ಮಗಳಿವಳು. ದೊಡ್ಡ ಮನುಷ್ಯರಿಗೆ ಬಹಳ ವರ್ಷಗಳವರೆಗೆ ಗಂಡು ಸಂತಾನದ ಭಾಗ್ಯವಿರಲಿಲ್ಲ. ತನಗೆ ವಂಶೋದ್ಧಾರಕ ಮಗ ಹುಟ್ಟುತ್ತಿಲ್ಲ ಎನ್ನುವ ಆತಂಕದಲ್ಲಿ, ‘ಮುಂದೆ ನನಗೆ ಒಂದು ಗಂಡು ಮಗುವಾದರೆ ಇವಳನ್ನು ನಿನ್ನ ಸೇವೆಗೆ(ದೇವರ ಸೇವೆಗೆ) ಮೀಸಲಿಡುತ್ತೇನೆ’ ಎಂದು ಹರಕೆ ಹೊತ್ತ ಆ ದೊಡ್ಡ ಮನುಷ್ಯನಿಗೆ ಮುಂದೆ ಒಂದು ಗಂಡು ಮಗುವಾಗುತ್ತದೆ.

ತಾನು ಹೊತ್ತ ದೇವರ ಹರಕೆಯಂತೆ ಇವಳು, ಬರುವ,ಹೋಗುವ ಅತಿಥಿಗಳನ್ನು ಸತ್ಕರಿಸುವ ದೇವರ ದಾಸಿಯಾಗಿದ್ದಾಳೆ.! ಹೀಗೆ ತನ್ನನ್ನು ಬಯಸುವ ಅತಿಥಿಗಳನ್ನು ಸತ್ಕರಿಸುವ ದೇವದಾಸಿಯಾಗುವುದೇ ತನ್ನ ಬದುಕಿನ ಪುಣ್ಯ, ಸಾರ್ಥಕ್ಯವೆಂದು ಗಾಢವಾಗಿ ನಂಬಿ ಅವಳು ಬದುಕುತ್ತಿದ್ದಾಳೆ,ಆ ಮುಗ್ಧ ಸುಂದರ ಹೆಣ್ಣುಮಗಳು.!

ಇಂಥ ಕ್ರೂರ ಮೂಢನಂಬಿಕೆಯನ್ನು ಕಂಡು ತತ್ತರಿಸಿ ನಡುಗಿ ಹೋದ ಅವನು, ಆಕೆಯನ್ನು ತನ್ನ ಪಕ್ಕ ಕೂರಿಸಿ, ‘ನೀನು ನಂಬಿರುವುದು ತಪ್ಪು.ಇದು ನಿನ್ನ, ನಿನ್ನ ತಂದೆಯ ಮೂಢನಂಬಿಕೆ,ನೀನು ಮಾಡುತ್ತಿರುವುದು ದೇವರ ಸೇವೆ,ಸತ್ಕಾರವಲ್ಲ. ಅದು ಪರೋಕ್ಷ ವ್ಯಭಿಚಾರ ಎಂದು ಆ ಸುಂದರ ಮನಸಿನ, ಸುಂದರ ಹೆಣ್ಣುಮಗಳಿಗೆ ತಿಳಿಸಿ ಹೇಳಿದನು. ಈ ಮೂಢನಂಬಿಕೆಯಿಂದ ನೀನು ಇಂದೇ ಹೊರಗೆ ಬಾ’ ಎಂದು ಬೈದು,ಅವಳಿಗೆ ತಿಳುವಳಿಕೆ,ಅರಿವು ನೀಡಿ ಕಳುಹಿಸುತ್ತಾನೆ. ತಾನು ನಂಬಿದ್ದ ಪ್ರಪಂಚವೇ ಕುಸಿದು ಬಿದ್ದಂತಾಗಿ ಅಳುತ್ತಲೇ ಅವಳು ಅಲ್ಲಿಂದ ತಲೆ ತಗ್ಗಿಸಿ ಓಡಿಹೋಗುತ್ತಾಳೆ.

ಮಾರನೆಯ ದಿನ ಬೆಳಿಗ್ಗೆ ತೋಟದ ಬಾವಿಯಲ್ಲಿ ಆ ಸುಂದರ ಹುಡುಗಿಯ ಹೆಣ ತೇಲುತ್ತಿರುತ್ತದೆ.! ಬದುಕಲು ಇದ್ದ ಕಾರಣವನ್ನು ಸಹ ಕಳೆದುಕೊಂಡ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.! ‘ಅವಳ ಸಾವಿಗೆ ಕಾರಣ ಯಾರು? ಅವಳು ನಂಬಿದ್ದ (ಮೂಢ)ನಂಬಿಕೆಯನ್ನು ಛಿದ್ರಗೊಳಿಸಿ, ಬೇರೊಂದು ನಂಬಿಕೆಯನ್ನು ಕೊಡಲಾಗದೆ, ನಾನೇ ಅವಳನ್ನು ಕೊಂದೆನೇ’ ಎನ್ನುವ ಪಾಪಪ್ರಜ್ಞೆ ,ಪ್ರಶ್ನೆ ಅವನನ್ನು ಕಾಡತೊಡಗುವಲ್ಲಿಗೆ ‘ನಾನು ಕೊಂದ ಹುಡುಗಿ’ ಕತೆ ಅಲ್ಲಿಗೆ ಮುಗಿಯುತ್ತದೆ.! ನಾನು ನನ್ನ ನಂಬಿಕೆಗಳನ್ನು ಇನ್ನೊಬ್ಬರ ಮೇಲೆ ಹೇರಬಾರದೆನ್ನುವುದಕ್ಕೆ ಈ ಕತೆಯೇ ಕಾರಣ. ಮತ್ತೊಂದು ಬಲವಾದ ನಂಬಿಕೆಯನ್ನು ಕೊಡಲು ಸಾಧ್ಯವಾದರೆ ಮಾತ್ರ ನಾವು ಇನ್ನೊಬ್ಬರ ನಂಬಿಕೆಯ ಮೇಲೆ ಕೈ ಇಡಬೇಕು. ಹಾಗೆ ಮಾಡಲು ಸಾಧ್ಯವಾಗದಿದ್ದರೆ ಅವರವರ ನಂಬಿಕೆಗಳೊಂದಿಗೆ ಜನ ಅವರಿಸ್ಟದಂತೆ ಬದುಕಲಿ. ಇದರಿಂದ ಲಾಭವಿಲ್ಲದಿದ್ದರೂ, ನಷ್ಟವಂತೂ ಖಂಡಿತವಾಗಿ ಇಲ್ಲ. (ಕೃಪೆ-ಪ್ರಜಾವಾಣಿ)

ನೀಲು ಕಾವ್ಯ-- ಪಿ.ಲಂಕೇಶ್



ಪ್ರೀತಿ, ಪ್ರೇಮ, ಕಾಮ, ಕಾಮನೆಗಳನ್ನು ಅವರು ಬರಿ ಪ್ರಸ್ತಾಪಿಸದೆ “ಪ್ರಸ್ತ”ಪಿಸುತ್ತಾರೆ…

ನಾವು ಪ್ರೀತಿಸುವ ವ್ಯಕ್ತಿಯಲ್ಲಿ
ತಪ್ಪು ಕಂಡು ಹಿಡಿವ ಕೆಲಸ
ಓಯಸಿಸ್’ನಲ್ಲಿ
ಹಸಿರು ಮತ್ತು ನೀರನ್ನು
ತಿರಸ್ಕರಿಸಿದಂತೆ

ಎಂದೋ ಕಂಡ ಮೋಹಕ ಹೆಣ್ಣನ್ನು
‌ನೆನೆದು ದುಗುಡಗೊಳ್ಳುವ
ಗಂಡಿನಲ್ಲಿ ಎಷ್ಟು
ಸ್ವಾರ್ಥ, ಎಷ್ಟು ಪ್ರೇಮ, ಎಷ್ಟು
ಕೇವಲ ಚಪಲ ?

ಎಂಥವನನ್ನೂ ವಾಕ್ಪಟುವನ್ನಾಗಿ
ಮಾಡುವ ಎರಡು ವಸ್ತುಗಳು
ವ್ಯಾಪಾರ ಮತ್ತು ಪ್ರೇಮ
ಎನ್ನುವುದು ಎಷ್ಟು ತಮಾಷೆ !

ವ್ಯವಹಾರ ಲೋಕದಲ್ಲಿ ಲೆಕ್ಕ
ನಿಷ್ಠೆ, ನಿಯತ್ತು ಇರುವಂತೆ
ಅನುರಾಗ ಲೋಕದಲ್ಲಿ
ಚಂಚಲತೆ, ಊಹೆ ಮತ್ತು ಕವನ
ಎಂದರೆ ನಗುವೆಯಾ ?

ಸುರಸುಂದರಿಯ ರೂಪ
ಅರಳಿದ್ದು
ನಶಿಸಿದ್ದು
ಇವೆರಡರ ನಡುವಿನ ಸೂಕ್ಷ್ಮ
ಕ್ಷಣಕ್ಕಾಗಿ ಅರಸಿ ನಿರಾಶನಾಗುವುದು
ಪ್ರೇಮಿಯ ಪರಂಪರಾಗತ ಗೋಳು

ನನ್ನ ಬದುಕಿನ ಮೂವತ್ತು ವಸಂತಗಳು
ಮೂವತ್ತು ಮುಂಗಾರು
ಬೇಸಿಗೆ
ಎಲ್ಲವನ್ನೂ ಮೀರಿ
ಚಳಿಗಾಲವೊಂದರ ನಡುರಾತ್ರಿಯ ಕನಸು
ನನಗೆ ಕಂಪನ ತರುವುದು

ಕಾಮ, ಪ್ರೇಮವ ಪ್ರತ್ಯೇಕಿಸಿ
ನೋಡಬೇಡ :
ಚುಂಬನದ ನಾಲ್ಕು ತುಟಿಗಳಿಗೆ
ಸಾಕ್ಷಿಯಾದ ಎರಡು ನಾಲಿಗೆಗಳೂ
ಸದಾ ಗೊಂದಲದ ಸ್ಥಿತಿಯಲ್ಲಿರುತ್ತವೆ

ಪರಿಚಯ ಮತ್ತು ಪ್ರತಿಭಟನೆಯ
ನಡುವೆ
ಹೇಗೋ ಗೂಡು ಕಟ್ಟುವ
ಹಕ್ಕಿ
ಪ್ರೇಮ

ನೀನು ಮೆಚ್ಚುವ ಪ್ರೇಮಿಯ
ಪುಟ್ಟ ಗುಡಿಸಲು ಅರಮನೆಯೆಂದು
ಭ್ರಮಿಸಬೇಡ :
ಎಲ್ಲ ಪ್ರೇಮದ ಹಿಂದೆಯೂ
ಒಂದು ಸೆರೆಮನೆ ಇದೆ

ಮೊನ್ನೆ ತುಂಬು ಸೀರೆ ಉಟ್ಟು
ಬಟ್ಟೆ ಗಿರಣಿಗಳಂತಿದ್ದ ಹುಡುಗಿಯರು
ಈಚೆಗೆ ಗಿರಣಿಗಳ ಮುಷ್ಕರದಲ್ಲಿ
ಭಾಗವಹಿಸಿದ್ದಕ್ಕೆ
ಬೇಸಿಗೆ ಕಾರಣವಿರಬಹುದೆ ?

Tuesday, 19 May 2020

ಅಕ್ರಮ

ಹಸಿಮಾಂಸ ಮತ್ತು ಹದ್ದುಗಳು- ಗೀತಾ ನಾಗಭೂಷಣರು (ಚಿತ್ರ)
"""'"""""''"'''''"""""'''''''''''''''''''''''"'""""'"""""""""""""""'''''''''''''''''''

ಅಕ್ರಮ ಸಂಬಂಧ ಯಾವುದು. ಇದು ಅನೈತಿಕ ವೇ..? 

ಯಾವುದನ್ನು ನಾವು ಅಕ್ರಮ ಸಂಬಂಧ ಎಂದು ವ್ಯಾಖ್ಯಾನಿಸಬಹುದು. ದೈಹಿಕವಾಗಿ ಅಥವಾ ಮಾನಸಿಕವಾಗಿ ಕೂಡುವಿಕೆಯನ್ನೋ..? ಸಮ್ಮತಿಯೊಂದಿಗೋ... ಆಮಿಷದೊಂದಿಗೆನ..?

ಬಾಡಿಗೆ ತಾಯ್ತನ , ಸ್ತನದಾಯಿನಿ ,ಲೈಂಗಿಕ ಕಾರ್ಯಕರ್ತರು ಇವರನ್ನು ನಿರುದ್ಯೋಗಿಗಳನ್ನಬೇಕೆ ಅಥವಾ ಕಾರ್ಮಿಕರನ್ನೆಬೇಕೇ.  ಅಕ್ರಮ ಸಂಬಂಧವೇ..? ಹಾಗಾದರೆ ಅಪರಾಧಿ ಯಾರು? ಯಾರನ್ನು ದೂಷಿಸಬೇಕು.

ಕೋಟೆಗಳ ಕೆಡವುತ್ತ, ತಲೆಗಳ ಉರುಳಿಸುತ್ತಾ, ಸ್ತ್ರೀಯರನ್ನು ವರಿಸುತ್ತಾರೆ  ರಾಜಸೂಯ ಯಾಗದ ಮೂಲಕ ಚಕ್ರವರ್ತಿಯಾಗಿ ಮೆರೆಯುತ್ತಾ ಚಾಲ್ತಿಯಲ್ಲಿರುವ ಶ್ರೀರಾಮಚಂದ್ರನಂತ ಆದರ್ಶ ಪುರುಷೋತ್ತಮರನ್ನು  ಏನೆಂದು ವ್ಯಾಖ್ಯಾನಿಸಬೇಕು.?


ಸಾಹಿತ್ಯದಲ್ಲಿ ಬಹುತೇಕ ಕಥೆ ಕಾದಂಬರಿ ಕಾವ್ಯಗಳಲ್ಲಿ ವಿವಾಹ ಪೂರ್ವದಲ್ಲಿ ಅಥವಾ ವಿವಾಹದ ನಂತರ ವಾಗಲಿ ಅಕ್ರಮ ಸಂಬಂಧ,ಸಂತಾನ ಎಂಬ ಅಪರಾಧ ಹೆಣ್ಣಿಗೆ ಮಾತ್ರ ಕಟ್ಟಿ ಪುರುಷ ಇದರಿಂದ ಪಲಾಯನ ಮಾಡಿದ್ದಾನೆ. (ಸತ್ಯವತಿ, ಕುಂತಿ, ಮಾದವಿ,  ದ್ರೌಪದಿ ಅಕ್ರಮ ಸಂಬಂಧದ ಮೂಲಕ ಸಂತಾನ ಪಡೆದಿದ್ದೆ..?)ಹೀಗೆ ಅನೈತಿಕ ಲೈಂಗಿಕ ಸಂಬಂಧಗಳನ್ನು ಮನುವಾದ ದಲ್ಲಿಯೂ ಹೆಣ್ಣು ಮತ್ತು ಶೂದ್ರರನ್ನು ಭೋಗದ ವಸ್ತು ಹಾಗೂ ಗುಲಾಮರಂತೆ ಬಿಂಬಿಸುತ್ತಾ ಶತಮಾನಗಳಿಂದ ಶೋಷಣೆ ಮಾಡುವ ನೈತಿಕತೆಯ ದೃಷ್ಟಿಕೋನದ ಪರಿಕಲ್ಪನೆ ಕಾಲದೇಶದ ಧರ್ಮಗಳಲ್ಲಿ ಬೇರೆ ಬೇರೆಯಾದ ನಿಲುವುಗಳನ್ನು ತಳೆದಿದೆ.

ಅಕ್ರಮ ಸಂಬಂಧಗಳ ಕುರಿತು ನೈಜ ಪರಿಕಲ್ಪನೆ ಪುರುಷಕೇಂದ್ರಿತ ನೀಲುವುಗಳ ಮುಖವಾಡ ಅನಾವರಣವಾಗುವುದು ಹೆಣ್ಣಿಗೆ ಸಾಹಿತ್ಯದ ಅಭಿವ್ಯಕ್ತಿಗೆ ಅವಕಾಶ ಸಾಧ್ಯವಾದಾಗ ಮಾತ್ರ. ಬಹುತೇಕ ಸಾಹಿತ್ಯದಲ್ಲಿ ಪುರುಷಕೇಂದ್ರಿತ ನಿಲುವುಗಳ ಆಶಯಗಳ ಹಿತಾಸಕ್ತಿ ಒಳಗೊಂಡು ತನ್ನನ್ನು ಅಪರಾಧಿ ಸ್ಥಾನದಿಂದ ಹೊರಗುಳಿದು ಒಂದು  ಸಮೂಹ , ವರ್ಗವನ್ನು ಕೀಳಿಕರಿಸಿದ್ದಾರೆ.

ಚೋಮನ ದುಡಿಯಲ್ಲಿ ಬೆಳ್ಳಿ ಒಡೆಯನ ಕೈ ಸೆರೆಯಾದುದ್ದರ ಹಿಂದೆ ಕೌಟುಂಬಿಕ ಸಾಮಾಜಿಕ ಬಡತನ ಹಸಿವು ಕಾರಣಗಳಿವೆ. ಸಂಸ್ಕಾರ ಕಾದಂಬರಿ ಪ್ರಾಣೇಶಾಚಾರ್ಯ ಪರವಾಗಿ ಸ್ವೇಚ್ಛಾಚಾರದ ಮಾತುಗಳನ್ನ ಮೈಲಿಗೆ, ಮಡಿವಂತಿಕೆ ಹೆಸರಿನಲ್ಲಿ ಹಾರುವವರು ಹೆಣ್ಣನ್ನು ದೂರಲಾಗಿದೆ. ಕುವೆಂಪು ಕಾದಂಬರಿಗಳಲ್ಲಿ ಕೆಳವರ್ಗದ ಯುವಕ ಮೇಲ್ವರ್ಗದ ಹೆಣ್ಣನ್ನು ಪ್ರೀತಿಸಿದಾಗ ಅವನ ಮೈಕಟ್ಟನ್ನು ಸೊಕ್ಕಿದ ಹೋರಿಗೆ ಹೋಲಿಸುವ ಬದಲು ಕೊಬ್ಬಿದ ಹಂದಿಗೆ ರೂಪಕಗಳನ್ನು ಬಳಸಿ ಕೀಳಾಗಿ ಬಿಂಬಿಸಲಾಗಿದೆ.

ಕೆಳವರ್ಗದ ಸ್ತ್ರೀಯರು ಮೇಲ್ವರ್ಗದ ಪುರುಷನೊಂದಿಗೆ ಸಂಬಂಧವನ್ನು ಅಕ್ರಮ ಎಂದು ಹೇಳುವುದಾದರೆ..!

ಕೆಳವರ್ಗದ ಪುರುಷ ಮೇಲ್ವರ್ಗದ ಸ್ತ್ರೀಯೊಂದಿಗೆ ಸಂಬಂಧ ಸಕ್ರಮ ಎನ್ನಬೇಕೆ..? 
ಒಂದು ವೇಳೆ ಇಬ್ಬರ ನಡುವಿನ ಅಂತರ ಮನಸ್ಸುಗಳ ಸಮ್ಮಿಲನವನ್ನು, ಸಂಪ್ರದಾಯಸ್ಥ ಕೌಟುಂಬಿಕ ಸಾಮಾಜಿಕ ಕಟ್ಟಳೆಗಳ ಬಾಹಿರ ಎಂದು ಪೋಷಕರು ಅವರ ಮರ್ಯಾದ ಹತ್ಯೆಗೆ ಸಂಚು ಮಾಡುವ .ತಮ್ಮ ಶತಮಾನದ ಸಿಟ್ಟನ್ನು ಶಮನಗೊಳಿಸಿ ಕೊಳ್ಳಲು ಗ್ರಾಮದೇವತೆ ಆಚರಣೆಯ ಭಾಗವಾಗಿ "ಕೋಣ ಕಡಿಯುವ ಪರಿಕಲ್ಪನೆ"  ಕೊಡುವಂತಹ ಸಂಪ್ರದಾಯಗಳ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಾ ವಾಸ್ತವವನ್ನು ಮರೆಮಾಚುತ್ತಾ ಅಂತರವನ್ನು ಜೀವಂತವಾಗಿರಿಸಿದೆ.

"ಕೆಳವರ್ಗದ ಪುರುಷ ಮೇಲ್ವರ್ಗದ ಸ್ತ್ರೀಯೊಂದಿಗೆ ಸಂಬಂಧ" ಇಂತಹ ಘಟನೆಗಳು ಸಾಹಿತ್ಯದಲ್ಲಿ ಚಿತ್ರಿತವಾಗಿರುವುದು ತುಂಬಾ ವಿರಳ.
ಮೇಲ್ವರ್ಗದ ಸ್ತ್ರೀಯರು ಕೆಳವರ್ಗದ ಪುರುಷರನ್ನು ಸಂಬಂಧಕ್ಕಾಗಿ ಹಾತೊರೆಯುವುದು ಹಣಕ್ಕಾಗಿ ಅಲ್ಲ .
"ಅತೃಪ್ತ ಲೈಂಗಿಕ ಬಯಕೆಗಳು ಹಿತಾಸಕ್ತಿಯ ಪೂರೈಕೆಗಾಗಿ...ಸಂತಾನಕ್ಕಾಗಿ".


ಹಸಿವು ಆಹಾರ ಮೈಥುನ ಇವು ಮಾನವನ ಪ್ರಾಣಿ ಸಹಜ ಪ್ರಕೃತಿ ಬಯಕೆಗಳು.ಸಾಮಾಜಿಕ ನೀತಿ ನಿಯಮ ನಾಗರಿಕ ಪ್ರಜ್ಞೆ, ಆಧುನಿಕ ವೈವಾಹಿಕ ಜೀವನ ಪದ್ಧತಿ ,ಕಾನೂನಿನಿಂದಾಗಿ ಸಮಾಜದ ಸ್ವಾಸ್ಥ್ಯಕ್ಕಾಗಿ ಹಲವು ನಿಯಮಗಳನ್ನು ಮಾನವ ತನಗಾಗಿ ರೂಪಿಸಿಕೊಂಡಿದ್ದಾನೆ. ನಿಯಮಬಾಹಿರವಾಗಿ ವರ್ತಿಸಿದರೆ ಕಾನೂನಿನ ಮೂಲಕ ಶಿಕ್ಷೆ ವಿಧಿಸಿ ಅವನ ಪ್ರಾಣಿ ಸಹಜ   ಪ್ರವೃತ್ತಿಗೆ ಕಡಿವಾಣ ಹಾಕಲಾಗಿದೆ. 

ಇದಕ್ಕೆ ನಿದರ್ಶನವೆಂಬಂತೆ ಪ್ರಾಚೀನ ಕಾಲದಲ್ಲಿ ವೈವಾಹಿಕ ಜೀವನ ಪದ್ಧತಿಯನ್ನು ಕಾಣಬಹುದು
"ತಾಯಿ ಎಂಬುದು ವಾಸ್ತವ; ತಂದೆ ಎಂಬುದು ನಂಬಿಕೆ"
ಇಲ್ಲಿ ಈಡಿಪಸ್ ಕಾಂಪ್ಲೆಕ್ಸ್ ಮತ್ತು ಎಲೆಕ್ಟ್ರಾ ಕಾಂಪ್ಲೆಕ್ಸ್ ಚಹರೆ ಕಾಣಬಹುದು.

ಇಂದಿನ ಆಧುನಿಕ ಜೀವನಶೈಲಿಯ ವೈವಾಹಿಕ ಪದ್ಧತಿಗಳು ಸಹ ಕೆಲವು ಬುಡಕಟ್ಟು ಅಲೆಮಾರಿ ಜನಾಂಗಗಳಲ್ಲಿ ಒಂದು ಹೆಣ್ಣನ್ನು ಇಬ್ಬರು ಪುರುಷರು ವಿವಾಹವಾಗುವುದನ್ನು ಕಾಣಬಹುದು. ಅದಕ್ಕೆ  ಆಸ್ತಿ ಆರ್ಥಿಕತೆ ಬಡತನ ಹಲವು ಕಾರಣಗಳಿವೆ.

ಸಿಗ್ಮಂಡ್ ಫ್ರಾಯ್ಡ್ ಅವರು ಮಾನವನ ಅನೈತಿಕ ಲೈಂಗಿಕ ಬಯಕೆಗಳು ಕುರಿತು "ಸುಪ್ತಾವಸ್ಥೆ, ಅರೆ ಜಾಗೃತಾವಸ್ಥೆ, ಜಾಗೃತಾವಸ್ಥೆ" ಎಂಬ ಮನಸ್ಸಿನ ಮೂರು ಪರಿಕಲ್ಪನೆಗಳನ್ನು ನೀಡಿದ್ದಾನೆ.
ಇವನ ಪ್ರಕಾರ ನೋಡುವುದಾದರೆ ಪ್ರತಿಯೊಬ್ಬ ವ್ಯಕ್ತಿಯು ಅಕ್ರಮ ಸಂಬಂಧ ಬಯಸುವವನು. ತನ್ನ ಬಯಕೆಗಳು ವಾಸ್ತವದಲ್ಲಿ ಈಡೇರದಿದ್ದಾಗ ಅವುಗಳನ್ನು ಕೆಲವು ಕನಸುಗಳ ಮೂಲಕ (ಸುಪ್ತಪ್ರಜ್ಞೆ), ಹಗಲುಗನಸುಗಳು ಮೂಲಕ (ಅರೆ ಪ್ರಜ್ಞಾವಸ್ಥೆ) 
ಕೆಲ ಸಂದರ್ಭಗಳಲ್ಲಿ ತನ್ನ ಬಯಕೆ ಪೂರೈಸಿಕೊಳ್ಳುವ ಆತುರತೆಯಲ್ಲಿ  ಅಪರಾಧಿಯಾಗುತ್ತಾನೆ. (ಜಾಗೃತಾವಸ್ಥೆಯಲ್ಲಿ ಇದ್ದರೂ ಸುಪ್ತ ಪ್ರಜ್ಞೆಯ ಪ್ರಚೋದನೆಯಿಂದಾಗಿ) . ಸಾಹಿತ್ಯದಲ್ಲಿ ತನ್ನ ಸಂವೇದನೆಗಳನ್ನು ಅಭಿವ್ಯಕ್ತಗೊಳಿಸುವುದರ ಮೂಲಕ ತನ್ನ ಬಯಕೆಗಳನ್ನು ಹತ್ತಿಕ್ಕುವ & ದಮನಗೊಳಿಸುವ ಪ್ರಯತ್ನ ಮಾಡುತ್ತಾನೆ...

ಕೆಲವು ಉದಾತ್ತ ವ್ಯಕ್ತಿಗಳು ಸಹಜವಾಗಿಯೇ ಹತ್ತಿಕ್ಕಿದ್ದಾರೆ. ಅಂತ ದುರಾಲೋಚನೆ ಭಾವಗಳ ಸೆಳೆತದಿಂದ ದೂರವುಳಿಯುತ್ತಾ ಮೋಹವನ್ನು ಗೆದ್ದು ಮೆಟ್ಟಿ ನಿಂತವರ ಸಂಖ್ಯೆ ತುಂಬ ವಿರಳ.


"ಅಕ್ರಮ ಸಂಬಂಧ" ಎಂಬ ಪರಿಕಲ್ಪನೆ ಕೇವಲ ಲೈಂಗಿಕ ದೃಷ್ಟಿಕೋನದಲ್ಲಿನ ವಿಮರ್ಶೆಗೆ ಸೀಮಿತಗೊಳಿಸಬೇಕೆ..?

ಆಧುನಿಕ ದೃಷ್ಟಿಕೋನದಲ್ಲಿ ಹೇಳುವುದಾದರೆ
ರಾಷ್ಟ್ರೀಯತೆಯ ಹೆಸರಿನಲ್ಲಿ ನೈತಿಕತೆಯ ಪರಿಕಲ್ಪನೆಯಲ್ಲಿ ಸಂಪ್ರದಾಯ ಸಂಸ್ಕೃತಿ ಧಾರ್ಮಿಕ ಆಚರಣೆಯ ಮೂಲಕ ಕೋಮುವಾದ ಭಯೋತ್ಪಾದಕತೆ ಭ್ರಷ್ಟಾಚಾರವನ್ನು ಜೀವಂತಗೊಳಿಸಿ ಚಾಲ್ತಿಯಲ್ಲಿರುವಂತೆ ಬಯಸುವ ವಿಕೃತ ಮನಸುಗಳನ್ನು "ಅಕ್ರಮ ಸಂಬಂಧದ ಸಂತಾನಗಳೆಂದೆ" ಹೇಳಬಹುದೇ..?




Tuesday, 12 May 2020

ಸಾಹಿತ್ಯ ಮತ್ತು ಮನೋವಿಜ್ಞಾನ



ಸೃಜನಶೀಲ ಪ್ರಕ್ರಿಯೆ ಮತ್ತು ಪ್ರೇರಣೆ.


ಸಿಗ್ಮಂಡ್ ಫ್ರಾಯ್ಡ್ ಪ್ರಕಾರ ವ್ಯಕ್ತಿಯ ವ್ಯಕ್ತಿತ್ವದ ಮುಖ್ಯ ರೂಪ ರೇಖೆಗಳು ಬಾಲ್ಯದಲ್ಲಿ ಆಗುವ ಅನುಭವಗಳಿಂದಲೇ ರೂಪಿಸಲ್ಪಡುತ್ತದೆ.ತದನಂತರ ಬೆಳವಣಿಗೆಯು ಬಹುಮಟ್ಟಿಗೆ ಬಾಲ್ಯದಲ್ಲಿ ಗುರುತಿಸಲ್ಪಟ್ಟಿರುವ ವ್ಯಕ್ತಿತ್ವದ ಚೌಕಟ್ಟಿನಲ್ಲಿಯೇ ನಡೆಯುತ್ತದೆ. ಬಾಲ್ಯಾವಸ್ಥೆಯಲ್ಲಿ ಮಗುವಿನ ಬೆಳವಣಿಗೆಯ ದೃಷ್ಟಿಯಿಂದ ತಂದೆ-ತಾಯಿ ಮುಖ್ಯ ಪಾತ್ರವಹಿಸುತ್ತಾರೆ. ಅಂದರೆ ಅದರ ವರ್ತನೆಯನ್ನು ನಿಯಂತ್ರಿಸುತ್ತಾರೆ.ಈ ಸನ್ನಿವೇಶದಲ್ಲಿ ಗಂಡು ಮಗು ತಾಯಿಯ ಬಗ್ಗೆ ಅಮಿತವಾದ ಪ್ರೇಮ ಹಾಗೂ ತಂದೆಯ ಬಗ್ಗೆ ದ್ವೇಷ ಬಳಸಿಕೊಳ್ಳುವ ಸಂದರ್ಭವಿದೆ. ಏಕೆಂದರೆ ತಾಯಿಯ ಅವನ್ನೆಲ್ಲ ಬಯಕೆಗಳನ್ನು ತಿರೀಸುವ ಒಂದು ನೆಲೆಯಾದರೆ ಆ ನೆಲೆಯನ್ನು ಮಗುವಿನಿಂದ ಕಸಿದುಕೊಳ್ಳುವ ಕೇಂದ್ರವಾಗಿ ತಂದೆ ಕಾಣುತ್ತಾನೆ.ಈ ಸಂದರ್ಭದ ಹಿನ್ನೆಲೆಯಲ್ಲಿ ಲೈಂಗಿಕತೆಯ ಸೋಂಕು ಇದೆ ಎನ್ನುವುದು ಸಿಗ್ಮಂಡ್ ಫ್ರಾಯ್ಡ್ ನ ವಾದ. ಹೀಗೆ ಮಗು ತಾಯಿಯನ್ನು ಪ್ರೇಮಿಸುತ್ತ, ತಂದೆಯನ್ನು ದ್ವೇಷಿಸುವ ಭಾವಗಳ ಸಮುಚ್ಛಯವೇ ಈಡಿಪಸ್ ಕಾಂಪ್ಲೆಕ್ಸ್. ಹಾಗೆಯೇ ಹೆಣ್ಣು ಮಗು ತಂದೆಯನ್ನು ಪ್ರೇಮಿಸುತ್ತಾ ತಾಯಿಯನ್ನು ದ್ವೇಷಿಸುವುದು ಎಲೆಕ್ಟ್ರಾ ಕಾಂಪ್ಲೆಕ್ಸ್.


ಈ ಎರಡು ಕಾಂಪ್ಲೆಕ್ಸ್ ಗಳು ಅನೈತಿಕ ಲೈಂಗಿಕ ಉದ್ದೇಶಗಳ ಹಿನ್ನೆಲೆಯಲ್ಲಿ ರೂಪಿಸಲ್ಪಡುತ್ತದೆ ಎನ್ನುವುದು ಫ್ರಾಯ್ಡ್ ನ ವಾದ.ಸಾಮಾನ್ಯವಾಗಿ ಮಗು ಬೆಳೆಯುತ್ತಾ ಈ ಕಾಂಪ್ಲೆಕ್ಸ್ ಗಳಿಂದುಂಟಾಗುವ ಕ್ಷೋಭೆಯಿಂದ ಪಾರಾಗುತ್ತಾರೆ.ಆದರೆ ಕೆಲವೊಮ್ಮೆ ಅದು ಸಾಧ್ಯವಾಗದೆ ಈಗ ಕಾಂಪ್ಲೆಕ್ಸ್ ಗಳು ಸುಪ್ತಾವಸ್ಥೆಯಲ್ಲಿ ಪ ನಿರ್ಬಂಧಿಸಲ್ಪಟ್ಟು ವ್ಯಕ್ತಿಯ ವರ್ತನೆಯನ್ನು ಬಹಳ ಗಂಭೀರವಾಗಿಯೇ ನಿಯಂತ್ರಿಸುತ್ತವೆ. ಹಲವಾರು ವಿಧಗಳಲ್ಲಿ ಕನಸಿನಲ್ಲಿ, ಹಗಲು ಕನಸಿನಲ್ಲಿ ಹಾಗೂ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಉದಾತ್ತೀಕರಣಗೊಂಡು ಸಾಹಿತ್ಯದ ರೂಪದಲ್ಲಿ ಅಭಿವ್ಯಕ್ತವಾಗುತ್ತವೆ. ಅಂದರೆ ಸೃಜನಾತ್ಮಕ ಕ್ರಿಯೆಗೆ ಪ್ರೇರಣೆಯಾಗುತ್ತದೆ ಆದುದರಿಂದ ಒಂದು ಅನೈತಿಕ ಲೈಂಗಿಕ ಕಂಪ್ಲೆಕ್ಸ್ ಸೃಷ್ಟಿಕ್ರಿಯೆಗೆ ಪ್ರೇರಣೆಯಾಗಿ ಪರಿಣಮಿಸುತ್ತದೆ.

ಈಡಿಪಸ್ ಕಾಂಪ್ಲೆಕ್ಸ್ ವಿಶ್ವ ಸಾಹಿತ್ಯದಲ್ಲಿರುವ ಕೆಲವು ಅತ್ಯುತ್ತಮ ಕೃತಿಗಳಿಗೆ ಹೇಗೆ ಪ್ರೇರಕವಾಗಿ ಇರಬಹುದೆಂದು ಫ್ರಾಯ್ಡ್ ವಿವರಿಸಿದ್ದಾನೆ.ಈಡಿಪಸ್ ಕಾಂಪ್ಲೆಕ್ಸ್ ನೇರವಾಗಿ ಪ್ರಕಟವಾಗಿರುವ ಗ್ರೀಕ್ ನಾಟಕಕಾರರ ಸೋಪೋಕ್ಲಿಸ್ ನ "ಈಡಿಪಸ್ ರೆಕ್ಸ್" ನಾಟಕವನ್ನು ವಿಶ್ಲೇಷಿಸಿದ್ದಾನೆ. ಈ  ನಾಟಕದ ದುರಂತ ನಾಯಕ ಈಡಿಪಸ್ ಥೀಬ್ಸ್ ದೇಶದ ದೊರೆಯಾದ ಲೇಯಸ್ ಮತ್ತು ಅವನ ರಾಣಿ ಜೊಕಾಸ್ತರ ಮಗ. ಈಡಿಪಸ್ ಅವನ ತಂದೆಯನ್ನು ಕೊಂದು ತಾಯಿಯನ್ನು ಮದುವೆಯಾಗುತ್ತಾನೆಂದು, ಅವನು ಹುಟ್ಟಿದಾಗ ಅರೇಕಲ್  ಭವಿಷ್ಯ ನುಡಿಯುತ್ತದೆ.ಕಥೆ ಬೆಳೆದ ಹಾಗೆ ಸಂದರ್ಭಗಳು ಬೆಳೆದು ಇಡಿಪಸ್ ತಂದೆಯನ್ನು ಕೊಂದು ತಾಯಿಯನ್ನು ಮದುವೆಯಾಗಿ ಮಕ್ಕಳನ್ನು ಪಡೆಯುತ್ತಾನೆ. ನಿಜ ವಿಷಯ ತಿಳಿದಾಗ ತನ್ನ ಕಣ್ಣುಗಳನ್ನು ಕಿತ್ತು ಹಾಕಿಕೊಂಡು ದೇಶ ಬಿಟ್ಟು ತೊಲಗು ತಾನೆ.

ಹಾಗೆಯೇ "ದೋಸ್ತೋವಸ್ಕಿ"ಯ 'ಬ್ರದರ್ಸ್ ಕರಮಜಾವ್' ಕಾದಂಬರಿಯನ್ನು ವಿಶ್ಲೇಷಿಸಿ ದೋಸ್ತೋವಸ್ಕಿಗೆ ಪಿತೃಹತ್ಯೆ ಕಾಂಪ್ಲೆಕ್ಸ್ ಅವನ ವ್ಯಕ್ತಿತ್ವದಲ್ಲಿ  ಬಹಳ ಬಲವಾಗಿತ್ತು ಎಂದು ಹೇಳುತ್ತಾನೆ. ಬ್ರದರ್ಸ್ ಕರಮಜಾವ್ ನಲ್ಲಿರುವ ದಿಮಿತ್ರಿ ಪಾತ್ರ ದೋಸ್ತೋವಸ್ಕಿಗೆ ಇದ್ದ ಮೂರ್ಛೆ ರೋಗವನ್ನು ಪಡೆದಿದ್ದು ತನ್ನ ತಂದೆಯನ್ನು ಕೊಲ್ಲುತ್ತಾನೆ.ಈ ಕೊಲೆಯ ರಚನೆಯಿಂದಾಗಿ ಮುಖ್ಯವಾಗಿ ದಿಮಿತ್ರಿ ಯ ಪಾತ್ರ ರಚನೆಯಿಂದಾಗಿ ದೋಸ್ತೋವಸ್ಕಿ ತನ್ನ ಮಾನಸಿಕ ದುಗುಡ ಕಡಿಮೆ ಮಾಡಿಕೊಂಡನೆಂದು ಹೇಳುತ್ತಾನೆ. ಹಾಗೆಯೇ ಅವನು ಬಹಳ ವರ್ಷಗಳಿಂದ ಈ ಕೃತಿ ರಚನೆಗಾಗಿ ಮಾನಸಿಕ ಸಿದ್ಧತೆ ನಡೆಸಿದ್ದನೆಂದು ಹೇಳುತ್ತಾನೆ.

"ಬ್ರದರ್ಸ್ ಕರಮಜಾವ್" ಬರೆಯುವುದು ದೋಸ್ತೋವಸ್ಕಿಗೆ ಉದ್ವೇಗ ನಿವಾರಣೆಯ ದೃಷ್ಟಿಯಿಂದ ಬಹಳ ಅವಶ್ಯವಾಗಿತ್ತು.ಏಕೆಂದರೆ ದೋಸ್ತೋವಸ್ಕಿಯ ತಂದೆಯ ಕೊಲೆ ಇವನ ಪಿತೃ ಹತ್ಯೆ ಪ್ರವೃತ್ತಿ ಬಹಳ ಪ್ರಬಲವಾಗಿದ್ದಾಗ ನಡೆದಿತ್ತು. ಬ್ರದರ್ಸ್ ಕರಮಜಾವ್ ದಲ್ಲಿ ದಿಮಿತ್ರಿಯನ್ನು ದೋಸ್ತೋವಸ್ಕಿ  ಸೃಷ್ಟಿಸಿದ ಬಗ್ಗೆ ಕುರಿತು ಫ್ರಾಯ್ಡ್ ಹೇಳುತ್ತಾನೆ.

ಇದೇ ಪಿತೃ ಹತ್ಯೆ ಕಾಂಪ್ಲೆಕ್ಸ್ ಸೆಕ್ಸ್ಪಿಯರ್ ನ "ಹ್ಯಾಮ್ಲೆಟ್" ನಾಟಕದಲ್ಲಿ ಪರೋಕ್ಷವಾಗಿ ಮಾರ್ಮಿಕವಾಗಿ ಅಭಿವ್ಯಕ್ತವಾಗಿದೆ ಎನ್ನುವುದು ಫ್ರಾಯ್ಡ್ ನ ಅಭಿಪ್ರಾಯ.ಅವನ ವಿಶ್ಲೇಷಣೆಯ ಪ್ರಕಾರ ಹ್ಯಾಮ್ಲೆಟ್ ತನ್ನ ತಂದೆಯನ್ನು ಕೊಂದು ಕ್ಲಾಡಿಯಸ್ ನನ್ನು ಕೊಲ್ಲುವಲ್ಲಿ ಬಹಳ ವಿಳಂಬ ಮಾಡುತ್ತಾನೆ.ಈ ವಿಳಂಬವನ್ನು ವಿವರಿಸುವಲ್ಲಿ ಫ್ರಾಯ್ಡ್ ಹ್ಯಾಮ್ಲೆಟ್ ಗೆ ತನ್ನ ತಂದೆಯನ್ನು ಕೊಲ್ಲುವ ಇಚ್ಛೆ ಸುಪ್ತಾವಸ್ಥೆಯಲ್ಲಿ ಇತ್ತು ಮತ್ತು ತನ್ನ ಇಚ್ಛೆಯನ್ನು ನೆರವೇರಿಸಿದ ಕ್ಲಾಡಿಯಸ್ ನನ್ನು ಕೊಲ್ಲುವುದು ಹೇಗೆ ಎನ್ನುವ ಪೇಚಿನಲ್ಲಿ ಸಿಕ್ಕಿರುತ್ತಾನೆನ್ನುವ ನಿಲುವು ತಾಳುತ್ತಾನೆ. ಹಾಗೂ ಈ ವಿಶ್ಲೇಷಣೆಯನ್ನು ಮುಂದುವರಿಸಿ ಅರ್ನೆಸ್ಟ್ ಜೋನ್ಸ್ ತನ್ನ "ಹ್ಯಾಮ್ಲೆಟ್ ಮತ್ತು ಇಡಿಪಸ್" ಎನ್ನುವ ಲೇಖನದಲ್ಲಿ ಹ್ಯಾಮ್ಲೆಟ್ ಮತ್ತು ಆ ಪಾತ್ರವನ್ನು ಸೃಷ್ಟಿಸಿದ ಶೇಕ್ಸ್ಪಿಯರ್ ಇಬ್ಬರು ಈಡಿಪಸ್ ಕಾಂಪ್ಲೆಕ್ಸ್ ನಿಂದ ಪ್ರೇರಿತರಾಗಿದ್ದಾರೆನ್ನುವ ಫ್ರಾಯ್ಡ್ ನ ಥೀಸಿಸ್ ಅನ್ನು ಸಮರ್ಥಿಸುವ ಆಧಾರಗಳನ್ನು ಕೊಟ್ಟಿದ್ದಾನೆ.


ಲಿಯೋನಾರ್ಡ್ ಡಾ ವಿಂಚಿಯ ಕಲೆಯನ್ನು ವಿಶ್ಲೇಷಿಸುವಾಗ ಫ್ರಾಯ್ಡ್ ನ ನಿಲುವು ಹೀಗೆಯೇ ಇದೆ; ಅವನು ಮೊನಾಲಿಸಾಳ ಚಿತ್ರ ತೆಗೆಯಬೇಕಾದರೆ ಆ ಚಿತ್ರಕ್ಕೆ ತನ್ನ ಬಾಲ್ಯಾವಸ್ಥೆಯಲ್ಲಾದ  ಕೆಲವು ಅನುಭವಗಳು (ಸುಪ್ತಾವಸ್ಥೆಯಲ್ಲಿ ಅದುಮಿಕ್ಕಲ್ಪಟ್ಟಿರುವಂತಹವು ಅವನಿಗೆ ತಾನು ಮಗುವಿದ್ದಾಗ ತನ್ನ ತಾಯಿಯ ಮೇಲೆ ಅಮಿತವಾದ ಪ್ರೇಮ ಹಾಗೂ ಅವಳ ಆಕರ್ಷಕವಾದ ನಗುವಿನಿಂದ ಅವನ ಶೈಶವಾವಸ್ಥೆಯ ಲೈಂಗಿಕ ಅಭಿಲಾಷೆಗಳು ಎಚ್ಚೆತ್ತುಕೊಳ್ಳುತ್ತಿದ್ದ ಸ್ಥಿತಿಗಳು)  ತಮ್ಮ ಪ್ರಭಾವವನ್ನು ಬೀರಿ ಮೊನಾಲಿಸ ಅತ್ಯಂತ ಆಕರ್ಷಕ ನಗುವಿನೊಡನೆ ಚಿತ್ರಿಸಲ್ಪಟ್ಟಿದ್ದಾಳೆ.

ಒಟ್ಟಿನಲ್ಲಿ ಸಿಗ್ಮಂಡ್ ಫ್ರಾಯ್ಡ್ನ ವಿಶ್ಲೇಷಣೆಯಲ್ಲಿ ಸುಪ್ತಚೇತನದ ಅತೃಪ್ತ ಆಕಾಂಕ್ಷೆಗಳು ಅನೈತಿಕ ಲೈಂಗಿಕ ಬಯಕೆಗಳು ಸಾಹಿತ್ಯಕ್ಕೆ ಪ್ರೇರಣೆಯಾಗಿವೆ ಅವು ಕೆಲಸ ಮಾಡುವ ಬಗೆಯನ್ನೂ ಸಹ ವಿಶ್ಲೇಷಿಸಿದ್ದಾನೆ.ಕಲಾಕಾರ ತನ್ನ ದೈನಂದಿನ ಬದುಕಿನಲ್ಲಿ ಯಾವುದೇ ಒಂದು ತೀವ್ರವಾದ ಅನುಭವಕ್ಕೆ ಗುರಿಯಾಗುತ್ತಾನೆ. ಅನುಭವದ ತೀವ್ರತೆಯ ಅವನ ಸುಪ್ತಾವಸ್ಥೆಯಲ್ಲಿರುವ ವಿಷಯಗಳ ಮೇಲೆ  ಆಧರಿಸಲ್ಪಟ್ಟಿದೆ. ಇಂತಹ ಅನುಭವ ಅವನ ಬಾಲ್ಯದಲ್ಲಿ ಅದುಮಿಕ್ಕಲ್ಪಟ್ಟು ಯಾವುದು ಲೈಂಗಿಕ ಆಸಕ್ತಿಯನ್ನು ಹೊಡೆದೆಬ್ಬಿಸುತ್ತದೆ. ಮಾನಸಿಕ ಕ್ಷೋಭೆ ಉಂಟಾಗುತ್ತದೆ. ಇದರಿಂದ ಉಂಟಾಗುವ ಉದ್ವೇಗದಿಂದ ಉಪಶಮನ ಹೊಂದಲು ಸುಪ್ತಾವಸ್ಥೆಯಲ್ಲಿ ಅದುಮಿಕ್ಕಲ್ಪಟ್ಟ ವಿಷಯಗಳನ್ನು ತನ್ನ ಕಲೆಯ ಮೂಲಕ ಹೊರಹಾಕುತ್ತಾನೆ. ರೂಪಾಂತರಗೊಂಡ ಬಯಕೆಗಳು ಓದುಗನಗೂ ಸ್ವೀಕಾರ ರ್ಹವಾಗಿ ಕಾಣುತ್ತದೆ. ಏಕೆಂದರೆ ಓದುಗನ ಸುಪ್ತಾವಸ್ಥೆಯೂ ಹೆಚ್ಚುಕಡಿಮೆ ಕಲಾಕಾರನ ಸುಪ್ತಾವಸ್ಥೆಯಂತೆಯೇ  ಅತೃಪ್ತ ಬಯಕೆಗಳ ಆಗರ. ಆದುದರಿಂದ ಕಲೆಯ ರೂಪದಲ್ಲಿ ಹೊರಬಂದ ಈ ಅನೈತಿಕ ಲೈಂಗಿಕ ಬಯಕೆಗಳು ಓದುಗನಿಗೂ ಒಂದು ತರವಾದ ಆನಂದವನ್ನೀಯುತ್ತದೆ.ಮೇಲಾಗಿ ಓದುಗನ ದೃಷ್ಟಿಯಿಂದ ತನ್ನ ಸುಪ್ತಾವಸ್ಥೆಯನ್ನು  ಬೇರೆಯವನು ಅಂದರೆ ಕಲಾಕಾರ ಹೊರುಗಿಡುತ್ತಿರುವುದರಿಂದ ಮಾನಸಿಕ ಕ್ಷೋಭೆ ಅಥವಾ ಭಯ ಇರುವುದಿಲ್ಲ. ಒಂದು ವಿಧವಾಗಿ ತನ್ನ ಸುತ್ತ ವಸ್ಥೆಯ ಬಯಕೆಗಳನ್ನು ಓದುಗ ತನ್ನದೆಂದು ಒಪ್ಪಿಕೊಳ್ಳಬೇಕು ಕಲೆಯನ್ನು ಆಸ್ವಾದಿಸುವುದರ ಮೂಲಕ ತೀರಿಸಿಕೊಳ್ಳುತ್ತಾನೆ. ಆದುದರಿಂದ ಸಾಹಿತ್ಯ ಅವನಿಗೆ ಬಹಳ ಇಷ್ಟವಾಗುತ್ತದೆ.


ಗ್ರಾಮದೇವತೆಗಳು


ಡಾ. ಸಿದ್ದಲಿಂಗಯ್ಯ ಅವರು ಪಿ.ಎಚ್. ಡಿ ಪದವಿಗಾಗಿ ಬರೆದ ಸಂಶೋಧನ ಪ್ರಬಂಧ "ಗ್ರಾಮದೇವತೆಗಳು" ಜಾನಪದೀಯ ಅಧ್ಯಯನ‌.

"ಗ್ರಾಮದೇವತೆಗಳ ಪರಿಕಲ್ಪನೆ" ಎಂಬ ಎರಡನೇ ಅಧ್ಯಯನದಲ್ಲಿನ ಕೆಲವು ಪ್ರಮುಖ ಅಂಶಗಳು.

✓  ಜೀಗನ್ ಬಾಲ್ಗ್ 
ಕೆಳ ಜಾತಿ ವರ್ಗಗಳ ದೇವತೆಗಳ ಬಗೆಗಿನ ಬಾಲಿಶ ನಂಬಿಕೆಗಳು ಕ್ರೂರವಾದ ಆಚರಣೆಗಳನ್ನು ಬಯಲುಮಾಡಿ ಈ ಜನ ವರ್ಗಗಳನ್ನು ಮತಾಂತರಗೊಳಿಸುವುದು ಅಧ್ಯಯನದ ಒಂದು ಉದ್ದೇಶವಾದರೆ. ಇಲ್ಲಿಯ ಜನಪದರ ದೇವತೆಗಳನ್ನು ಯುರೋಪಿಯನ್ನರಿಗೆ ಪರಿಚಯಿಸುವುದು ಇನ್ನೊಂದು ಉದ್ದೇಶ.
ಶಿಷ್ಟ ವರ್ಗದ ಜನ ಗ್ರಾಮದೇವತೆಗಳನ್ನು ಅಂದು ಕ್ಷುದ್ರ ದೇವತೆಗಳೆಂದು ಭಾವಿಸಿದ್ದರು.

✓  ಮಿಲ್ಟರ್ ಥಿಯೋಡಾರ್ ಎಲ್ಮೋರ್ "ಆಧುನಿಕ ಹಿಂದೂ ಧರ್ಮದಲ್ಲಿ ದ್ರಾವಿಡ ದೇವತೆಗಳು"

ಇದುವರೆಗೆ ಹಿಂದೂ ಧರ್ಮದ ಅಧ್ಯಯನದಲ್ಲಿ 80 ಭಾಗ ದೇವತೆಗಳನ್ನು ಕಡೆಗಣಿಸಲಾಗಿದೆ.ಇವುಗಳ ಬಗ್ಗೆ ಚರ್ಚೆ ಒಂದು ಅಥವಾ ಎರಡು ಪುಟ ಇದ್ದರೆ ಅದೇ ಹೆಚ್ಚು ಆದರೆ ವೈದಿಕ ದೇವತೆಗಳ ಚರ್ಚೆಗೆ ವಿಶೇಷ ಗಮನ ಕೊಡಲಾಗಿದೆ.
•ದ್ರಾವಿಡರು ಅನಕ್ಷರಸ್ಥರಾಗಿರುವುದೂ
•ಈ ಪಂಥಗಳಿಗೆ ನಿರ್ದಿಷ್ಟವಾದ ಒಬ್ಬ ಸ್ಥಾಪಕನಾದ ಪೌರಾಣಿಕ ನಾಯಕ ನಿಲ್ಲದಿರುವುದು.
•ತೌಲನಿಕ ಧರ್ಮಗಳ ವಿಭಾಗಕ್ಕೆ ಸೇರಿಸದೆ ಮನಶಾಸ್ತ್ರ ವಿಭಾಗಕ್ಕೆ ಸೇರಿಸಿದ್ದು ಕಡೆಗಣನೆಗೆ ಒಳಗಾಗಲು ಕಾರಣವಾಗಿದೆ.

✓  ಎನ್.ಎನ್ ಭಟ್ಟಾಚಾರ್ಯ ಮತ್ತು ಶ್ರೀವಾಸ್ತವ ಅವರು ಗ್ರಾಮದೇವತೆಗಳನ್ನು ಕುರಿತು ಆಳವಾಗಿ ಚಿಂತಿಸಿದ್ದಾರೆ ಇವರಿಬ್ಬರಿಗೂ ರಚಿತವಾಗಿದ್ದರೂ ಗ್ರಾಮದೇವತೆಗಳನ್ನು ಕುರಿತ ಚರ್ಚೆ ಅಲ್ಲಿ ವ್ಯಾಪಕವಾಗಿದೆ.

ಡಾ ಚೆನ್ನಣ್ಣ ವಾಲೀಕಾರರು ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳು (ಅಪ್ರಕಟಿತ) ಎಂಬ ಸಂಶೋಧನಾ ಪ್ರಬಂಧವನ್ನು ಬರೆದರು. ಇದರಲ್ಲಿ ಗ್ರಾಮದೇವತೆಯ ಆರಾಧನೆಯಿಂದ ಗ್ರಾಮ ಜೀವನದ ಮೇಲೆ ಆಗುವ ಪರಿಣಾಮಗಳು ಮತ್ತು ದುಷ್ಪರಿಣಾಮಗಳನ್ನು ಅವರು ದಾಖಲಿಸಿದ್ದಾರೆ.




✓  ಗ್ರಾಮದೇವತೆಯ ಪರಿಕಲ್ಪನೆ

ಮಾತೃದೇವತಾ ಪಂಥದ ಜನಪದ ರೂಪಗಳೇ ಗ್ರಾಮದೇವತೆಗಳು. ಭಯ-ಭಕ್ತಿ ಭೀತಿಯಿಂದ ಹುತ್ತ ರಕ್ಷಾ ಶಿಲೆಗಳನ್ನು ಆರಾಧಿಸುತ್ತಿದ್ದ ಗ್ರಾಮೀಣರು ಒಂದು ಕಾಲಘಟ್ಟದಲ್ಲಿ ಅವುಗಳಲ್ಲಿ ಗ್ರಾಮದೇವತೆಗಳನ್ನು ಕಂಡುಕೊಂಡರು. ತಮ್ಮ ಜೀವನದ ಅನುಭವದಿಂದಲೇ ಹುಟ್ಟಿದ್ದ ಪುರಾಣ ಕಥೆಗಳನ್ನು ಅವುಗಳಿಗೆ ಜೋಡಿಸಿದರು. ಅನೇಕ ಗ್ರಾಮದೇವತೆಗಳು ಅತಿ ಪ್ರಾಚೀನವಾದ ಭೂಮಿಪೂಜೆ ಅಥವಾ ಮಾತೃ ಪೂಜೆಯ ಕುರುಹುಗಳಲ್ಲದೆ ಬೇರೆಯಲ್ಲ.


ಭಾರತದಲ್ಲಿ ಕೃಷಿ ಆರ್ಥಿಕ ಚಟುವಟಿಕೆಯಾಗಿ ರೂಪುಗೊಳ್ಳುವುದರ ಜೊತೆಗೆ ಶಾಕ್ತ ಪಂಥವು ತಲೆಯೆತ್ತಿತು. ಸೆಮಿಟಿಕ್ ಜನಾಂಗದಲ್ಲಿ ಬೆಳೆದ  ಅಷ್ಟಾರ್ಟ್ ದೇವತೆಯ ಕಲ್ಪನೆ, ಈಜಿಪ್ಟ್ನಲ್ಲಿ ರೂಪಗೊಂಡ ಇಸಿನ್ ದೇವತೆಯ ಕಲ್ಪನೆ, ಫ್ರಿಜಿಯಾದಲ್ಲಿ ಸಿಬಿಲೇ ದೇವತೆಯ ಕಲ್ಪನೆ, ಭಾರತದ ಶಕ್ತಿದೇವತೆಯ ಕಲ್ಪನೆಗೆ ಸಮಾನ ಪರಿಕಲ್ಪನೆಗಳಾಗಿವೆ.
ಶಾಕ್ತ ಧರ್ಮವು ದೇವತೆಯನ್ನು ಪ್ರಪಂಚದ ಮೂಲ ಶಕ್ತಿಯ ಸಾಕಾರ ರೂಪವನ್ನು ದೈವಿಕ ಮತ್ತು ಜೈವಿಕ ಬೆಳವಣಿಗೆಯ ಮೂಲ ಶಕ್ತಿಯನ್ನಾಗಿ ಪರಿಗಣಿಸುತ್ತದೆ.
ಕೃಷಿ ಜನಾಂಗವೊಂದರ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯ ಪರಿಣಾಮವೇ ಆಗಿರಬೇಕು. ಪ್ರಾಚೀನ ಸಮಾಜಗಳಲ್ಲಿ ಮುಕ್ತ ಲೈಂಗಿಕತೆ ಇದ್ದು ಆಯಾ ಗುಂಪುಗಳ ಸ್ತ್ರೀಯರ ಮೂಲಕ ನಿಯಂತ್ರಿಸಲ್ಪಡುತ್ತಿದ್ದುದರಿಂದ ಆಗ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಜಾರಿಯಲ್ಲಿತ್ತು. ಮಕ್ಕಳಿಗೆ ಹೆತ್ತ ತಾಯಿಯನ್ನು ಮಾತ್ರ ಗುರುತಿಸಲು ಸಾಧ್ಯವಿದ್ದು ಈ ವ್ಯವಸ್ಥೆಯ ಹುಟ್ಟಿಗೆ ಕಾರಣವಿರಬೇಕು.


ಮನುಷ್ಯನ ಪ್ರಥಮ ಆರ್ಥಿಕ ಚಟುವಟಿಕೆಯಾದ ಆಹಾರ ಸಂಗ್ರಹಣೆಯ ಹಂತದಲ್ಲಿ ಸ್ತ್ರೀಪಾತ್ರ ಪ್ರಧಾನವಾಗಿತ್ತು.ಮಕ್ಕಳನ್ನು ಹೆರುವುದಲ್ಲದೆ ಅವರನ್ನು ಪಾಲನೆ ಮಾಡುವ ಮತ್ತು ಬೆಳೆಸುವ ಹೊಣೆಗಾರಿಕೆ ಅವಳದಾಗಿತ್ತು. ಸಮಾಜದ ಬೆಳವಣಿಗೆಯ ಮೊದಲ ಹಂತದಲ್ಲಿ ಸ್ತ್ರೀಮಾತ್ರ ಧರ್ಮದ ಕೇಂದ್ರಸ್ಥಾನದಲ್ಲಿ ಇದ್ದಳು. ಆಹಾರ ಸಂಗ್ರಹಣೆ ಮತ್ತು ಆಹಾರದ ಉತ್ಪಾದನೆ ಸ್ತ್ರೀಯ ಕರ್ತವ್ಯವಾಗಿದ್ದುದರಿಂದ ಸ್ತ್ರೀಯ ಸ್ಥಾನಮಾನ ಹೆಚ್ಚಿತು. ಈ ಮಾನ್ಯತೆ ಅವಳನ್ನು ದೈವತ್ವಕ್ಕೇರಿಸುವವರೆಗೆ ಹೋಯಿತು.
ಶಾಕ್ತ ಆಚಾರಗಳು ಪ್ರಧಾನವಾಗಿ ಕೃಷಿಯ ಉತ್ಪನ್ನಗಳ ಸಮೃದ್ಧಿಗಾಗಿ ಹುಟ್ಟಿಕೊಂಡಿವೆ. ಈ ಸಾಂಸ್ಕೃತಿಕ ಹಂತದಲ್ಲಿ ಆಸ್ತಿ ಹಕ್ಕು ಹೆಣ್ಣಿನ ಒಡೆತನಕ್ಕೆ ಒಳಪಟ್ಟಿದ್ದು ಕೌಟಂಬಿಕ ತಲೆಮಾರುಗಳು ಹೆಣ್ಣಿನ ಕಡೆಯಿಂದಲೇ ಗುರುತಿಸಲ್ಪಡುತ್ತಿದ್ದವು. ಕೃಷಿಯನ್ನು ಕಂಡುಹಿಡಿದಿದ್ದು ಹೆಣ್ಣು ಎಂದು ಬಹುಪಾಲು ಮನವಶಾಸ್ತ್ರಜ್ಞರು ಒಪ್ಪುತ್ತಾರೆ.ಗಂಡು ಬೇಟೆಗೆ ಹೋಗಿದ್ದಾಗ ಆಹಾರ ಸಂಗ್ರಹಣೆಯನ್ನು ಗೃಹಕೃತ್ಯವನ್ನು ನೋಡಿಕೊಳ್ಳುತ್ತಿದ್ದ ಹೆಣ್ಣು, "ಬೀಜವು ಗಿಡವಾಗುವ ಪವಾಡವನ್ನು" ಮೊದಲು ಕಂಡಳು.

ಹೆಣ್ಣಿನ ಗರ್ಭಧಾರಣೆ ಮತ್ತು ಭೂಮಿಯ ಸಸ್ಯಧಾರಣೆ ಇವೆರಡಕ್ಕೂ ಸಾಮ್ಯತೆಯನ್ನು ಕಂಡುಕೊಂಡ ಆದಿಮಾನವ ಹೆಣ್ಣು ಮತ್ತು ಭೂಮಿ ಇವೆರಡು ಪೂಜ್ಯ ವಸ್ತುಗಳೆಂದು ಭಾವಿಸಿದ. ಸಮೃದ್ಧಿಯ ಆಚರಣೆಯಾಗಿ ಮಾಟ ರೂಪುಗೊಂಡಿತು. ಇದರ ಮುಂದುವರೆದ ರೂಪವೇ ಶಾಕ್ತ ಪಂಥ.

ಈ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ರೂಪುಗೊಂಡು ಮಾತ್ರ ದೇವತೆಗಳ ಪ್ರತಿನಿಧಿಗಳಾದ ಗ್ರಾಮದೇವತೆಗಳು ಗ್ರಾಮಗಳಲ್ಲಿ ಆರಾಧನೆಗೆ ಒಳಗಾದವು.ಸಮೃದ್ಧಿ ಆಚರಣೆಗಳೆಲ್ಲಾ ಸ್ತ್ರೀ ಸಂಬಂಧಿ ಆಚರಣೆಗಳಾಗಿದ್ದರಿಂದ ಅನೇಕ ಸಂಸ್ಕೃತಿಗಳಲ್ಲಿ ಗಂಡಿಗೆ ಆಚರಣೆಯನ್ನು, ಆಚರಣೆಯ ಸ್ಥಳಕ್ಕೆ ಪ್ರವೇಶವನ್ನು ನಿರಾಕರಿಸಲಾಗಿದೆ.ಈ ತೊಡಕನ್ನು ನಿವಾರಿಸಲು ಈ ಗಂಡು ಪೂಜಾರಿಯು ಸ್ತ್ರೀವೇಷಧಾರಿ ಆಗುತ್ತಾನೆ.ಬೆಂಗಳೂರು ಕರಗ ದೇವತೆಯ ಉತ್ಸವದ ಸಂದರ್ಭದಲ್ಲಿ ಅರ್ಚಕ ನಾದವನು ಸ್ತ್ರೀವೇಷ ದಾರಿಯಾಗುತ್ತಾನೆ. ಮೂಲದಲ್ಲಿ ಕರಗ'ದ ಉತ್ಸವ ಸಮೃದ್ಧಿಯ ಆಚರಣೆಯಾಗಿ ಇರುವುದೇ ಇದಕ್ಕೆ ಕಾರಣವಾಗಿದೆ.


ಆದಿಮಾನವನ ಮನಸ್ಸಿನಲ್ಲಿ ಹೆಣ್ಣು ಮತ್ತು ಪ್ರಾಣಿ ಎರಡು ಸಂಗತಿಗಳು ವಿಶೇಷವಾದ ಆಸಕ್ತಿಯನ್ನು ಕೆರಳಿಸಿದವು.ಲೈಂಗಿಕ ಸಂತೋಷದ ಮೂಲಾಧಾರ ವಾದ್ದರಿಂದ ಹೆಣ್ಣಿನ ಬಗ್ಗೆಯೂ, ಆಹಾರ ಮೂಲವಾದ್ದರಿಂದ ಪ್ರಾಣಿಗಳ ಬಗ್ಗೆಯೂ ಆದಿಮಾನವ ನಲ್ಲಿ ಕುತೂಹಲ ಬಂದಿರಬೇಕು.
ಹೆಣ್ಣನ್ನು ಚಿತ್ರಿಸುವಾಗ ಆಕೆಯ ಸ್ತನಗಳನ್ನು, ಜಘನಗಳನ್ನೂ ಪ್ರಧಾನವಾಗಿ ಚಿತ್ರೀಕರಿಸಲಾಗಿದೆ. ಹೀಗೆ ಸ್ತ್ರೀಯರು ಆರಂಭದ ಕೃಷಿಕರು ಆದರೆ, ಪುರುಷರು ಆರಂಭದ ಕಲಾಕಾರರಾಗಿದ್ದಾರೆ.

ಸಸ್ಯವು ಬೆಳೆಯಲು ಕಾರಣವಾಗುವ ಬೀಜದ ಪಾತ್ರವನ್ನು ಮಾನವನ ಅರಿತಿರಲಿಲ್ಲ. ಹಾಗೆಯೇ ಮಗುವಿನ ಸೃಷ್ಟಿಗೆ ಕಾರಣವಾಗುವ ಪುರುಷನ ಪಾತ್ರವೂ ತಿಳಿದಿರಲಿಲ್ಲ. ಆದ್ದರಿಂದ ಸೃಷ್ಟಿಕಾರ್ಯ ಹೆಣ್ಣು ಮತ್ತು ಭೂಮಿಯಿಂದ ಮಾತ್ರ ಸಾಧ್ಯ ಎಂದು ಭಾವಿಸಲಾಗಿತ್ತು.ಮನುಷ್ಯನ ಈ ಭಾವನೆ ಸ್ತ್ರೀ ಆರಾಧನೆಗೆ ದಾರಿಮಾಡಿಕೊಟ್ಟಿತು.

ಹರಪ್ಪ ಸಂಸ್ಕೃತಿಯಲ್ಲಿ ಒಂದು ಕುತೂಹಲಕರವಾದ ಮುದ್ರೆ ಸಿಕ್ಕಿದ್ದು ಇದು ಕೃಷಿ ದೃಶ್ಯಕ್ಕೆ ಸಂಬಂಧಿಸಿದ್ದಾಗಿದೆ.ಈ ಮುದ್ರಿಕೆಯಲ್ಲಿ ಒಂದು ಸ್ತ್ರೀ ವಿಗ್ರಹವಿದ್ದು ಆಕೆಯ ಗರ್ಭದಿಂದ ಒಂದು ಸಸ್ಯವು ಹುಟ್ಟುತ್ತಿರುವಂತೆ ಚಿತ್ರಿಸಲಾಗಿದೆ. ಇದರ ಇನ್ನೊಂದು ಬದಿಯಲ್ಲಿ ಸ್ತ್ರೀ-ಪುರುಷರ ಚಿತ್ರಗಳಿವೆ.ಒಬ್ಬ ಮನುಷ್ಯನು ನೇಗಿಲಿನ ಅಂತ ಆಯುಧವನ್ನು ಹಿಡಿದಿದ್ದಾನೆ. ಈ ಚಿತ್ರದಲ್ಲಿರುವ ಮನುಷ್ಯ ಉಳುಮೆ ಮಾಡುವ ರೈತ  ಎಂದು ಭಾವಿಸಲಾಗಿದೆ. ಗರ್ಭದಿಂದ ಸಸ್ಯವು ಹೊಮ್ಮುತ್ತಿರುವ ಸ್ತ್ರೀಚಿತ್ರವನ್ನು ಮಾತೃದೇವತೆ ಎಂದು ಹೇಳಲಾಗಿದೆ ‌. ಈಕೆಯನ್ನು ಶಾಕಂಬರಿ ಎಂದು ಗುರುತಿಸುತ್ತಾರೆ.

ಭೂಮಿಯನ್ನು ಸ್ತ್ರೀಯರೊಡನೆ ಹೋಲಿಸುವುದನ್ನು ಸಂಸ್ಕೃತಿಯ ಬೇರೆ ಬೇರೆ ಹಂತದ ಚಿಂತನೆಯಲ್ಲಿ ಕಾಣಬಹುದು. ರೋಮನ್ ಕಾನೂನಿನ ಪ್ರಕಾರ ತಾಯಿ ಮತ್ತು ಮಣ್ಣು ಸಮಾನರು.ಪ್ರಾಚೀನ ಭಾರತದಲ್ಲಿ ಮದುವೆಯ ಆಚರಣೆಯಲ್ಲಿ "ಸ್ತ್ರೀಯನ್ನು ಬೀಜ ಬಿತ್ತುವ ಹೊಲ"ವೆಂದು ಕರೆಯಲಾಗುತ್ತಿತ್ತು ಮತ್ತು ಅರ್ಚಕನು ಮದುಮಗನಿಗೆ "ಅವಳ ಮೇಲೆ ನಿನ್ನ ಬೀಜವನ್ನು ಬಿತ್ತು" ಎಂದು ಹಾರೈಸುತ್ತಿದ್ದನು. ಕುರಾನಿನ ಪ್ರಕಾರ "ನಿಮ್ಮ ಹೆಂಗಸರು ನಿಮ್ಮ ಹೊಲ" ತಾಯಿಯ ಗರ್ಭ ಒಂದೇ ವಸ್ತುವಿನ ಎರಡು ರೂಪಗಳಾಗಿವೆ. "ಬೆತ್ತಲೆಯಾಗಿ ನಾನು ತಾಯಿಯ ಗರ್ಭದಿಂದ ಬಂದೆ ಬೆತ್ತಲೆಯಾಗಿ ನಾನು ಅದಕ್ಕೆ ಹಿಂತಿರುಗುವೆ". ಎಂದು ಬೈಬಲ್ ನಲ್ಲಿ ಹೇಳಲಾಗಿದೆ.


Monday, 27 April 2020

ಕುಂತಿ

"ಕಣ್ಣರಿಯದೊಡಂ ಕರುಳರಿಯದೆ..??"
ಧನುರ್ವಿದ್ಯೆ ಪ್ರದರ್ಶನ ಸಂದರ್ಭದಲ್ಲಿ ಸಭೆಯಲ್ಲಿ ನೆರೆದಿದ್ದ ಜನಸಮೂಹ  ಯಾರು ಈತನ್ ..? ಕೃಪಾಚಾರ್ಯರು ಇವನು ಶೂದ್ರನೆಂದು ನಿಂದಿಸುವಾಗ. ಕುಂತಿ, ಕರ್ಣನು ತನ್ನ ಮಗನೆಂದು ಸಭೆಯಲ್ಲಿ ಸಾರಿಹೇಳಬಹುದಾಗಿತ್ತು..! ಮದುವೆಗಿಂತ ಮೊದಲೇ ಮಗುವನ್ನು ಪಡೆಯುವುದು ಅಪಚಾರ ವೆಂಬಂತೆ ನಿರ್ಬಂಧ, ಸಾಮಾಜಿಕ ನೀತಿ, ಕಟ್ಟೆಗಳೆನಾದರೂ ಇದ್ದವೆ.?

 ಹಾಗಾದರೆ ಪಾಂಡುರಾಜನನ್ನು ನಿರ್ವಿರ್ಯ/ಶಾಪಗ್ರಸ್ತ/ಮರೆವು ಎನ್ನಬೇಕೆ..?
ಏಕೆಂದರೆ.... 
ಕುಂತಿ ದುರ್ವಾಸ ಮುನಿಯಿಂದ ಐದು ವರಗಳನ್ನು ಗಳನ್ನು ಪಡೆದಿದ್ದೇನೆ ಎಂದು ಪಾಂಡು ವಿನಲ್ಲಿ ಹೇಳಿಕೊಂಡಿದ್ದಳು.
ಆದರೆ ಮದುವೆಯ ನಂತರ ನಾಲ್ಕು ಮಂತ್ರಗಳನ್ನು ಮಾತ್ರ ಬಳಸಿದ್ದು, ಪಾಂಡುವಿಗೆ ಲೆಕ್ಕ ತಪ್ಪಿ ಹೋಯಿತೆ ಅಥವಾ ಮಾದ್ರಿಗೆ ಎರಡು ಮಕ್ಕಳು ಜನಿಸಿದ್ದರಿಂದ ವಾಸ್ತವ ಅರಿಯದ ಮತಿಭ್ರಮಣನೆನ್ನಬೇಕೆ.!? 
ನಿಯೋಗ ಪದ್ಧತಿಯ ಮೂಲಕ ಬೇರೆಯವರೊಂದಿಗೆ ಕೂಡಿ ಮಕ್ಕಳನ್ನು ಪಡೆದಳೆಂದೆ ಎನ್ನಬೇಕಾದಿತು.  ಹೀಗೆ ಎನ್ನದೇ ಬೇರೆ ದಾರಿಯೇ ಇಲ್ಲ. "ಕ್ಷೇತ್ರದಲ್ಲಿ ಬೀಜ ಬಿತ್ತದೆ ಬೆಳೆ ಸಾಧ್ಯವಿಲ್ಲ". ಮಂತ್ರಕ್ಕೆ ಮಾವಿನಕಾಯಿ ಉದುರದು.ಇದಕ್ಕೆ ಪೂರಕವೆಂಬಂತೆ ಹಿಂದೆ ಸತ್ಯವತಿಯು ತನ್ನ ಮಕ್ಕಳು ಮಡಿದಾಗ, ವಂಶದ ಕೀರ್ತಿ ಬೆಳಗಲು ಕುಡಿ ಬೇಕೆಂದು ತನ್ನ ಸೊಸೆಯ ರೊಂದಿಗೆ ಕೂಡಲು ಭೀಷ್ಮನಿಗೆ ಸಲಹೆ ನೀಡುತ್ತಾಳೆ. ಬ್ರಹ್ಮಚರ್ಯ ನಾದ ಭೀಷ್ಮ ಈ ಕಾರ್ಯದಿಂದ ಹೊರಗೂಳಿಯುತ್ತಾನೆ. ಕೊನೆಗೆ ಸತ್ಯವತಿ ತಾನು ಪರಾಶರ ಮುನಿಗಳಿಂದ ಪಡೆದಿದ್ದ ವ್ಯಾಸದ್ವೈತ್ ನನ್ನು ಕರೆತಂದು ಮಲಗಿಸಿ ಮಕ್ಕಳನ್ನು ಪಡೆದಿದ್ದು "ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಸಾಕ್ಷಿ." ಎಂದೆನಿಸುತ್ತದೆ.

ದ್ರೌಪದಿಯ ಸಂದರ್ಭ ಬಂದಾಗಲೂ. ಕುಂತಿಯಲ್ಲಿ ಪರಂಪರಾನುಗತವಾಗಿ ಬಂದ ವಂಶವಾಹಿಗಳು ಸುಪ್ತಪ್ರಜ್ಞೆಯಲ್ಲಿ ಪ್ರಚೋದನೆ ನೀಡುತ್ತಾ ಬಂದವೆನಿಸುತ್ತದೆ. ಹಾಗೂ ತಾನೂ ಅವರೊಂದಿಗೆ ಸುಖ ಪಡೆದು ಮಕ್ಕಳನ್ನೆತ್ತಿದ್ದರಿಂದಲೋ..! ಅರ್ಜುನ, ದ್ರೌಪದಿಯನ್ನು ಕರೆತಂದಾಗ ಹಣ್ಣು-ಹೆಣ್ಣು ಪಾಂಡವರೈವರು  ಸಮ ಹಂಚಿಕೊಳ್ಳಿ ಎಂದಿದ್ದು, ತನ್ನ ವೈವಾಹಿಕ ಜೀವನದ ಪೂರ್ವ ಘಟನೆಗಳು ಸುಪ್ತ ಪ್ರಜ್ಞೆಯಲ್ಲಿ ಕೆಲಸ ಮಾಡುತ್ತಿತ್ತು ಅಂತ ಹೇಳಬೇಕೆ..?.

ಅಥವಾ ಮೂಲದಲ್ಲಿ ಪುರುಷಕೇಂದ್ರಿತ ನಿಲುವುಗಳು ಹೆಣ್ಣನ್ನು ಒಂದು ಉಪಭೋಗದ ವಸ್ತುವಿನಂತೆ ಬಳಸಿಕೊಳ್ಳಲು,  ಸಂಪ್ರದಾಯ, ಸಂಸ್ಕೃತಿಯ ಹೆಸರಲ್ಲಿ ತಮ್ಮ ಬಯಕೆಗಳನ್ನು, ಆಸೆಗಳನ್ನು ಬೆರೆಸಿ, ಈಡೇರಿಸಿ ಕೊಂಡು. ಕೊನೆಗೆ ಹೆಣ್ಣನ್ನೇ ತಪ್ಪಿಸ್ಥತ್ತ ಸ್ಥಾನದಲ್ಲಿರಿಸಿದಂತೆ ಚಿತ್ರಸಿದ್ದಾರೆ ಎಂದು ಹೇಳಬೇಕೆ..!?


ಒಟ್ಟಿನಲ್ಲಿ ಕುಂತಿಯ  "ಮೌನ" ಕರ್ಣನನ್ನು ದುರಂತ ವ್ಯಕ್ತಿಯನ್ನಾಗಿ ಮಾಡಿದರೆ,   "ಮಾತು" ದ್ರೌಪದಿಯ ಬಾಳು ಹರಿದು ಹಂಚಿ... ಗೋಳಿಗೆ ಕಾರಣವಾಯಿತು.

ಬಸವರಾಜ.N


Sunday, 29 March 2020

ಕಿರು ಬಿಂದು

ನಾನು ನನ್ನದೆಂದು 
ಗರ್ವದಿಂದ ಕೊಚ್ಚಿಕೊಳ್ಳುವ 
ಮನುಜನೆ ಕೇಳಿಲ್ಲಿ

ನಾನು ಒಡೆಯ ಮಾಲಿಕ ಶ್ರೇಷ್ಠ ಎಂದು
 ಬೀಗಬೇಡ
 ಆಸ್ತಿ ಸಂಪತ್ತು ಅಧಿಕಾರ
ನೀ ಪಡೆದುಕೊಂಡಿರುವುದು ಆದರೂ 
ಎಲ್ಲಿದೆ ಎಷ್ಟಿದೆ ಹೇಗಿದೆ
ಗುರುತಿಸಿ ಹೇಳುವೆಯಾ 


ನಿನು ನಿನ್ನಂತೆ ಅವರು
ಕಟ್ಟದಿರು ಗೋಡೆ
ಬಂದಿಸದಿರು ಗೊಡ್ಡು ಸಂಪ್ರದಾಯಗಳಲ್ಲಿ
ತಳ್ಳದಿರು ದೂರ ಅಹಂಕಾರದ ಅಮಲಿನಲ್ಲಿ



ಅವನಿ ಆಕಾಶವನ್ನೇ ವಿಶಾಲವಾಗಿ 
ತಬ್ಬಿರುವ ಅಬ್ಧಿಯ ಕಿರು ಬಿಂದು ನೀನಿಲ್ಲಿ.
ಆರಡಿ  ಸುಟ್ಟರೆ ಹಿಡಿ ಬೂದಿ
ಮೂರಡಿ ಹೂತಿಟ್ಟರೆ ಹಿಡಿಮಣ್ಣು


ಮಾನವನಾಗು 
ಮನುಷ್ಯತ್ವ ಮರೆಯಾಗದಿರಲಿ...!

ಸೂಕ್ತ ಕ್ರಮ

ಹಲ್ಲೆಯಾದಾಗ ಓಣಿಯಲ್ಲಿದ್ದ ಅಲ್ಪಸಂಖ್ಯಾತರ ಪೈಕಿ ಕೆಲವರ ಹತ್ಯೆಯಾಯಿತು. ಉಳಿದವರು ಜೀವ ಉಳಿಸಿಕೊಳ್ಳಲು ಪಲಾಯನಗೈದರು. ಒಬ್ಬ ವ್ಯಕ್ತಿ ತನ್ನ ಹೆಂಡತಿ ಜೊತೆ ತನ್ನ ನಿವಾಸದ ನೆಲಮನೆಯಲ್ಲೇ ಅಡಗಿಕೊಂಡ.

ಅಡಗಿಕೊಂಡಿದ್ದ ದಂಪತಿಗಳು ಗಲಭೆಕೋರರು ಒಳಗೆ ನುಗ್ಗಿ ಬರಬಹುದೆಂದು ಎರಡು ದಿನ ಹಾಗೂ ಎರಡು ರಾತ್ರಿ ಅಡಗಿಕೊಂಡಿದ್ದರು. ಯಾರೂ ಬರಲಿಲ್ಲ.

ಮತ್ತೆ ಎರಡು ದಿನಗಳುರುಳಿದವು. ಸಾವಿನ ಭಯ ಕಡಿಮೆಯಾಗತೊಡಗಿತ್ತು. ಹಸಿವು_ನೀರಡಿಕೆ ಹೆಚ್ಚು ಬಾಧಿಸತೊಡಗಿದ್ದವು.

ಇನ್ನು ನಾಲ್ಕು ದಿನ ಕಳೆದವು. ದಂಪತಿಗಳಿಗೆ ಬೇಸರವಾಯಿತು. ಇಬ್ಬರು ಹೊರಬಂದರು.

ಗಂಡ ಗಟ್ಟಿಯಾದ ಧ್ವನಿಯಲ್ಲಿ ಜನರನ್ನು ಕೈಮಾಡಿ ಕರೆಯತೊಡಗಿದ. ಅವನ ಕರೆಗೆ ಓಗೊಟ್ಟು ಕೆಲವರು ಬಂದರು.

ನಮ್ಮಿಂದ ಇನ್ನು ಸಾಧ್ಯವಿಲ್ಲ.
ನಾವಾಗಿಯೇ_ನಿಮ್ಮ_ವಶಕ್ಕೆ_ಬರುತ್ತಿದ್ದೇವೆ... ನಮ್ಮನ್ನು ಕೊಲ್ಲಿರಿ ಎಂದು ಅವರನ್ನು ಕೇಳಿಕೊಂಡರು.

"ನಮ್ಮ_ಧರ್ಮದಲ್ಲಿ_ನರಹತ್ಯೆ_ಪಾಪ" ಎಂದ ಅವರು ಪರಸ್ಪರ ಸಮಾಲೋಚನೆ ಮಾಡಿ  ದಂಪತಿಗಳನ್ನು ಪಕ್ಕದ ಕೇರಿಯ ಜೈನ ಧರ್ಮೀಯರಲ್ಲದವರ ಕೈಗೆ ಒಪ್ಪಿಸಿದರು.... ಮುಂದಿನ_ಸೂಕ್ತ_ಕ್ರಮ_ಕೈಗೊಳ್ಳಲಿಕ್ಕಾಗಿ.

ಮಿಸ್ಟೇಕ್

ಯಾರು ನೀನು..?

ನೀನು ಯಾರು...?

ಹರ ಹರ ಮಹಾದೇವ... ಹರ ಹರ ಮಹಾದೇವ

ಪುರಾವೆ ಎಲ್ಲಿದೆ..?

ಪುರಾವೆ ನನ್ನ ಹೆಸರು ಧರ್ಮ ಚಂದ್.

ಇದು ಪುರಾವೆಯಾಗಲಾರದು.

ನಾಲ್ಕು ವೇದಗಳ ಕುರಿತಂತೆ ಬೇಕಾದ ಪ್ರಶ್ನೆ ಕೇಳಿ ನೋಡ್ರಿ.

ನಮಗೆ ವೇದಗಳು ಗೊತ್ತಿಲ್ಲ ಪುರಾವೆ ಬೇಕು.

ಏನು..?
ಪೈಜಾಮು ಸಡಿಲಿಸು.

ಪೈಜಾಮು ಕೆಳಗೆ ಜಾರಿಸಿದಾಗ ಅವರಿಗೆ ಅದು ಕಂಡದ್ದರಿಂದ ಗೊಂದಲವಾಯಿತು. ಕೊಲ್ಲಿ..! ಇವನನ್ನು ಕೊಲ್ಲಿ ಎಂದರು.

ನಿಲ್ಲಿರಿ... ನಿಲ್ಲಿರಿ... ನಾನು ನಿಮ್ಮ ಸಹೋದರ...ದೇವರಾಣೆಗೂ ನಿಮ್ಮ ಸಹೋದರ.

ಏನು ಕಥೆ ಇದು..?

ನಾನು ಯಾವ ಪ್ರದೇಶದಿಂದ ಓಡಿ ಬಂದಿರುವೆನೋ ಅದು ನಮ್ಮ ವೈರರಿಯದು. ಅನಿವಾರ್ಯವಾಗಿ ಹೀಗೆ ಮಾಡಬೇಕಾಯಿತು.
ಬೇರೆಲ್ಲವೂ ನನ್ನಲ್ಲಿ ಸರಿಯಾಗೇ ಇದೆ. ಇದೊಂದೇ_ಮಿಸ್ಟೇಕ್...

ಮಿಸ್ಟೇಕನ್ನು_ತೆಗೆದು_ಹಾಕಿದರು.... ಈ ಮೂಲಕ "ಧರ್ಮ ಚಂದನ" ತಪ್ಪನ್ನು ಸರಿಪಡಿಸಲಾಯಿತು.

Thursday, 5 March 2020

ಗಂಡಸು ಮಾತ್ರ ಮಾಡಬಹುದಾದ ವಿಕೃತಿ ಮತ್ತು ಹೆಣ್ಣು ಮಾತ್ರ ಅನುಭವಿಸಬಹುದಾದ ಸಂಕಟ….

ಪರಿವಿಡಿ
ಹುಡುಕು
ಋತಾ ಅನಾಮಿಕಾ
ಅಲೆಮಾರಿಯ ರೆಕ್ಕೆ ಬೀಸು….

ಗಂಡಸು ಮಾತ್ರ ಮಾಡಬಹುದಾದ ವಿಕೃತಿ ಮತ್ತು ಹೆಣ್ಣು ಮಾತ್ರ ಅನುಭವಿಸಬಹುದಾದ ಸಂಕಟ….

ಗಂಡಸು ಮಾಡುವ ಲೈಂಗಿಕ ಶೋಷಣೆ ಹೆಣ್ಣಿನ ಪಾವಿತ್ರ‍್ಯಕ್ಕೆ ಹಾನಿ ಎಸಗಲು ಸಾಧ್ಯವಿಲ್ಲ, ಇಷ್ಟಕ್ಕೂ ಹೆಣ್ಣಿನ ಅಸ್ಮಿತೆಯನ್ನು ಕದಡಲು ಗಂಡಸಿಗೆ ಯಾವ ರೀತಿಯ ಅರ್ಹತೆಯಾಗಲೀ ಸಾಮರ್ಥ್ಯವಾಗಲೀ ಇಲ್ಲ ಅನ್ನುವ ಮಾತನ್ನ ಮನದಟ್ಟು ಮಾಡುವ ಅಗತ್ಯ ಎಲ್ಲಕ್ಕಿಂತ ಮೊದಲು ಇದೆ. ಮತ್ತು ಅತ್ಯಾಚಾರ ಪ್ರಕರಣಗಳನ್ನು ತಗ್ಗಿಸಲು ಇರುವ ಎರಡನೇ ವಿಧಾನ ಕಠಿಣ ಶಿಕ್ಷೆ. ಕಠಿಣ ಅನ್ನುವುದಕ್ಕಿಂತ ಅವಮಾನಕರ ಶಿಕ್ಷೆ. ಅಥವಾ ಒಂದು ಕೆಲಸ ಮಾಡಬಹುದು. ಇದು ಮನಸು ಗಿನಸಿನದಲ್ಲ, ಪೂರಾ ಲೈಂಗಿಕ ಸಂಗತಿಯೇ ಅನ್ನುವ ಹಾಗಿದ್ದರೆ – ಬೀದಿಬೀದಿಯಲ್ಲಿ ಸುಲಭ ಶೌಚಾಲಯಗಳಿರುವ ಹಾಗೆಯೇ ‘ಈಸಿ ಫಕ್ ಸೆಂಟರ್‌’ಗಳನ್ನ ಸ್ಥಾಪಿಸಬಹುದು. ಚೀನಾದಿಂದ ಏನೇನೋ ತರಿಸುತ್ತಿರುವಂತೆಯೇ ಸೆಕ್ಸ್‌ ಡಾಲ್‌ಗಳನ್ನ ತರಿಸಿ ಇಡಬಹುದು. ಹಳ್ಳಿ, ಪಟ್ಟಣ, ನಗರಗಳಲ್ಲಿ ಈ ವ್ಯವಸ್ಥೆ ಇರುವಂತಾಗಬೇಕು. ಸರ್ಕಾರಗಳಿಗೆ ಕೊಂಚ ಹಣ ಖರ್ಚಾಗುತ್ತದೆ. ಅಂಥವರ ನರದೌರ್ಬಲ್ಯಕ್ಕೆ ಬಲಿಯಾಗುವ ಹೆಣ್ಣುಗಳ ಜೀವಕ್ಕಿಂತ ಅದು ಹೆಚ್ಚೇನಲ್ಲ.

ಪ್ರತಿಸಲವೂ (ನಾನು) ಬೇಸರ, ನೋವು, ಹತಾಶೆ, ತಾತ್ಸಾರಗಳಿಂದ ’ಗಂಡಸು’ ಅಂತ ಬರೆವಾಗ ಅಲ್ಲಿ ಬುದ್ಧಿ, ಮೆದುಳು, ಹೃದಯಾದಿ ಅಂತಃಕರಣದಿಂದ ಯೋಚಿಸುವ ಹಾಗೂ ನಡೆದುಕೊಳ್ಳುವ ‘ಮನುಷ್ಯ’ ಇರುವುದಿಲ್ಲ. ಬದಲಿಗೆ, ಕೇವಲ ತನ್ನ ಲಿಂಗ ಮತ್ತು ಅದರ ವಿಕೃತ ಸಾಧ್ಯತೆಗಳಿಂದಷ್ಟೆ ಯೋಚಿಸುವ ಜೀವಿ ಇರುತ್ತಾನೆ. ಇದು ಬರೀ ಲೈಂಗಿಕತೆಗೆ ಸಂಬಂಧಿಸಿದ ದುರಹಂಕಾರವಲ್ಲ. ಅದರ ಮೂಲಕ ತಾನು ಉಂಟು ಮಾಡುವ ದಬ್ಬಾಳಿಕೆ ಕೂಡ.
ಕೋಮು ದ್ವೇಷ, ಜಾತೀಯ ಮೇಲರಿಮೆ, ಹಣದ ಮದ, ರಾಜಕಾರಣ – ಇದೇನೇ ಇದ್ದರೂ ಗಂಡಸು ತನ್ನ ಎದುರಾಳಿ ಹೆಣ್ಣಿನ ‘ಕೊಬ್ಬು ಇಳಿಸಲು’ ಬಳಸುವ ಸುಲಭ ತಂತ್ರ ಇದೊಂದೇ ಆಗಿರುತ್ತದೆ. ಲೈಂಗಿಕವಾಗಿ ಹೆಣ್ಣಿನ ಮೇಲೆರಗುವುದು ಅವನ ಪಾಲಿಗೆ ಅವನು ವಿಧಿಸುವ ‘ಶಿಕ್ಷೆ’. ಆತ ಹೆಣ್ಣಿಗೆ ಮಾಡುವ ‘ಶಾಸ್ತಿ’. ಗಂಡಸು ಅತ್ಯಾಚಾರ ಮಾಡುತ್ತಾನೆಂದರೆ ಅಲ್ಲಿ ಕೇವಲ ಲೈಂಗಿಕ ವಾಂಛೆ ಇರುವುದಿಲ್ಲ. ತೀರ ಕೆಟ್ಟದಾಗಿ ಮಾತಾಡಬೇಕಾಗುತ್ತದೆ ಕೆಲ ಸಾರ್ತಿ – ಅಂತಹ ಹಸಿವನ್ನು ತಣಿಸಿಕೊಳ್ಳಲೇಬೇಕು ಅಂತಿದ್ದರೆ ಒಂದು ಚಿಕ್ಕ ರಂಧ್ರ ಸಾಕಾಗುತ್ತದೆ, ಹೆಣ್ಣು ಬೇಕೆಂದೇನಿಲ್ಲ. ಅವನು ತನ್ನ ದುರಹಂಕಾರದ ತೃಪ್ತಿಗಾಗಿ, ತನ್ನ ಮದವನ್ನು ತಾನು ಸಾಬೀತುಪಡಿಸಿಕೊಳ್ಳಲಿಕ್ಕಾಗಿಯಷ್ಟೆ ಅತ್ಯಾಚಾರ ಎಸಗುವುದು. ಅದು ಆತನ ಲೈಂಗಿಕ ವಿಕೃತಿಯಲ್ಲ, ಮಾನಸಿಕ ವಿಕೃತಿ. ಆತ್ಮ ವಿಕೃತಿಯಷ್ಟೆ.
ಗಂಡಸು ಮಾಡುವ ಲೈಂಗಿಕ ಶೋಷಣೆ ಹೆಣ್ಣಿನ ಪಾವಿತ್ರ‍್ಯಕ್ಕೆ ಹಾನಿ ಎಸಗಲು ಸಾಧ್ಯವಿಲ್ಲ, ಇಷ್ಟಕ್ಕೂ ಹೆಣ್ಣಿನ ಅಸ್ಮಿತೆಯನ್ನು ಕದಡಲು ಗಂಡಸಿಗೆ ಯಾವ ರೀತಿಯ ಅರ್ಹತೆಯಾಗಲೀ ಸಾಮರ್ಥ್ಯವಾಗಲೀ ಇಲ್ಲ ಅನ್ನುವ ಮಾತನ್ನ ಮನದಟ್ಟು ಮಾಡುವ ಅಗತ್ಯ ಎಲ್ಲಕ್ಕಿಂತ ಮೊದಲು ಇದೆ. ಮತ್ತು ಅತ್ಯಾಚಾರ ಪ್ರಕರಣಗಳನ್ನು ತಗ್ಗಿಸಲು ಇರುವ ಎರಡನೇ ವಿಧಾನ ಕಠಿಣ ಶಿಕ್ಷೆ. ಕಠಿಣ ಅನ್ನುವುದಕ್ಕಿಂತ ಅವಮಾನಕರ ಶಿಕ್ಷೆ. ಅಥವಾ ಒಂದು ಕೆಲಸ ಮಾಡಬಹುದು. ಇದು ಮನಸು ಗಿನಸಿನದಲ್ಲ, ಪೂರಾ ಲೈಂಗಿಕ ಸಂಗತಿಯೇ ಅನ್ನುವ ಹಾಗಿದ್ದರೆ – ಬೀದಿಬೀದಿಯಲ್ಲಿ ಸುಲಭ ಶೌಚಾಲಯಗಳಿರುವ ಹಾಗೆಯೇ ‘ಈಸಿ ಫಕ್ ಸೆಂಟರ್‌’ಗಳನ್ನ ಸ್ಥಾಪಿಸಬಹುದು. ಚೀನಾದಿಂದ ಏನೇನೋ ತರಿಸುತ್ತಿರುವಂತೆಯೇ ಸೆಕ್ಸ್‌ ಡಾಲ್‌ಗಳನ್ನ ತರಿಸಿ ಇಡಬಹುದು. ಹಳ್ಳಿ, ಪಟ್ಟಣ, ನಗರಗಳಲ್ಲಿ ಈ ವ್ಯವಸ್ಥೆ ಇರುವಂತಾಗಬೇಕು. ಸರ್ಕಾರಗಳಿಗೆ ಕೊಂಚ ಹಣ ಖರ್ಚಾಗುತ್ತದೆ. ಅಂಥವರ ನರದೌರ್ಬಲ್ಯಕ್ಕೆ ಬಲಿಯಾಗುವ ಹೆಣ್ಣುಗಳ ಜೀವಕ್ಕಿಂತ ಅದು ಹೆಚ್ಚೇನಲ್ಲ.

ಮರಕ್ಕೆ ಗೋಣು ತೂಗಿಸಿಕೊಂಡು ನೇತಾಡುತ್ತಿರುವ ಅಕ್ಕ ತಂಗಿಯರ ಶವದ ಚಿತ್ರಗಳನ್ನು ನೋಡಿ ಅಸಹನೀಯ ನೋವು. ಕೇವಲ ಹೆಣ್ಣು ಅನ್ನುವ ಕಾರಣಕ್ಕೆ ಅನುಭವಿಸುವ ಯಾತನೆ. ಯಾವ ಹೊತ್ತು ಯಾವ ಗಂಡಸು ಹೇಗೆ ನಡೆದುಕೊಳ್ಳುತ್ತಾನೆ ಅನ್ನುವ ಆತಂಕದಲ್ಲಿ ಕಾಲ ತಳ್ಳಬೇಕು. ಎರಡು ತಿಂಗಳ ಹಿಂದೆ ಓದಿದ್ದ ಒಂದು ವರದಿ ಇನ್ನೂ ಕಾಡುತ್ತಲೇ ಇರುವಾಗ ಈ ಮತ್ತೊಂದು ಸುದ್ದಿ. ಉತ್ತರ ಭಾರತದ ಕೆಲ ಹಳ್ಳಿಗಳಲ್ಲಿ ಅಪ್ಪಂದಿರೇ ಹೆಣ್ಣುಮಕ್ಕಳನ್ನ ಲೈಂಗಿಕವಾಗಿ ಬಳಸಿಕೊಳ್ಳುವ ಬಗ್ಗೆ…. ತಾಯಂದಿರಿಗೆ ಇದು ಗೊತ್ತಿದ್ದೂ ಎದುರಾಡಲಾಗದ, ಮಗಳನ್ನು ರಕ್ಷಿಸಲಾಗದ ಅಸಹಯಾಕತೆಯ ಬಗ್ಗೆ… ಇನ್ನೂ ಮುಂದುವರೆದು ಕೆಲವರು ಅದನ್ನು ಒಪ್ಪಿಕೊಂಡು ಮಗಳನ್ನೇ ಸವತಿಯಾಗಿ ಕಾಣುವ ಬಗ್ಗೆ….

ಗೆಳತಿ ಹೇಳಿದ್ದ ಮತ್ತೂ ಒಂದು ಘಟನೆ ನೆನಪಾಗುತ್ತಿದೆ… ದಕ್ಷಿಣ ಕನ್ನಡದಲ್ಲಿ ನಡೆದಿದ್ದು. ಆ ಹುಡುಗಿಯ ಮೇಲೆ ಲೈಂಗಿಕ ಶೋಷಣೆ ನಡೆಸಿ ಮರಕ್ಕೆ ನೇತು ಹಾಕಿ, ಕೊಂಬೆಯಲ್ಲಿದ್ದ ಜೇನು ಗೂಡಿಗೆ ಕಲ್ಲು ಹೊಡೆದು ಆಕೆ ನರಳಿ ಸಾಯುವಂತೆ ಮಾಡಿದ್ದರಂತೆ! ಇದು ಸುದ್ದಿಯಿರಲಿ, ಸದ್ದೂ ಆಗಲಿಲ್ಲ. ಸಾಮಾನ್ಯ ಕುಟುಂಬ, ಮಾತಾಡಲೂ ಭಯಪಟ್ಟು ಸುಮ್ಮನೆ ಉಳಿದಿದೆ. ಅತ್ಯಾಚಾರ ಅಂದ ಕೂಡಲೆ ಎಳುವ ವಾದ ವಿವಾದಗಳು ಅಸಹ್ಯ ಹುಟ್ಟಿಸುತ್ತವೆ. ಹೆಣ್ಣುಮಕ್ಕಳ ಬಟ್ಟೆ, ನಡೆನುಡಿಗಳ ಬಗ್ಗೆ ಭಾಷಣಗಳಾಗುತ್ತವೆ. ಈ ಎಲ್ಲ ಹರಟುವ ಸಂಸ್ಕೃತಿ ವಕ್ತಾರರಿಗೆ ಹೇಳಬೇಕು, ನಮ್ಮ ಪುರಾಣಗಳನ್ನು ಓದಲು. ಗಂಡಸಿನೊಟ್ಟಿಗೇ ಆತನ ಈ ವಿಕೃತಿಯೂ ಹುಟ್ಟಿಕೊಂಡಿದೆ. ಗರತಿಯಾಗಿದ್ದ ತುಳಸಿಯ ಪಾವಿತ್ರ‍್ಯವನ್ನು ಸ್ವತಃ ಭಗವಂತ ಅನ್ನಿಸಿಕೊಂಡವನು ಕೆಡಿಸುವ ಕಥೆಯೇ ನಮ್ಮಲ್ಲಿ ಇಲ್ಲವೆ? ಮತ್ತವರು ಬಟ್ಟೆಯ ಬಗ್ಗೆ ಮಾತಾಡುತ್ತಾರೆ!!
~

ಪುರಾಣ ಕಂತೆಗಳನ್ನು ಬಿಡಿ. ಬಹುಶಃ ಅತ್ಯಾಚಾರ ಕುರಿತಂತೆ ಇರುವ ಮೊದಲ ಐತಿಹಾಸಿಕ ದಾಖಲೆ ಇದು. ಧಮ್ಮಪದ ಗಾಥಾ ಪ್ರಸಂಗಗಳು ಕೃತಿಯು ಈ ಕುರಿತು ಹೇಳುತ್ತದೆ.
ಶ್ರಾವಸ್ತಿಯ ಶ್ರೀಮಂತನೊಬ್ಬನಿಗೆ ಅತ್ಯಂತ ಸುಂದರಿಯಾದ ಮಗಳೊಬ್ಬಳು ಇರುತ್ತಾಳೆ. ಅವಳ ಹೆಸರು ಉತ್ಪಲಾವರ್ಣ. ಅವಳನ್ನ ಮೆಚ್ಚಿ ಮದುವೆಯಾಗಲು ಅನೇಕ ರಾಜಕುಮಾರರು ಮುಂದೆ ಬರುತ್ತಾರೆ. ಆದರೆ ಅವಳು ವಿರಾಗಿಣಿ. ಸಂಸಾರದಲ್ಲಿ ಅನಾಸಕ್ತೆ. ಬುದ್ಧನ ಬೋಧನೆಗಳಲ್ಲಿ ಹೃದಯವಿಟ್ಟವಳು. ಅಪ್ಪನ ಮನವೊಲಿಸಿ ತಾನೂ ಬಿಕ್ಖುಣಿಯಾಗುವೆ ಅನ್ನುತ್ತಾಳೆ. ಆ ಶ್ರೀಮಂತನೂ ಬುದ್ಧಾನುಯಾಯಿ. ಸಂಭ್ರಮದಿಂದಲೇ ಆಕೆಗೆ ಅನುಮತಿ ಇತ್ತು ಕಳಿಸಿಕೊಡುತ್ತಾನೆ. ಬಿಕ್ಖುಣಿ ಸಂಘ ಸೇರುವ ಉತ್ಪಲಾ ವರ್ಣ, ಸತತ ಸಾಧನೆಯಿಂದ ಅರಹಂತೆಯೂ ಆಗುತ್ತಾಳೆ.
ಒಮ್ಮೆ ಅವಳು ಕಾಡಿನಲ್ಲಿ ಧ್ಯಾನಕ್ಕೆ ಕುಳಿತಿದ್ದಾಗ ಆಕೆಯ ಚಿಕ್ಕಪ್ಪನ ಮಗ ಬರುತ್ತಾನೆ. ತನ್ನ ದಾಯಾದಿ ಹೀಗೆ ಬಿಕ್ಖುಣಿಯಾಗಿದ್ದು ಅವನಲ್ಲಿ ಮತ್ಸರ ಹುಟ್ಟುಹಾಕಿರುತ್ತದೆ. ಉತ್ಪಲಾವರ್ಣ ಏಕಾಂಗಿಯಾಗಿ ತಪೋನಿರತಳಾಗಿದ್ದ ವೇಳೆಯಲ್ಲಿ ಅವಳ ಮೇಲರಗುತ್ತಾನೆ. ಅತ್ಯಾಚಾರಕ್ಕೆಳಸುತ್ತಾನೆ. ಕಾಡಿನಿಂದ ಮರಳಿದ ಉತ್ಪಲೆ ಈ ಸಂಗತಿಯನ್ನು ಸಹಬಿಕ್ಖುಣಿಯರಲ್ಲಿ ಹೇಳಿಕೊಳ್ಳುತ್ತಾಳೆ. ವಿಷಯ ಬುದ್ಧನ ಕಿವಿ ತಲಪುತ್ತದೆ.
ಬುದ್ಧನ ಚಿಂತನೆ ಅದೆಷ್ಟು ಉದಾತ್ತ ನೋಡಿ…. “ಮತ್ತೊಬ್ಬರ ವಿಕೃತಿಗೆ ಈಕೆಯ ಪಾವಿತ್ರ‍್ಯ ಕೆಡುವುದು ಹೇಗೆ? ಈಕೆಯದೇನೂ ದೋಷವಿಲ್ಲ. ಉತ್ಪಲಾವರ್ಣ ಹಿಂದಿನಂತೆಯೆ ಪರಿಶುದ್ಧಳು” ಅನ್ನುತ್ತಾನೆ. ಮತ್ತು ಆಕೆಯನ್ನು ಎಂದಿನಂತೆಯೇ ಸಂಘದಲ್ಲಿ ಮುಂದುವರೆಯಲು ಹೇಳುತ್ತಾನೆ.

ಅತ್ಯಾಚಾರದ ವಿರುದ್ಧ ಮಾತಾಡುವವರ ಬಾಯ್ಮುಚ್ಚಿಸುತ್ತ ಹೆಣ್ಣಿನ ನಡತೆ ಬಗ್ಗೆ ಪಾಠ ಹೇಳುವವರು ಧ್ಯಾನಸ್ಥಳಾದ ಹೆಣ್ಣನ್ನೂ ಬಯಸುವಂಥ ವಿಕೃತ ಮನಸ್ಥಿತಿಯನ್ನ ಬೆಂಬಲಿಸುವಂಥರೇ ಆಗಿರುತ್ತಾರೆ.
ಇದು ಶಾಶ್ವತ ಪರಿಹಾರವಿಲ್ಲದ ಅನ್ಯಾಯ ಎಂದು ನಿಡುಸುಯ್ಯುವುದಷ್ಟೆ ಉಳಿಯುವುದೇ ಕೊನೆಗೆ?

Wednesday, 19 February 2020

ಇಲ್ಲಿ‌ ಕವಿತೆಗಳವಿರುದ್ಧ ಕೇಸುಹಾಕಲಾಗುತ್ತೆ ಎಚ್ಚರ...!

ನಾನೂ_ಸಿರಾಜ್

ನಿನ್ನ ದಾಖಲೆ ಯಾವಾಗ ನೀಡುತ್ತಿ?

ಆಧಾರು, ರೇಷನ್ ಕಾರ್ಡಗಳ ಕ್ಯೂನಲ್ಲಿ
ಥಂಬಿನ, ಸರ್ವರಿನ ಮಂಗನಾಟದಲ್ಲಿ
ಬದುಕ ಕಳೆದುಕೊಳ್ಳು ತ್ತಿರುವವರ ದಾಖಲೆ
ಕೇಳುವವನೇ ನಿನ್ನ ದಾಖಲೆ ಯಾವಾಗ ನೀಡುತ್ತಿ?

ನಾಡಿನ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಲೇ ನೇಣಿಗೇರಿದವರ ,
ಹೆಸರೂ ಬೇಡವೆಂದು ಹುತಾತ್ಮರಾದವರ
ಇತಿಹಾಸದ ಹಾಳೆಗಳ ಹರಿಯುತ್ತಿರುವವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ.?

ತಾಜ್ ಮಹಲ್, ಚಾರ್ ಮಿನಾರು ಗುಂಬಜಗಳಿಗೆ
ಕೆಂಪು ಕೋಟೆ ಕುತುಬ್ ಮಿನಾರುಗಳಿಗೆ ಸಾಕ್ಷಿ ಕೇಳುತ್ತಿರುವವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ?

ಬ್ರಿಟಿಷರ ಬೂಟು ನೆಕ್ಕಿದ ತಲೆಹಿಡುಕರ
ಧರ್ಮ ದ್ವೇಷದ ಅಮಲಿನಲ್ಲಿ ರಕ್ತ ಕುಡಿಯುತ್ತಿರುವ
ಗೊಬೆಲ್ ಸಂತತಿಯವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ?

ಪಕೋಡ ಮಾರಿ ಬದುಕಿದವನು
ಚಾ ಮಾರಿ ಬದುಕಿದವನು ನನ್ನೂರಿನಲ್ಲಿ
ಮನುಷ್ಯತ್ವ ಮಾರಿಕೊಂಡಿಲ್ಲ
ಸ್ವಾಭಿಮಾನ ಮಾರಿಕೊಂಡಿಲ್ಲ,
 ಸುಳ್ಳಿನ ಕಂತೆಗಳ ಕತೆ ಕಟ್ಟಿಲ್ಲ
ಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ?

ಮುಳ್ಳು ಚುಚ್ಚಿ, ಹರಿದು, ಸಿಡಿದು ಹೋದ
ಟ್ಯೂಬುಗಳ, ಟೈಯರುಗಳ ತಿದ್ದಿ ತೀಡಿ ಗಾಳಿ ತುಂಬಿದ
ಪಂಚರ್ ನವನು ತನ್ನತನವನ್ನು ಮಾರಿಕೊಳ್ಳಲಿಲ್ಲ
ನೀನು ದೇಶವನ್ನೇ ಮಾರಿಬಿಟ್ಟೆಯಲ್ಲ 
ಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ?

ದೇಶವನ್ನೇ ಯಾಮಾರಿಸಿದ ನಿನಗೆ
ನಕಲಿ ದಾಖಲೆಗಳು ದೊಡ್ಡದಲ್ಲ ಬಿಡು
ಕನಿಷ್ಟ ಮನುಷ್ಯತ್ವವೂ ನಿನಗಿದೆ
ಎನ್ನುವ ದಾಖಲೆ ಯಾವಾಗ ನೀಡುತ್ತಿ ?

ಸಿರಾಜ್ ಬಿಸ್ರಳ್ಳಿ





ಕವಿತೆ :

ಇಲ್ಲಿ‌ ಕವಿತೆಗಳ
ವಿರುದ್ಧ ಕೇಸು
ಹಾಕಲಾಗುತ್ತೆ
ಎಚ್ಚರ 

ಕವಿತೆಗಳು
ತಗ್ಗಿ ಬಗ್ಗಿ
ನಡೆಯುವುದನ್ನು
ಕಲಿಯಬೇಕು

ಕವಿತೆಗಳು
ಅಧಿಕಾರಸ್ಥರ 
ವಿರುದ್ಧ ಎದೆ ಸೆಟೆದು
ಸೆಡ್ಡು ಹೊಡೆಯುವುದನ್ನು
ಬದಲಿಸಿಕೊಳ್ಳಬೇಕು

ಕವಿತೆಗಳು
ಪ್ರಭುಗಳ ನೀತಿ ನಿಯಮಗಳನ್ನು
ಅರ್ಥ ಮಾಡಿಕೊಂಡು
ಪ್ರಭುಗಳಿಗೆ ವಿಧೇಯತೆಯನ್ನು
ತೋರಿಸಬೇಕು

ಕವಿತೆಗಳು
ತಿಕ ತೀರಿಗಿಸಿದರೆ
ತಿಕ ಗಂಜಲಿ
ಮಾಡಿದರೆ ಗೊತ್ತಿದೆ
ತಿಕ ಹೊಡೆಯುವ
ಕಲೆ ಪ್ರಭುಗಳಿಗೆ

ಕವಿತೆಗಳ
ವಿರುದ್ಧ ಪ್ರಭುಗಳು
ತಮ್ಮ ಸಾಕು ನಾಯಿಗಳನ್ನು
ಚೂ ಬಿಡುತ್ತಾರೆ
ಕೇಸು ಹಾಕಿಸುತ್ತಾರೆ
ವಾರಂಟ್ ಕಳಿಸುತ್ತಾರೆ

ಕವಿತೆಗಳು
ಪೋಲಿಸ್ ಸೆಲ್ಲಿನಲ್ಲಿ
ಕೋರ್ಟಿನ ಕಟಕಟೆಯಲ್ಲಿ
ನಿಂತು ತನ್ನ ನಿರ್ದೋಷಿತನವನ್ನು
ತಾನು ಹೇಳುತ್ತಿರುವ
ಕವಿತ್ವದ ಸಾರವನ್ನು
ಕಾವ್ಯದ ಕಾರ್ಯಕಾರಣವನ್ನು
ಪ್ರಭುಗಳಿಗೆ ತಿಳಿಸಬೇಕು
ಕವಿತೆ ತನ್ನ ಕವಿತ್ವದಲ್ಲಿ
ಪ್ರಭುಗಳ ವಿರುದ್ದದ
ಕಾವ್ಯವಿಲ್ಲವೆಂದು
ಸಾಬೀತು ಮಾಡಲು 
ಸೋತರೆ
ಕಾವ್ಯದಲ್ಲಿ ಪ್ರಭುಗಳ
ವಿರುದ್ಧದ ಪದಗಳಿವೆ
ಎಂಬುದು ಕಂಡುಬಂದರೆ
ಕವಿತೆಗಳ ವಿರುದ್ದ 
ಕೇಸು ಬೀಳುತ್ತೆ
ಎಚ್ಚರ‌ !

- ಆರ್.ಜೆ



ಪ್ರಜಾಪ್ರಭುತ್ವ

ಹಿಂದೆಲ್ಲಾ  ರಾಜ
ಸಾಲು ಮರ ನೆಡಿಸಿ
ಕೆರೆಕಟ್ಟೆ ಕಟ್ಟಿಸಿ
ಮಾನ್ಯನಾಗುತ್ತಿದ್ದನು

ಈಗ ಮರ-ಗಿಡ ಕಡಿದು
ನದಿ ಬತ್ತಿಸಿ ನೆಲ ಬಗೆಯಲು
ಪರವಾನಗಿ ಕೊಟ್ಟು
ಧನ್ಯನಾಗುತ್ತಿರುವನು

ಎಲ್ಲಿ ನೋಡಿದರಲ್ಲಿ
ರಾಕ್ಷಸ ಯಂತ್ರಗಳು

ಎಲ್ಲಾ ಮಟ್ಟಸಗೊಳಿಸಿ
ಕೇಕೆ ಹಾಕುತಿವೆ 
ತಂತ್ರ-ಕುತಂತ್ರಗಳು
 
ತೇರೆಳೆದಿಹರು...
ದೀನ ದರಿದ್ರ ದುರ್ಬಲ ಮಂದಿ
ಹೂವು-ದವನ ಎಸೆದು
ಕೈ ಮುಗಿದು ಹಿಡಿದಿಹರು ದೊಂದಿ

ಸಿಂಹಾಸನದ ಮೇಲೆ
ಕೂತವನೆ ವೇಷಧಾರಿ
ಅರಿಯದೆ ಉಘೆ ಎಂದು
ಕೂಗಿಹರು ಶಕ್ತಿ ಮೀರಿ !

#ಸವಿತಾ ನಾಗಭೂಷಣ




#ಮೌನ

#ವಿನಯ_ಒಕ್ಕುಂದ_ಅವರ_ಪದ್ಯ

ಮೌನ, ಸದ್ಯ ನನ್ನ ಕೊರಳನ್ನು
ಕುಣಿಕೆಯಿಂದ ಪಾರುಮಾಡಬಲ್ಲದು
ಆದರೆ, ಒಳಗೆ ಲಾಳಿಯಾಡುವ
ಲಾವರಸವನ್ನೆಂದಿಗೂ ತಣಿಸಲಾರದು

ಮೌನ, ನನ್ನ ಬಟ್ಟಲಿಗೆ
ಅನ್ನ ಕೊಡಬಹುದು ಮುಫತ್ತಾಗಿ
ಆದರೆ ನೆತ್ತರು ಕೀವುಗಟ್ಟುವ
ದ್ರೋಹದ ಯಾತನೆಯಿಂದ ಪಾರುಗಾಣಿಸದು

ಮೌನ, ಹೆಗಲಿಗೆ ಜರಿಶಾಲನ್ನು
ಕೈಗೆ ಸನ್ಮಾನ ಪತ್ರವನ್ನು ಕೊಡಬಹುದು
ಆದರೆ, ಲಜ್ಜೆಗೆಟ್ಟು ಕೇಡು ಸಂಧಾನಕ್ಕೆ
ಸಂದುಹೋದ ಆತ್ಮದ ಮರ್ಯಾದೆ ಕಾಯುವ
ಕಫನ್ನಿನ ಬಟ್ಟೆಯೂ ಆಗಲಾರದು 

ಮೌನ, ನಮ್ಮಷ್ಟಕ್ಕೇ ನಾವಿರುವ
ಸಭ್ಯತೆಯ ಸೋಗು ಕೊಡಬಹುದು 
ಆದರೆ ಒಳಗೊಳಗೇ ಅರೆಬೆಂದು
ಹಳಸಿದ, ಜೀವತ್ರಾಣವನೆಂದೂ ಮರಳಿಸದು

ಮೌನ ಹರಳುಗಟ್ಟಿದೆ
ಒಳಹೊಕ್ಕು ಪ್ರಾಣವ ಹೆನೆಗೆ ಮಾಡಿದೆ
ಉಪ್ಪುನೀರು ಕುದಿಯೊಡದರೂ ತಣ್ಣಗಿದೆ ಕಣ್ಣೀರು

ನನ್ನ ಮುದ್ದು ದೇಶವೇ
ನಿನ್ನ ಮೇಲಾಡುವ ಗಾಳಿಯಲೆಯಾಣೆ
ಎಲ್ಲರೆಲ್ಲರ ಉಸಿರು ತಾಕಿ ಜುಂಎನ್ನುವ ತ್ರಿವರ್ಣದಾಣೆ
ಮಕ್ಕಳ ನೆತ್ತರಂಟಿದ ಹಾದಿಯಾಣೆ
ಈ ಜವುಳು ಸವಳಿನ ದುರ್ಭರ ದಿನಗಳಲಿ
ಮೌನವೊಂದು ಮಹಾಪಾಪ
ಕಾನ್ಸಂಟ್ರೇಶನ್ ಕ್ಯಾಂಪಿನಿಂದ ಕವಿ ಹೇಳುತ್ತಿದ್ದಾನೆ
ನೊಂದವರ ದ್ವನಿಯಾಗದ ಮೌನ ಮಹಾಪಾಪ 
                             
#ವಿನಯಾ #ಒಕ್ಕುಂದ




#ಗುರುತು_ಬೇಕೇ_ಗುರುತು

ದಿನ ಬೆಳಗಾದರೆ ಎಳೆಬಿಸಿಲಿನಲಿ ಮುತ್ತಿಟ್ಟು
ಮದ್ಹಾಹ್ನ ಬಿರುಬಿಸಿಲಿನಲಿ ಚುರುಕು ಮುಟ್ಟಿಸುವ ಸೂರ್ಯನಿಗೆ
ಹಾಲು‌ಬೆಳದಿಂಗಳಲಿ ಒಲವ ಹಂಚುವ ಚಂದ್ರನಿಗೆ ನನ್ನವರ ಪರಿಚಯವಿದೆ..
ಬೇಕಾದರೆ ಅವರಿಂದ ಗುರುತು ಪಡೆಯಿರಿ..

ಜಾತಿ ಧರ್ಮ ಲಿಂಗದೆಲ್ಲೆಯ ಮೀರಿ
ಎಲ್ಲರ ಉಸಿರು ಗಾಳಿಯಲ್ಲಿ ಬೆರೆತಿದೆ
ಗಾಳಿಯ‌ ಕೊರಳಪಟ್ಟಿ ಹಿಡಿದು ನನ್ನವರ ಗುರುತುಗಳ ಪತ್ತೆಹಚ್ಚಿರಿ..

ನಿಮ್ಮದೇ ಸಿಮೆಂಟ್ ಕಾಂಕ್ರೇಟಿನ
ಹೈವೇ ಕೆಳಗೆ
ಅಜ್ಜಿ ಮುತ್ತಜ್ಜಿಯರು ನಡೆದಾಡಿದ ಹೆಜ್ಜೆಗಳು ಅಪ್ಪಚ್ಚಿಯಾಗಿವೆ..
ನಮ್ಮ ಗುರುತುಗಳಿಗಾಗಿ
ಹೈವೆಗಳನ್ನೆಲ್ಲ ಅಗೆಯುವ ಗುತ್ತಿಗೆ ಯಾರಿಗೆ ಕೊಡುತ್ತೀರಿ?

ಮನೆಯ ಗೋಡೆಗೆ 
ಕಾಲಕಾಲಕ್ಕೆ ಬಳಿದ ಸುಣ್ಣದ ಪದರುಗಳಲ್ಲಿ ಅಚ್ಚಾದ ಚರಿತ್ರೆಯ ಪುಟಗಳ ‌ನೀವು  ಓದಬೇಕು..
ಮೊದಲು ಅವರದ್ದೇ ಭಾಷೆಯ
ಸಂಕೇತಗಳು ನಿಮಗೆ ತಿಳಿದಿರಬೇಕು.

ಭಾರತವೆಂಬ  ಬ್ಲಡ್ ಬ್ಯಾಂಕಿನ
ರಕ್ತದ ಕಣಕಣಗಳಲಿ ಧರ್ಮದ ಗುರುತು ಪತ್ತೆಹಚ್ಚಲು ಸೋತ ನೀವು
ದೇಶದ ಗಡಿರೇಖೆಯಲ್ಲಿ
ಲೋಕದ ಜನರಿಗೆ ಪ್ರೀತಿ ಹಂಚುವ
ನಮ್ಮನ್ನು ದೇಶಬ್ರಷ್ಟರೆಂದಿರಿ..

ಕಡೆಯದಾಗಿ..
ನನ್ನವರ ಬೆವರಹನಿಗಳು ಆವಿಯಾಗಿ ಮೋಡಕಟ್ಟಿ ಮಳೆಯಾಗಿ ಸುರಿದಿವೆ...
ಬಿದ್ದ ಮಳೆ ನೀರಲ್ಲಿ ಕಲೆಸಿಹೋದ
ಗುರುತುಗಳ ಬೇಕಿದ್ದರೆ ಹುಡುಕಿಕೊಳ್ಳಿ...

#ಅಜೋ





Wednesday, 12 February 2020

ಸ್ತ್ರೀವಾದಿ ಚಿಂತನೆ

ಸ್ತ್ರೀವಾದಿ ಚಿಂತನೆ ಮೊದಲನೆಯದಾಗಿ ಸ್ತ್ರೀ-ಪುರುಷರ ನಡುವಿನ ಅಸಮಾನತೆಯನ್ನು ಪ್ರಕೃತಿ ಸಹಜವಲ್ಲ, ಜೈವಿಕ ವಲ್ಲ, ಅದು ಸಾಂಸ್ಕೃತಿಕ ಹಿನ್ನೆಲೆ ಯಾಗಿದ್ದು ಪರಿಸರದ ಕಾರಣದಲ್ಲಿ ಉದ್ಭವಿಸಿದ್ದು ಎಂದು ಹೇಳುತ್ತದೆ.

ಪುರುಷ ದೃಷ್ಟಿಕೋನ ಸಾರ್ವತ್ರಿಕವಲ್ಲ. ಪುರುಷಪ್ರಧಾನ ಮೌಲ್ಯಗಳು ಪ್ರಧಾನ ಸಂಸ್ಕೃತಿ ಅನುಕೂಲಕರವಾದ ಅರ್ಧಸತ್ಯವನ್ನಷ್ಟೇ ಹೇಳುತ್ತದೆ.

ಹೆಣ್ಣುತನದ ಗುಣ ಸ್ವಭಾವಗಳು  ದೈಹಿಕವಾಗಿ ಹೆಣ್ಣಾದ ಮಾತ್ರಕ್ಕೆ ಒಳಗೊಂಡಿರುತ್ತವೆ ಎಂಬ ಮೂಲ ನಂಬಿಕೆಯನ್ನೇ ಸ್ತ್ರೀವಾದ ಪ್ರಶ್ನಿಸುತ್ತದೆ.

ಹೆಣ್ಣು ಗಂಡು ಪರಸ್ಪರ ವಿರುದ್ಧ ವ್ಯಕ್ತಿತ್ವಗಳು ಎಂಬ ಕಲ್ಪನೆಯನ್ನು ಮೊದಲು ತೊಡೆದುಹಾಕಬೇಕಾದ ಅಗತ್ಯವನ್ನು ಸ್ತ್ರೀವಾದ ಗುರುತಿಸಿದೆ.

ಸ್ತ್ರೀವಾದ ದೃಷ್ಟಿಕೋನ ಮಾನವತಾವಾದಿಕ್ಕಿಂತ ಭಿನ್ನವಲ್ಲ ,ಹುಟ್ಟಿನಿಂದಲೇ ಒಂದು ಗುಂಪು ಇನ್ನೊಂದು ಗುಂಪಿನ ಶ್ರೇಷ್ಠ ಎಂಬ ಮೂಲ ಶ್ರೇಣೀಕೃತ ವ್ಯವಸ್ಥೆಯನ್ನು ಸ್ತ್ರೀವಾದ ತಿರಸ್ಕರಿಸುತ್ತದೆ.

ಇತಿಹಾಸದುದ್ದಕ್ಕೂ ಪುರುಷ ಪ್ರಪಂಚದ ಅನುಭವಗಳೇ ಸಾರ್ವತ್ರಿಕವಾಗಿ ಎಂಬಂತೆ ಅಭಿವ್ಯಕ್ತಿಗೊಂಡು, ಸ್ತ್ರೀರಿಯರ ಅನಿಸಿಕೆ ಅನುಭವ, ಸಾಧನೆ ದಾಖಲಾಗದೆ. ಏಕಮುಖ ಚರಿತ್ರೆಯಾಗಿದೆ . ಪುರಾಣ ಪುಣ್ಯಕಥೆಗಳಲ್ಲಿ ಸತಿ ಮಣಿಯರ ಪಾತಿವ್ರತ್ಯವನ್ನು ಒತ್ತಿ ಹೇಳುವಾಗ ಪ್ರತಿಭಟಿಸದೆ ಮೆದುತನವನ್ನೇ ಆದರ್ಶವಾಗಿಸುವ ನಿಂತ ನೀರಲ್ಲಿ ಪುರುಷನ ಪ್ರತಿಬಿಂಬ ಕಂಡೆ ಅಪವಿತ್ರಳಾಗುವ ರೇಣುಕೆಯ ತಲೆ ಕಡೆದಾಗ ಪ್ರಧಾನ ಸಂಸ್ಕೃತಿ ಪುರುಷ ಲಾಭಕ್ಕಾಗಿಯೇ ದುಡಿಯುತ್ತಿತ್ತು.


ಮಹಿಳೆಗೆ ಮಕ್ಕಳ ಲಾಲನೆ ಪೋಷಣೆಯನೆಲ್ಲ ಅಂಟಿಸುವಲ್ಲಿ ಅವು ಪ್ರಕೃತಿ ಸಹಜ ಎಂದು ಸಾರುವಲ್ಲಿ ಈ ಪುರುಷ ಪ್ರಧಾನ ಸಂಸ್ಕೃತಿ ತನ್ನ ತಂದೆತನದ ಜವಾಬ್ದಾರಿಯಿಂದ ಜಾರಿಕೊಂಡಿತಲ್ಲದೆ, ಮನೆಯ ಹೊರಗಿನ ಗಂಡಿನ ದಿಗ್ವಿಜಯಗಳಿಗೆ ಇದು ಅನುಕೂಲಕರವಾಯಿತು. ಪುರುಷರು ಮಹಿಳೆಗೆ ಅನಿಸ ಬೇಕಾದದ್ದನ್ನು  ಬರೆದಿಟ್ಟರು.


ಎಲ್ಲಾ ಪುರುಷಪ್ರಧಾನ ಸಂಸ್ಕೃತಿಗಳು ಸೃಷ್ಟಿಸಿದ ಹೆಣ್ಣಿನ ಪ್ರತಿಮೆ ಎರಡು ಬಗೆಯದ್ದು." ಮಾತೇ ಇಲ್ಲವೆ ಮಾಯೆ" ಮಾತೆಯಾಗಿ ಬಹು ಮಾನ್ಯಗಳು ಪೂಜ್ಯರು ಮಾಯೆಯಾಗಿ, ಮೋಹಿನಿಯಾಗಿ, ಪುರುಷನನ್ನು ಮರುಳು ಮಾಡುವವಳು, ಹಾದಿ ತಪ್ಪಿಸುವವಳು, ಜಗತ್ತಿನ ಪಾಪವನ್ನೆಲ್ಲ ಸಂಕೇತಿಸುವವಳು.

ರಾಮನ ವಚನ ಪಾಲನೆ ರಾಜ ಧರ್ಮಗಳ ಕಥೆ ಹೇಳುವ ರಾಮಾಯಣವು, ಸೀತೆಯ ತುಮುಲ ಅಪಮಾನಗಳನ್ನು ಮರೆತುಬಿಟ್ಟಿತು. ಅಣ್ಣ ತಮ್ಮಂದಿರ ಪ್ರೀತಿ ವಿಶ್ವಾಸವನ್ನು ಹಾಡಿ ಹೊಗಳುವಾಗ. ಅಣ್ಣನ ಹಿಂದೆ ಹೋದ ಲಕ್ಷ್ಮಣನ ಭ್ರಾತೃತ್ವ ಪ್ರೇಮವನ್ನು ಕೊಂಡಾಡುವಾಗ ಹದಿನಾಲ್ಕು ವರ್ಷ ಒಂಟಿಯಾಗಿ ಕಾದ ಊರ್ಮಿಳೆ ಸ್ಥಿತಿಗೆ ಮೌನ ತಾಳಿತು.

ಮಾಧವಿಯ ಹೆಣ್ಣುತನ ಹರಿದು ಹಂಚಿದ ಬಗೆಯನ್ನು ಬಣ್ಣಿಸಲೇ ಇಲ್ಲ. ರಾಜಕುಮಾರಿಯಾಗಿ ಹುಟ್ಟಿಯೂ ನಾಲ್ವರು ರಾಜರೊಡನೆ   ಒಲ್ಲದ ಮನಸ್ಸಿನಿಂದ ಕೂಡಿ, ಎದೆ ಹಾಲು ಚಿಲ್ಲೆನ್ನುವ ಹೊತ್ತಲ್ಲಿ, ಹೆತ್ತ ಕೂಸು ತೊರೆದು ನಡೆದ ಮಾಧವಿಯ ಕಥೆಯನ್ನು ಪುರಾಣಗಳು ಹೇಳಲಿಲ್ಲ.

ಬೆಂಕಿಗಟ್ಟಿದರು ,ಕಾಡಿಗಟ್ಟಿದರು, ಕರುಣಾಳು ರಾಮನಲ್ಲಿ ತಪ್ಪು ಕಾಣದ, ಬುಟ್ಟಿಯಲ್ಲಿ ಗಂಡನನ್ನು ಹೊತ್ತು ಸೂಳೆಮನೆ ತಲುಪಿಸಿದ ಮಹಿಳೆಯರ ಶೀಲ ಪಾತಿವ್ರತ್ಯ ವಿಧೇಯತೆಗಳನ್ನು ಹಾಡಿ ಕೊಂಡಾಡಿದ ಸಂಸ್ಕೃತಿಯು, ಮಹಿಳೆಯ ಗುಣ - ಸ್ವಭಾವ, ಸ್ಥಾನ-ಮಾನ, ಸದಾ ಕಾಲ ಪುರುಷ ಕೇಂದ್ರಿತ ದೃಷ್ಟಿಕೋನದಿಂದ ಅರ್ಥೈಸಲ್ಪಟ್ಟಿತು.


ಪುರುಷ ಕೇಂದ್ರಿತ ಕೃತಿಗಳಲ್ಲಿ, ಕೃತಿ ಹೇಳುವುದಷ್ಟನ್ನೇ ಪೂರ್ಣ ಸತ್ಯವೆಂದು, ಸುಮ್ಮನಾಗದೆ,ಹೇಳದ್ದನ್ನು  ಪದ-ಪದಗಳ ನಡುವಿನ ಮೌನವನ್ನು ಆಲಿಸುತ್ತದೆ.

ಸ್ತ್ರೀವಾದಿಗಳ ಹೋರಾಟವೇನಿದ್ದರೂ ಪುರುಷ ಪ್ರಧಾನ ವ್ಯವಸ್ಥೆಯ ಪುರುಷ ಕೇಂದ್ರಿತ ನಿಲುವುಗಳನ್ನು ಎತ್ತಿಹಿಡಿಯುವ ವ್ಯವಸ್ಥೆಯ ವಿರುದ್ಧವೇ ಹೊರತು ಪುರುಷನ ವಿರುದ್ಧವಲ್ಲ.

ಸ್ತ್ರೀಪರವಾದ ವಿಚಾರಗಳ ಬಗೆಗೆ ವಿಶೇಷವಾದ ಕಾಳಜಿ ಹೊಂದಿದ್ದು , ಪ್ರತಿಸ್ಪಂದಿಸುವವರನ್ನು ಸ್ತ್ರೀವಾದಿಗಳೆಂದು ಗುರುತಿಸಬಹುದು.ಹೆಣ್ಣಾದವರಿಗೆ, ಹೆಣ್ಣಾಗಬಲ್ಲವರಿಗೆ ತಟ್ಟಬಲ್ಲ ಮುಟ್ಟಬಲ್ಲ ಆ ಕೋನವೇ ಸ್ತ್ರೀ ದೃಷ್ಟಿಕೋನ.

ಈ ಕಾರಣಕ್ಕಾಗಿಯೇ ಮುಡಚೆಟ್ಟು, ಮೃಲಿಗೆಗಳು ಹೆಣ್ತನದೊಂದಿಗೆ ತಳುಕು ಹಾಕಿಕೊಂಡು ಯಾಜಮಾನ್ಯ ಸಂಸ್ಕೃತಿ ನಿರ್ಧರಿಸುವ ಚೌಕಟ್ಟಿನೋಳಗೆ ಪ್ರವಹಿಸುತ್ತವೆ. ಅದರಲ್ಲೂ ವೈದಿಕ ವ್ಯವಸ್ಥೆಯ ಕರ್ಮಸಿದ್ಧಾಂತವು ಹೆಣ್ಣು ಹೆರಿಗೆ, ಮುಟ್ಟು ಮುಂತಾದವುಗಳನ್ನು ತುಚ್ಚೀಕರಿಸಿದೆ. ಸೂತಕಗೋಳಿಸಿದೆ " ನೀಲಾ"


ಸ್ತ್ರೀಗೆ ಪತಿಯೇ ಪರದೈವ

ಗಂಡನ ಊಟವಾದ ನಂತರ ಹೆಂಡತಿಯಾದವಳು ಊಟ ಮಾಡಬೇಕು. ಗಂಡನು ಎಷ್ಟೇ ಉದ್ರೇಕಗೊಳಿಸುವ ಮಾತುಗಳನ್ನಾಡಿದರು ಹೆಂಡತಿ ಹಿಂತಿರುಗಿ ಮಾತನಾಡಿಸಬಾರದು. ಹಾಗಿದ್ದರೆ ಮಾತ್ರ ಅವಳು ಗಂಡಿನ ಪ್ರಶಂಸೆಗೆ ಪಾತ್ರಳಾಗತ್ತಾಳೆ.

ಧರ್ಮ ಶಾಸ್ತ್ರಗಳೂ, ಪುರಾಣಗಳು ಸ್ತ್ರೀಯು ಪಾಲಿಗೆ ಆಶಾದಾಯಕವಾಗಿರಲಿಲ್ಲವೆನ್ನಬೇಕು. ಪುರುಷನ ಬೋಗ, ಕಾಮಾಸಕ್ತಿ,ಲೋಭತೆ, ತಮಗೆ ಬೇಕಾದ ರೀತಿಯ ಧಾರ್ಮಿಕ ಸೂತ್ರಗಳನ್ನು ನಿರ್ಮಿಸಿ ಅನೇಕ ಸ್ತ್ರೀಯರನ್ನು ಹೆಂಡತಿಯರನ್ನಾಗಿ ಪಡೆದು ಭೋಗಿಸಿ ಅವರನ್ನು ಅಲ್ಲಲ್ಲಿಯೇ ಬಿಟ್ಟು ಪುಣ್ಯ ಪುರುಷರಾಗಿ ಪೂಜನೀಯರೆನಿಸಿಕೊಳ್ಳುತ್ತಿದ್ದಾರೆ. ಹೆಂಗಸರ ಶೀಲವನ್ನೇ ಶಂಕಿಸಿ ಅವರನ್ನು ಮಾನಸಿಕ, ದೈಹಿಕವಾಗಿ,ಕ್ಷೋಭೆಗೊಳಪಡಿಸಿ ತಾವು ನಲಿದು ಮಹಿಳೆಯರನ್ನು ಶಿಕ್ಷೆಗೊಳಪಡಿಸಿದ್ದೂ ಇದೆ.


ಶಕುಂತಲೆಯನ್ನು ಪ್ರೇಮಿಸಿ ಅವಳನ್ನು ಭೋಗಿಸಿ ನಂತರ ತನ್ನ ಅರಮನೆಗೆ ಸೇರಿಸಿಕೊಳ್ಳದೆ ಕಾಡಿಗೆ ಅಟ್ಟಿದ ದುಶ್ಯಂತನು ಪುರಾಣ ಕಾವ್ಯಗಳಲ್ಲಿ ವೀರನೆನಿಸಿಕೊಂಡಿದ್ದಾನೆ.

ರಾಮನು ಅಗ್ನಿ ಸಾಕ್ಷಿಯಾಗಿ ಕೈಹಿಡಿದ ಸೀತೆಯನ್ನು ಅವಳ ಶೀಲವನ್ನು ಶಂಕಿಸಿ ಕಾಡಿಗೆ ಅಟ್ಟಿದ ಉದಾಹರಣೆಗೆ ರಾಮಾಯಣ ಗ್ರಂಥ ಸಾಕ್ಷಿಯಾಗಿದೆ.

ಮಹಾಭಾರತದಲ್ಲಿ ಮತ್ಸಯಗಂದಿ ಸತ್ಯವತಿ- ಶಂತನು ವನ್ನು ಕೂಡುವ ಮೊದಲೆ ಪರಾಶರ ಮುನಿಯನ್ನು ಕೂಡಿ ವ್ಯಾಸಮುನಿಯನ್ನು ಹಡೆಯುತ್ತಾಳೆ.

ಕುಂತಿಯ ಕತೆಯೇ ವಿಚಿತ್ರ ಆಕೆ ವಿವಾಹ ಪೂರ್ವದಲ್ಲಿ ಸುರ್ಯನಿಂದ ಕರ್ಣನನ್ನು ಪಡೆಯುತ್ತಾಳೆ.
ಮಾದ್ರಿ, ಅಶ್ವಿನಿ, ದೇವತೆಗಳಿಂದ, ಸಂತಾನವನ್ನು ಪಡೆಯುತ್ತಾಳೆ. ಪಾಂಡುವಿನ ಸತ್ತಾಗ ಚಿತೆಯಲ್ಲಿ ಸಹಗಮನ ಮಾಡುತ್ತಾಳೆ. ಹೆಂಡತಿ ಸತ್ತರೆ ಕೂಡಲೇ ಗಂಡಸಿಗೆ ಮರುಮದುವೆ ಮಾಡುವ ಸಮಾಜ.

ವೇದ, ಶಾಸ್ತ್ರ, ಪುರಾಣ, ಕಾವ್ಯಗಳೆಲ್ಲ ಬರೆದವರು ಪುರುಷರು, ಅವರಿಗೆ ಸ್ತ್ರೀಯರನ್ನು ತಮ್ಮ ಸರಿಸಮನಾಗಿ ಚಿತ್ರಿಸುವುದು ಅವಮಾನಕರವೆಂಬಂತೆ ಕಂಡಿರಬೇಕು.


ಆಧುನಿಕ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ
                       ಕಾವ್ಯ:-


ಹೆಣ್ಣೆ ನೀ ಗಂಡನ ಕೂಡಿಕೊಂಡು 
ನೋಡು ಮಂಡೂಕ ಸರ್ಪದ ನೆಳಲಿಗೆ ಹೋದಂತೆ ಬಂಡಿಗೆ ಬಸವನು ಶಿರಬಾಗಿಕೊಂಡಂತೆ

ಅಯ್ಯಾ ನನಗೊಂದು ಆಶೆ
 ಹಾಗೆ-ಹೀಗೆ ಹೆಣ್ಣು ಬುಗುರಿಯಾಡಿಸುವ 
ಇವುಗಳ ಕುಂಡಿಗೆ ಝಾಡಿಸಿ ಒದೆಯಬೇಕು ಒಮ್ಮೆಯಾದರೂ...
     (ಚಿ. ಸರ್ವಮಂಗಳಾ -`ಅಮ್ಮನಗುಡ್ಡ)



ಹುಟ್ಟೆಂಬುದು ಉರಿಕೊಳ್ಳಿ 
ಬಾಲ್ಯವೊಂದು ಅಗ್ನಿಕುಂಡ
ಯೌವನವು ಕಾಳ್ಗಿಚ್ಚಾದ ನನಗೆ 
ಬೆಳಕಿನ ಸುಖ ಗೊತ್ತಿಲ್ಲ ಸಖ
       (ಸುಕನ್ಯಾ ಮಾರುತಿ- 'ತಾಜ್ ಮಹಲಿನ ಹಾಡು')


ಅದೇ ವೀರ್ಯ ಅದೇ ಗರ್ಭಕ್ಕೆ ಹುಟ್ಟಿ 
ಅದೇ ಮೊಲೆಯ ಚೀಪಿ 
ಬೆಳೆದಿದ್ದೇವೆ ಸ್ವಾಮಿ ನಾವೂ
        (ಅನಸೂಯಾದೇವಿ -'ಪ್ರಕೃತಿ -ಪುರುಷ')

ನಾನು ಭೂಮಿಯಂತೆ 
ಸಹನಶೀಲಳಂತೆ 
ಹಾಗೆಂದು ಹೇಳುತ್ತಾರೆ ಇವರು‌.
 ನನ್ನನ್ನು ಪುಷ್ಪವತಿಯೆಂದು
ಫಲವತಿಯೆಂದು 
ವರ್ಣಿಸುತ್ತಾರೆ ಅವರು. 
ಇವರೆಲ್ಲಾ ಸೇರಿ ವರ್ಷಕ್ಕೊಮ್ಮೆ
ಭೂಮಿ ಪೂಜೆ ಮಾಡುತ್ತಾರೆ 
ವರ್ಷದುದ್ದಕ್ಕೂ ನನ್ನನ್ನು 
ತುಳಿಯುತ್ತಲೇ ಇರುತ್ತಾರೆ

---(ಡಾ. ವಿಜಯಶ್ರೀ ಸಬರದ ನೆಲ, ಜಲ ಮತ್ತು ನಾನು)


ಹೋಗಯ್ಯ ಹೋಗು ಎಲ್ಲಿಗೆ ಹೋಗುತ್ತೀ..?
 ನನಗೆ ಗೊತ್ತಿಲ್ಲವೇ..?
ನನ್ನೆದೆಗೆ ಬೇರಿಳಿದ ಕಾಲು ನಿನ್ನದು
(ಸಿ.ಉಷಾ- 'ತೊಗಲುಗೊಂಬೆಯ ಆತ್ಮಕತೆ')



ನನಗೆ ಕಾವ್ಯ ಗೊತ್ತಿಲ್ಲ ತಿಳಿಸಾರು ಗೊತ್ತು 
ಕಾವ್ಯದ ಬಗ್ಗೆ ತಿಳಿದವರೇ ಹೇಳಿ.
          (ವೈದೇಹಿ- 'ಬಿಂದು ಬಿಂದಿಗೆ')


"ಅವ್ವ ನನಗೆ ದಾರಿ ಬಿಡು 
ತುಂಬ ಯೌವನದ ಖುರಪುಟದಗ್ನಿ  ಕಿಡಿ ಕಾರುತ್ತಿದೆ"
                 --ಎಂ ಸರಸ್ವತಿ ಗೌಡ

"ನೀ ಹಾಕಿರುವ ಅಣೆಕಟ್ಟೆ| ಒಡೆದು ಬಿರುಮಳೆಗೆ ಸೂಕ್ಕಿ ಭೋರ್ಗರೆದು ನುಗ್ಗಿ| ನಿನ್ನಂತಾಗದೆ ಬದುಕುತ್ತೇನೆ
 ನನಗೆ ದಾರಿ ಬಿಡು"
           (ಸಿ.ಉಷಾ - 'ಅಮ್ಮನಿಗೆ')


"ಅಮ್ಮ ಸಾಕು ಮಾಡೆ ನಿನ್ನ ಪುರಾಣ...
 ಏನೇ ಹೇಳು ತೊಡೆ ಸಂದಿಯಲ್ಲಿ ಬದುಕ ಹುದುಗಿಸಿ
ಬದುಕಲಾರೆ, ನೀನು ಅಜ್ಜಿ ಸುತ್ತಿದ 
ವರ್ತುಲದಲ್ಲೇ ಸುತ್ತಲಾರೆ, ಕುತ್ತಿಗೆಗೊಂದು 
ಬಿಗಿದು ಹಿಡಿಯಬೇಡ ಅಮ್ಮಾ"
    --ಚ.ಸರ್ವಮಂಗಳಾ-'ತಡೆ'---(ಅಮ್ಮನ ಗುಡ್ಡ)

"ನಿಮ್ಮ ಕಾಮಾಗ್ನಿ ಕುಂಡಕ್ಕೆ| ನಮ್ಮ ಶೀಲವನ್ನು ಬಲಿಗೊಟ್ಟು 
ನಿಮ್ಮ ಮಾನಾಪಮಾನವನು| ಕಾಪಾಡಲು ನಿಮ್ಮಿಂದಲೇ
ಪತಿವ್ರತೆಯರ ಪಟ್ಟಕ್ಕೇರಿದ ಪ್ರಾತಃ ಕಾಲದ ಸ್ಮರಣೆಯಲಿ
ಇಂದಿಗೂ ಉಳಿದು ನರಳುತ್ತಿರುವವರು ನಾವು
ನಾವು ಪತಿವ್ರತೆಯರಲ್ಲ"

---(ಎಚ್ಎಸ್. ಮುಕ್ತಾಯಕ್ಕ-" ನಾವು ಪತಿವ್ರತೆಯರಲ್ಲ")


"ನಮ್ಮ ದೇಹ ಹಾಸಿಗೆ ಮಾಡಿ 
ಬೆಳಗಾಗ ಮುರುಟಿಸಿ ಹೋದದ್ದು 
ಹಂಗಿಲ್ಲದುಂಡು ಎಂಜಲು ಒಗೆದು 
ಬಿಸಿಲು ಗುದುರೆಯನೇರಿ ಹಾರಿದ್ದು"
--- ಶೀಲಾ ಅಂಕೋಲ ("ಮತ್ತೆ ಚಿಗುರುವೆವು")

"ವೇಷ ಮಾಡುತ್ತ ಒಮ್ಮೆ ಬಂದವರು 
ಮತ್ತೆ ವೇಷ ಮರೆಸಿ ಬಂದು 
ನಮ್ಮ ಮೊಸರಕುಡಿಕೆಗೇ ಕಿಮ್ಮತ್ತು ಕಟ್ಟುತ್ತಾರೆ"
---ಮಾಧವಿ ಭಂಡಾರಿ---( "ವೇಷದವರು")

"ಅಯ್ಯಾ ನನಗೆ ಬೇಕು |
ತಿಕ್ಕಾಟದ ಹೇಸಿಗೆ ನಡುವೆ 
ಹುಟ್ಟಿ ಅಲ್ಲಿಯೇ ಇನ್ನೂ ಗಿರಿಗಿಟ್ಲೆ 
ಆಡುತ್ತಿರುವ ನನ್ನ ನಾನೇ ಅರಿವುದಯ್ಯ"
--ಚಿ. ಸರ್ವಮಂಗಳ '"ನಾನು ನಾನೇ"' (ಅಮ್ಮನ ಗುಡ್ಡ)


"ನಾನೇಕೆ ಬಳ್ಳಿ 
ನೀನೇಕೆ ಮರ 
ನನ್ನ ಕಾಲಮೇಲಲ್ಲವೇ ನನ್ನ ನಿಲುವು 
ನನ್ನ ಬಾಳಿಗೂ ಇಲ್ಲವೇ ನಿನ್ನಂತೆ ಛಲವು"
--ಎಂ.ಎಸ್ ವೇದಾ "ಸಂಗಾತಿಗೆ" (ಬಿಳಿಲುಗಳು)

ನಾನೊಬ್ಬ ಪತ್ನಿ 
ಮೂರು ಮಕ್ಕಳ ತಾಯಿ 
ಇನ್ನೂ ನನ್ನ ಸೀರೆ ಕುಪ್ಪಸ 
ಬಟ್ಟು ಬೈತಲೆ ಎಲ್ಲಾ 
ನನ್ನ ಅತ್ತೆ ಮಾವಂದಿರ ಮರ್ಜಿ
                ----ಪ್ರತಿಭಾ ನಂದಕುಮಾರ್



ನಾನು ಉರಿದು 
ಒಳಗೊಳಗೆ ಬೇಯುತ್ತ 
ಕರಗಿ ಹೋದೆ 
ಕರ್ಪೂರದಂತೆ
         (ಸರಸ್ವತಿ ಗೌಡ)

ಗೆಳೆಯಾ 
ಕೊಡುವೆಯಾ ನಿನ್ನ 
ಕರವಸ್ತ್ರ ಈ 
ಕಣ್ಣೀರ ಒರೆಸಲು
           (ತಾರಿಣಿ ಶುಭದಾಯಿನಿ)


ನಾನು 
ಹೂಂ ಗುಟ್ಟದೆ 
ನನ್ನ ನೆಲದಲ್ಲಿ ನಿನ್ನ 
ಬೀಜ ಬಿತ್ತಿ ಬೆಳೆಯಲು 
ಸಾಧ್ಯವೇ ಇಲ್ಲ 
            ----(ಜ್ಯೋತಿ ಗುರುಪ್ರಸಾದ್)


"ಮದುವೆಯಾದೊಡನೆ ಈ ಹುಡುಗಿಯರು 
ಗೋಡೆಗೆ  ಮೊಳೆ ಬಡಿಸಿಕೊಂಡ ಚಿಟ್ಟೆಗಳಾಗುತ್ತಾರೆ ಮಾತು ಮರೆತ ಗಿಳಿಗಳಾಗುತ್ತಾರೆ 
ಮಂಜು ಮುಸುಕಿದ ಹೂಗಳಾಗುತ್ತಾರೆ"
                        (ಸಂಧ್ಯಾರೆಡ್ಡಿ)


ಜಾತಿಯಲ್ಲದ ಜಾತಿಯವನಿಗೆ 
ಹುಡುಗಿ ಮನಸೋತರೆ 
ಅವರು ಸುಮ್ಮನಿರಲಾದೀತೇ 
ಸರಿಯಾದ ಗೋತ್ರ ಸೂತ್ರಕ್ಕೆ 
ಧಾರೆ ಎರೆದು ನಿಟ್ಟುಸಿರಿಟ್ಟರು
                      ---ವಿಜಯಾ ದಬ್ಬೆ

"ಮೊಲೆಗೂ ಯೋನಿಗೂ , ಮೊಲೆ ಹಾಲಿಗೂ
ತಡೆ ಹಿಡಿದ ರಕ್ತ ಸ್ರಾವಕ್ಕೂ
ಬೇರೆ ಬೇರೆಯೇ ಅರ್ಥ
ಧರ್ಮಕಾರಣದಲ್ಲಿ" 

"ಅವನ ಭವಿಷ್ಯದಲ್ಲಿ ಅವಳಿಲ್ಲ
ಅವಳ ಚೇರಿತ್ರೆಯೊಳಗೆ ಅವನಿದ್ದಾನೆ"-- (ಕಥಾನಕ)




ಸ್ತ್ರೀ ಲೋಕದ ತಲ್ಲಣಗಳು:---


೮೫ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಲಬುರ್ಗಿ

ಗೋಷ್ಠಿ:

ಸ್ತ್ರೀ ಲೋಕದ ತಲ್ಲಣಗಳು:----


೧.ಮಹಿಳೆ ಮತ್ತು ಪ್ರಭುತ್ವ:-

He Stories ಈವರೆಗಿನ ಚರಿತ್ರೆಯ ಪುಟಗಳಲ್ಲಿ ಕೇವಲ ಪುರುಷಕೇಂದ್ರಿತ ನಿಲುವುಗಳು ಹಾಗೂ ಪುರುಷನನ್ನೇ ಸಂಕೇತಿಸುವ ಸಾಧುಸಂತರು, ಸೈನಿಕರ, ಕಾರ್ಮಿಕರ, ಪ್ರಭುಗಳ ಅಟ್ಟಹಾಸ ಚಿತ್ರಿತವಾಗಿದೆ.
ಧಾರ್ಮಿಕ, ಸಾಮಾಜಿಕ, ರಾಜಕೀಯವಾಗಿ ಪ್ರಭುತ್ವ ಹೇಗೆ ಪುರುಷಕೇಂದ್ರಿತ ನಿಲುವುಗಳಿಂದ ಹೆಣ್ಣನ್ನು ಕಟ್ಟುಪಾಡುಗಳ ಚೌಕಟ್ಟಿನಲ್ಲಿ ಬಂಧಿಸಿ, ಲಿಂಗ ರಾಜಕಾರಣ ಧೋರಣೆ ಅನುಸರಿಸುತ್ತಿದೆ...
ಹೆಣ್ಣು...
" ಮಾತೇ ಇಲ್ಲವೆ ಮಾಯೆ" ಮಾತೆಯಾಗಿ ಬಹು ಮಾನ್ಯಳು, ಪೂಜ್ಯಳು ಮಾಯೆಯಾಗಿ, ಮೋಹಿನಿಯಾಗಿ, ಪುರುಷನನ್ನು ಮರುಳು ಮಾಡುವವಳು, ಹಾದಿ ತಪ್ಪಿಸುವವಳು, ಜಗತ್ತಿನ ಪಾಪವನ್ನೆಲ್ಲ ಸಂಕೇತಿಸುವವಳು.
ಹೆಣ್ಣನ್ನು ದೈವಿಕರಿಸುವ  ಹಿಂದಿನ ಸತ್ಯ ಹಾಗು ವಾಸ್ತವ ಸ್ಥಿತಿ ಅರಿವಾಗಬೇಕಿದೆ.

ಹಣ ಮತ್ತು ಅಧಿಕಾರದ ಪಾಲು ಹೆಣ್ಣು...?
ದೇವೇಂದ್ರ ಸೇರಿ ಮಹಿಳೆಗೆ ಕೊಡುವ ಸ್ಥಾನ...?

ಪಿತೃಪ್ರಧಾನ ಅಧಿಕಾರ ನಿಯಂತ್ರಣ ,ಚಾಲನೆ ವರ್ಗ ,ವರ್ಣ ಸಾರ್ವತ್ರಿಕ ಹಾಗೂ ವೈಯಕ್ತಿಕತೆಯಲ್ಲಿ ಪುರುಷ ನಿಲುವುಗಳು ಹೇಗೆ ನಿಯಂತ್ರಿಸುತ್ತವೆ ಹಾಗೂ ಮಹಿಳೆಯನ್ನು ಮೌಢ್ಯದ ಚೌಕಟ್ಟಿನಲ್ಲಿ ಬಂಧಿಸುತ್ತವೆ .

"ಬೆಟ್ಟದ ಮುಂದಿನ ಧೂಳು" ಎಂಬಂತೆ ಪ್ರಭುತ್ವ ಮತ್ತು ಮಹಿಳೆ ನಡುವಿನ ಅಗಾಧ ಕಂದರವನ್ನುಂಟು ಮಾಡಿದೆ.

ಕುಂತಿ, ಗಾಂಧಾರಿ, ದ್ರೌಪದಿ, ಸೀತಾ, ಕಥೆಯೇ ಬೇರೆ .. ಸಂಕೋಲೆಗಳ ಸರಮಾಲೆ, ಬಹುರೂಪದ ಬೇಡಿ.
ಅಸಮಾನತೆಯನ್ನು ಜೀವಂತಿಕೆ ರೂಪಿಸುವುದೇ ಪ್ರಭುತ್ವದ ಮೂಲ ಮಂತ್ರ.

ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನ ಸಮಾನತೆಯ, ಬಿಡುಗಡೆ, ಹಕ್ಕು -- ಎಂಬುದು ಪೂರ್ಣವಾಗಿ ಹೆಣ್ಣಿಗೆ ದಕ್ಕಿದಾಗ ಮಾತ್ರ ಅವಳು ಪ್ರಭುತ್ವದ
 ಪ್ರತಿನಿಧಿಯಾಗುವಳು...

ಸರ್ಕಾರ ಮಹಿಳಾ ಸಬಲೀಕರಣ ಹೆಸರಿನಲ್ಲಿ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತದೆ ಆದರೆ ಮಹಿಳೆಯರಿಗೆ ಕೇವಲ ವಿನಾಯಿತಿಗಳು - ರಿಯಾತಿಗಳು ಎಂಬ ಹೆಸರಲ್ಲೇ ಕೊನೆಯಾಗವುದು. ಇದರಿಂದ ನಿಜವಾಗಿಯೂ ಮಹಿಳೆಯರ ಏಳ್ಗೆ ಅಸಾಧ್ಯ..!

ಮೊದಲು ಹೆಣ್ಣಿಗೆ ಹುಟ್ಟುವ ಹಕ್ಕಾದರೂ ಇತ್ತು. ಈಗ ಹುಟ್ಟುವ ಮೊದಲೇ ಹೊಸಕಿಹಾಕುವ ತಂತ್ರಜ್ಞಾನ -ಬೇಟಿಯ ಬೇಟೆ.

ಮಹಿಳೆಗೆ ಶೌಚಾಲಯವು ಬೇಕು .ಅದನ್ನು ರೂಪಿಸುವ ನಿರ್ದೇಶಿಸುವ ಹಕ್ಕು, ರಾಜಕೀಯ ಅಡಿಪಾಯದ ಅಧಿಕಾರದ ಚುಕ್ಕಾಣಿ ಬೇಕು.

"ಭಾರತ್ ಮಾತಾಕಿ ಜೈ "ಎಂದರೆ ಅಷ್ಟೇ ಸಾಲದು .ಮಹಿಳೆಗೆ ಸಂಸತ್ತಿಗೆ ಸ್ಪರ್ಧಿಸುವ ಹಕ್ಕು,  ಮಹಿಳೆಗೆ ಸಂಬಂಧಿಸಿದ ಮಸೂದೆ ಸಂಸತ್ತಿನಲ್ಲಿ ಅಂಗೀಕಾರ, ಹಾಗೆ ಸಂಪೂರ್ಣ ಮೀಸಲಾತಿ ಹಕ್ಕು ದೊರೆಯುವಂತಾಗಬೇಕು...

ಪ್ರಭುತ್ವದ ವಿರುದ್ಧ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದಾಗ, ಅದನ್ನು ಉಳಿಸಲು ಮಹಿಳೆ ಸವಾಲು ಹಾಕುತ್ತಿದ್ದಾಳೆ ಬಹಿರಂಗ ಹೋರಾಟ ,ಪ್ರತಿರೋಧ ಪ್ರದರ್ಶನಕ್ಕೆ ಇಳಿದಿದ್ದಾಳೆ.


"ಮೂಲ ಸೆಲೆ ಅವರ ಕರುಳಿನಲ್ಲಿ ನೆಲೆಯೂರಿರುವ ಕರುಳಿನ ಸಮಾನತೆ"
ದೊರಕಿದಾಗ ಮಾತ್ರ ಹೆಣ್ಣು ಆಳುವ ವರ್ಗವಾಗಿ ಪ್ರವೇಶ ಪಡೆಯುತ್ತಾಳೆ... ಪಡೆಯುತ್ತಿದ್ದಾಳೆ.




೨.ಮಹಿಳೆ ಮತ್ತು ಸೃಜನಶೀಲತೆ
                    ---ತಾರಿಣಿ ಶುಭದಾಯಿನಿ.

ಸ್ತ್ರೀತ್ವ- ಪ್ರಕೃತಿ ಸೃಷ್ಟಿಶೀಲತೆ.

೧.ವ್ಯವಸ್ಥೆಯ ವಿರುದ್ಧವಾಗಿ ಮೌಲ್ಯಗಳನ್ನು ಪ್ರತಿರೋಧದ ನೆಲೆ

೨.ಅನನ್ಯತೆ ನೆಲೆ

ಪುರಾಣದ (ಮಿಥ್ ) ಪರ್ಯಾಯ ರೂಪಿಸಿಕೊಳ್ಳುವುದು:

ಕಂಬಾರರ ಪುಣ್ಯಕೋಟಿ: ಜನಪದ- ಅಮ್ಮ ಹೇಳಿದ ಸುಳ್ಳು ಒಂದು ಹೆಣ್ಣು ಮತ್ತೊಂದು ಹೆಣ್ಣನ್ನು ರಕ್ಷಿಸುವಂತೆ ಇರಬೇಕು.
ಹೆಣ್ಣು ಕಟ್ಟಿದ ಕಥೆಗಳು: ಸೃಷ್ಟಿ ಕಡೆ, ಬದುಕು ಜೀವನದೆಡೆಗೆ ಸಹಜತೆ ಬಯಸುತ್ತವೆ.

ಪ್ರಧಾನ ಸಂಸ್ಕೃತಿಯ ಅಡಿಯಲ್ಲಿ ಹೆಣ್ಣು ಕೇವಲ ಅಡುಗೆ ಮನೆಗೆ, ಹಿತ್ತಲು, ಮಕ್ಕಳು, ಸಂಸಾರ, ಜೈವಿಕ ಬಂಧನಕ್ಕೆ ಸೀಮಿತವಾಗಿದ್ದರೂ... ಕಲೆ, ಕಸೂತಿ, ರಂಗೋಲಿ, ತನ್ನ ದುಡಿಮೆ ಮತ್ತು ಸೃಜನಶೀಲತೆಯಿಂದ ಆಧುನಿಕೋತ್ತರ ಮಾರುಕಟ್ಟೆಗೆ ಸಾಕ್ಷಿಯಾಗುತ್ತಾಳೆ...

ಹೆಣ್ಣು ಬಳಸುವ ಅಹಿಂಸಾ ತಂತ್ರ ಹಾಗೂ ಉಪ್ಪು ವಸಹತೋತ್ತರ ಚಿಂತನೆಯಿಂದ --ಗಾಂಧಿ ಪ್ರಭಾವಿತ...





೩.ಮಹಿಳಾ ಮತ್ತು ಲೋಕಗ್ರಹಿಕೆ
                 ---ಪ್ರೊ// ಶ್ರೀಮತಿ ಶಿವಗಂಗಾ ರುಮ್ಮಾ.


ಲೋಕದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಎಲ್ಲಾ ಅನಿಷ್ಟಕ್ಕೆ ಮಹಿಳೆಯೇ ಕಾರಣ ಎಂದು ಸಾರುತ್ತ ಬಂದಿರುವುದನ್ನು-- ಪರಂಪರೆ , ದೈವತ್ವ ನಂಬಿಕೆ-ಮೂಢನಂಬಿಕೆಯ ಇನ್ನೊಂದು ದೃಷ್ಟಿಕೋನ.

ಪ್ರಭುತ್ವ -"ಮೌಢ್ಯದ ಮುಖಾಂತರ ಜನರನ್ನು ಆಳುತ್ತದೆ".

ಜನರಿಗೆ ಪೂರಕವಾಗಿರುವುದು ಕಾಮನ್ ಸೆನ್ಸ್:
ಹೆಣ್ಣು ಅಬಲೆ, ಚಂಚಲೇ, ಬುದ್ಧಿ-ಮನ್ ಕಾಲ್ಕೆಳಗೆ ,ಅಪಶಕುನ ,ಕನಿಷ್ಠ, ದಾರಿದ್ರ್ಯ ಎಂಬ ಇತ್ಯಾದಿ ಲೋಕಗ್ರಹಿಕೆಗಳಿವೆ.

"ಕಾರ್ಯಕಾರಣ ಸಂಬಂಧ" - ನಂಬಿಕೆ ಲೋಕವನ್ನಾಳುತ್ತದೆ.

"ಹೆಣ್ಣು ಮಗು ಹುಟ್ಟಿದರೆ ಮೊದಲು ಶುಭ" ಈಗ "ಗಂಡು ಮಗು" ಎಂಬ ಲೋಕಗ್ರಹಿಕೆ ಕಾಲಕಾಲಕ್ಕೆ "ಪ್ರಭುತ್ವದ" ಭಾಗವಾಗಿ ಬದಲಾವಣೆಯಾಗಿದೆ.


ಉತ್ತರ ಮತ್ತು ದಕ್ಷಿಣ ಭಾರತದ ಸಾಂಸ್ಕೃತಿಕ ಭಿನ್ನತೆ:

ವರದಕ್ಷಿಣೆ, ಬಲತ್ಕಾರ ,ಭ್ರೂಣಹತ್ಯೆ ಹೆಚ್ಚಾಗಿ ಉತ್ತರಭಾರತದಲ್ಲಿ  ಕಂಡುಬರುತ್ತವೆ...

ಉತ್ತರ ಭಾರತದಲ್ಲಿನ ಮಹಿಳೆಗೆ ಸಾಹಿತ್ಯ ರಚನೆಯಲ್ಲಿ (ಸಂಸ್ಕೃತ) ಅವಕಾಶ ಗೌಣ.

ಮಹಿಳೆಯರಿಗೆ ಸಾಹಿತ್ಯ ರಚನೆಯಲ್ಲಿ ಅವಕಾಶ ದೊರೆತ್ತಿದ್ದು ಮೊದಲು ದಕ್ಷಿಣ ಭಾರತದಲ್ಲಿ...
ವಿಜ್ಜಿಕ... ಗಂಗಾದೇವಿ...

•ನೀತಿ ಕಾವ್ಯ ದ.ಭಾ---ಶಂಕರ್ ಮೊಕಾಶಿ
•ದಲಿತ ಆತ್ಮಕಥೆಗಳು ಆರಂಭ--ದ.ಭಾ
•ಮಿತಾಕ್ಷರ ಸಂಹಿತೆ: (ಹಿಂದೂ ಕಾನೂನು ಗ್ರಂಥ)
ಮಹಿಳೆಗೆ ಆಸ್ತಿ ಹಕ್ಕು ಪ್ರತಿಪಾದಿಸಿದ್ದು.
•ಮಹಿಳೆಯನ್ನು ಕಥ ನಾಯಕಿಯಾಗಿ ಕಾವ್ಯರಚನೆ:
ಮಣಿಮೇಖಲೆ, ಶಿಲಪ್ಪದಿಗಾರಂ ,ಶಾಕುಂತಲ (ದಕ್ಷಿಣ ಭಾರತದ ನಂಟು) ಬಾಣ ಕಾದಂಬರಿ, ಕರ್ನಾಟಕ ಕಾದಂಬರಿ...


ಮಹಿಳೆ ಅಬಲೆ:-
ಮಹಿಳೆಗೆ ರೋಗ ನಿರೋಧಕ ಶಕ್ತಿ ಹಾಗು ಜೀವಿತಾವಧಿ ಅಧಿಕ.

ಲತೆಯಂತೆ ಮರದ ಆಸರೆ ಪಡೆದವಳೆಂದು ಜೀವ ಮಹಿಳಾ ವಿರೋಧಿ ನೆಲೆಗಳು ಬಿತ್ತುತ್ತಿರುವುದು --ಪ್ರಭುತ್ವ.


ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶ:

ಪ್ರಾಚೀನ ಭಾರತದ ಲೋಕಗ್ರಹಿಕೆ: ಮಹಿಳೆಯೇ ಪೂಜಾರಿ.

ಇಂದಿನ ಮಹಿಳೆ ಸಂಸತ್ತಿನ ಪ್ರವೇಶ ಪಡೆಯಬೇಕೆ ವಿನಃ ದೇವಾಲಯಗಳ ಪ್ರವೇಶವಲ್ಲ...!

ಮನಸ್ಥಿತಿ ಬದಲಾಗದಿದ್ದರೆ ಪರಿಸ್ಥಿತಿ ಬದಲಾಗದು.!
 

Tuesday, 11 February 2020

ಸೂಫಿ ಕಥಾಲೋಕ

ನಿಜಕ್ಕೂ ಅಜ್ಞಾನಿಗಳು ಮಾತ್ರ ತಮ್ಮನ್ನು ತಾವೇ ಪಂಡಿತರು, ತತ್ವಜ್ಞಾನಿಗಳೆಂದು ಕರೆದುಕೊಂಡು ಬೀಗುತ್ತಾರೆ. ಅವರಿಗೆ ವಿಷಯದ ಸ್ಪಷ್ಟತೆ ಇರುವುದಿಲ್ಲ; ದೃಢವಾದ ಅಭಿಪ್ರಾಯವೂ ಇರುವುದಿಲ್ಲ` ಎಂದೆಲ್ಲಾ ನಸ್ರುದ್ದೀನನು  ಎಲ್ಲಾ ಕಡೆ ಹೇಳಿಕೊಂಡು ತಿರುಗುತ್ತಿದ್ದಾನೆ . ಇದರಿಂದ ನಮ್ಮ ಘನತೆಗೆ ಚ್ಯುತಿ ಬಂದಿದೆ. ಅಷ್ಟೇ ಅಲ್ಲ ದೇಶದ ಭದ್ರತೆಗೆ ಇದರಿಂದ ಅಪಾಯವಿದೆ ಎಂದು ತತ್ವಜ್ಞಾನಿಗಳು ಮತ್ತು ಪಂಡಿತರು ರಾಜನಲ್ಲಿ ದೂರಿದರು. ನಸ್ರುದ್ದೀನ್ ತಾನು ಹಾಗೆ ಹೇಳಿದ್ದು ನಿಜ ಎಂದು ಒಪ್ಪಿಕೊಳ್ಳಲು ಹಿಂಜರಿಯಲಿಲ್ಲ ಆರೋಪದ ವಿಚಾರಣೆಗಾಗಿ ರಾಜನು ಆ ತತ್ವಜ್ಞಾನಿಗಳು, ಘನಪಾಠಿಗಳು ಮತ್ತು ಕಾನೂನು ಪಂಡಿತರು ಗಳನ್ನು ಆಸ್ಥಾನದಲ್ಲಿ ಸೇರಿಸಿದ.

"ಮೊದಲು ಮಾತನಾಡುವ ಸರದಿ ನಿನ್ನದು" ಎಂದ ರಾಜ.

"ಬರೆಯಲು ಹಾಳೆ ಮತ್ತು ಲೇಖನಿಗಳನ್ನು ತರಿಸಿ" ಎಂದ ನಸ್ರುದ್ದೀನ್.

ಅವುಗಳನ್ನು ತರಿಸಲಾಯಿತು.

ಅವುಗಳನ್ನು ಇಲ್ಲಿ  ಬಂದಿರುವ ಏಳು ಮಂದಿ ಪಂಡಿತರಿಗೂ ಹಂಚಿಸಿ.

ಹಾಗೆಯೇ ಹಂಚಲಾಯಿತು.

"ರೊಟ್ಟಿ ಎಂದರೇನು?-- ಈ ಪ್ರಶ್ನೆಗೆ ಪ್ರತಿಯೊಬ್ಬರು ಪ್ರತ್ಯೇಕವಾಗಿ ಉತ್ತರ ಬರೆಯಬೇಕು".

ಏಳುಮಂದಿ ಉತ್ತರಗಳನ್ನು ಸಿದ್ಧಪಡಿಸಿದ್ದರು.
ಅವುಗಳನ್ನು ರಾಜನಿಗೆ ಒಪ್ಪಿಸಿ ಸಭೆಗೆ ಓದಿ ಹೇಳಲು  ಕೇಳಿಕೊಂಡ. ಅವರು ಬರೆದ ಉತ್ತರಗಳು ಹೀಗಿದ್ದವು:

ಮೊದಲನೆಯವನು: "ರೊಟ್ಟಿ ಎಂಬುವುದು ತಿನ್ನುವ ವಸ್ತು".

೨....."ಅದು ಹಿಟ್ಟು ಮತ್ತು ನೀರು".

೩.... "ದೇವರ ಕರುಣೆಯ ಪ್ರತಿಕ".

೪.... "ಬೇಯಿಸಲ್ಪಟ್ಟ ಮಿದ್ದಿದ ಹಿಟ್ಟಿನ ಖಾದ್ಯ".

೫.... ರೊಟ್ಟಿ ಎಂಬುದಕ್ಕೆ ಭಿನ್ನ ಭಿನ್ನ  ಅರ್ಥಗಳಿವೆ ಅರ್ಥ ಮಾಡಿಕೊಳ್ಳುವವರ ಮೇಲೆ ಅದರ ಅರ್ಥ ಅವಲಂಬಿಸಿದೆ.

೬.... "ಒಂದು ಪೌಷ್ಟಿಕ ಆಹಾರ".

ಏಳನೆಯವನು: "ಅದು ನಿಜವಾಗಿಯೂ ಏನು ಎಂಬುದು ಯಾರಿಗೂ ತಿಳಿಯದು".


ಆಗ ನಸ್ರುದ್ದೀನ್, "ಮಹಾರಾಜ ರೊಟ್ಟಿ ಎಂದರೇನು ಎಂಬುದರ ಬಗ್ಗೆಯೇ  ಇವರಲ್ಲಿ ಒಮ್ಮತದ ನಿರ್ಣಯ ಮೂಡಿಬರುವುದು ಸಾಧ್ಯವಿಲ್ಲ. ಹೀಗಿರುವಾಗ ಇತರ ವಿಷಯಗಳ ಬಗ್ಗೆ ಇವರು ನಿರ್ಣಯ ಕೊಡುವುದು ಹೇಗೆ ಸಾಧ್ಯ..? ನನ್ನ ಮೇಲಿರುವ ಆರೋಪದ ವಿಷಯವನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ: ನಾನು ಹೇಳಿದ್ದು ಸರಿಯೋ-ತಪ್ಪೋ ಅದನ್ನು ನಿರ್ಣಯಿಸಲು ಇವರನ್ನು ತೀರ್ಪುಗಾರರಾಗಿ ಕರಿಸಿದ್ದೀರಿ. ದಿನವೂ ತಿನ್ನುವ ರೊಟ್ಟಿಯ ಬಗ್ಗೆಯೇ  ಒಮ್ಮತವಿಲ್ಲದ ಇವರು ನಾನು ಧರ್ಮ ವಿರೋಧಿ ಎಂದು ಆರೋಪ ಹೊರಿಸುವಲ್ಲಿ ಮಾತ್ರ ಒಂದಾಗಿ ಬಿಡುತ್ತಾರೆ . ಎಂಥ ವಿಪರ್ಯಾಸ.?" ಎಂದು ಹೇಳಿದ.


                     -ಸೂಫಿ ಕಥಾಲೋಕ


ಸೂಫಿ ಕಥಾಲೋಕ

#ಸೂಫಿ #ಕಥಾಲೋಕ...


ನದಿಯ ಆ ದಡದಲ್ಲಿ ಒಬ್ಬ ಯ-ಹು ಅನ್ನೋದನ್ನ  ಉ-ಯ-ಹು ಎಂದು ಉಚ್ಚರಿಸುತ್ತಿದ್ದ.

ನದಿಯ ಈ ತಟದಲ್ಲಿ ಒಬ್ಬ ಜ್ಞಾನಿ ಅದನ್ನು ಅವನಿಗೆ ತಿಳಿ ಹೇಳಿ ಇದು ತಪ್ಪು ತಪ್ಪು ಎಂದು 
"ಅರಿವು ನೀಡುವವನು ಮತ್ತು ಅರಿವು ಪಡೆಯುವವನು ಇಬ್ಬರು ಅದಕ್ಕೆ ಯೋಗ್ಯ ಇದ್ದಾಗಲೇ ಇಂತಹ ಸಂಯೋಗವು ಸಾಧ್ಯ‌. ಶಬ್ದಗಳನ್ನು ಹೀಗೆ ಉಚ್ಚರಿಸಬೇಕೆಂದು"
ತಿದ್ದಿ ಹೇಳಿ ಮರಳಿ  ದಡ ಸೇರಿದ ನಿಷ್ಠಾವಂತ ಸಂಪ್ರದಾಯಿ...

ಸ್ವಲ್ಪಹೊತ್ತಿನ ನಂತರ ಯ-ಉ  ಎಂಬ ಇತ್ಯಾದಿ ಉದ್ಘೋಷವು ಮತ್ತೆ ಕೇಳಿಬಂತು...

ಮನುಷ್ಯನ ಮೊಂಡುತನಕ್ಕೆ ಏನು ಹೇಳುವುದು..? ತಪ್ಪು ಎಂದು ತಿಳಿಸಿ ಹೇಳಿದರೂ ತಿದ್ದಿಕೊಳ್ಳದ ಅವನ  ಮಂದಬುದ್ಧಿಗೆ ಏನು ಹೇಳಬೇಕು..? ಹೀಗೆ ಯೋಚಿಸುತ್ತಿರುವಂತೆಯೇ ಆಶ್ಚರ್ಯಕರ ದೃಶ್ಯವೊಂದು ಸೂಫಿಯ ಕಣ್ಣಿಗೆ ಬಿತ್ತು. ನದಿಯ ನಡುಗಡ್ಡೆಯಿಂದ ಆ ದರವೇಶಿಯು ಅವನತ್ತ ಬರುತ್ತಿದ್ದ, ನದಿಯ ಮೇಲೆ ನಡೆದುಕೊಂಡು.....!

ಸೂಫಿಯು ನಿಬ್ಬೆರಗಾದ. ದೋಣಿಯ ಹುಟ್ಟು ಹಾಕುವುದು ನಿಂತಿತು. ಧರವೇಶಿಯು  ಅವನ  ಬಳಿಗೆ ನಡೆದುಕೊಂಡು ಬಂದು:

"ಸೋದರನೆ, ತೊಂದರೆ ಕೊಡುತ್ತಿದ್ದೇನೆ. ದಯವಿಟ್ಟು ಕ್ಷಮಿಸು. ನೀನು ಹೇಳಿಕೊಟ್ಟದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಲು ಕಷ್ಟ. ನೀನು ಹೇಳಿಕೊಟ್ಟದ್ದನ್ನು ನೀನು ತೋರಿಸಿದ ಮಾದರಿಯಲ್ಲೇ ಸ್ಪುಟವಾಗಿ ನಿನ್ನ ಹಾಗೆಯೇ ಉಚ್ಚರಿಸುವುದು ಹೇಗೆ ಹೇಳಿಕೊಡು. ಅದಕ್ಕಾಗಿಯೇ ನಾನು ಈಗ ನಿನ್ನ ಬಳಿಗೆ ಬರಬೇಕಾಯಿತು". ಎಂದು ಹೇಳಿದ.



       ---ಅಸ್ಸಾಸಿನ್ ಪಂಥಕ್ಕೆ ಸೇರಿದ ಕತೆ

Wednesday, 5 February 2020

ಸೂಫಿ ಕಥಾಲೋಕ

ನಿಜಕ್ಕೂ ಅಜ್ಞಾನಿಗಳು ಮಾತ್ರ ತಮ್ಮನ್ನು ತಾವೇ ಪಂಡಿತರು, ತತ್ವಜ್ಞಾನಿಗಳೆಂದು ಕರೆದುಕೊಂಡು ಬೀಗುತ್ತಾರೆ. ಅವರಿಗೆ ವಿಷಯದ ಸ್ಪಷ್ಟತೆ ಇರುವುದಿಲ್ಲ; ದೃಢವಾದ ಅಭಿಪ್ರಾಯವೂ ಇರುವುದಿಲ್ಲ` ಎಂದೆಲ್ಲಾ ನಸ್ರುದ್ದೀನನು  ಎಲ್ಲಾ ಕಡೆ ಹೇಳಿಕೊಂಡು ತಿರುಗುತ್ತಿದ್ದಾನೆ . ಇದರಿಂದ ನಮ್ಮ ಘನತೆಗೆ ಚ್ಯುತಿ ಬಂದಿದೆ. ಅಷ್ಟೇ ಅಲ್ಲ ದೇಶದ ಭದ್ರತೆಗೆ ಇದರಿಂದ ಅಪಾಯವಿದೆ ಎಂದು ತತ್ವಜ್ಞಾನಿಗಳು ಮತ್ತು ಪಂಡಿತರು ರಾಜನಲ್ಲಿ ದೂರಿದರು. ನಸ್ರುದ್ದೀನ್ ತಾನು ಹಾಗೆ ಹೇಳಿದ್ದು ನಿಜ ಎಂದು ಒಪ್ಪಿಕೊಳ್ಳಲು ಹಿಂಜರಿಯಲಿಲ್ಲ ಆರೋಪದ ವಿಚಾರಣೆಗಾಗಿ ರಾಜನು ಆ ತತ್ವಜ್ಞಾನಿಗಳು, ಘನಪಾಠಿಗಳು ಮತ್ತು ಕಾನೂನು ಪಂಡಿತರು ಗಳನ್ನು ಆಸ್ಥಾನದಲ್ಲಿ ಸೇರಿಸಿದ.

"ಮೊದಲು ಮಾತನಾಡುವ ಸರದಿ ನಿನ್ನದು" ಎಂದ ರಾಜ.

"ಬರೆಯಲು ಹಾಳೆ ಮತ್ತು ಲೇಖನಿಗಳನ್ನು ತರಿಸಿ" ಎಂದ ನಸ್ರುದ್ದೀನ್.

ಅವುಗಳನ್ನು ತರಿಸಲಾಯಿತು.

ಅವುಗಳನ್ನು ಇಲ್ಲಿ  ಬಂದಿರುವ ಏಳು ಮಂದಿ ಪಂಡಿತರಿಗೂ ಹಂಚಿಸಿ.

ಹಾಗೆಯೇ ಹಂಚಲಾಯಿತು.

"ರೊಟ್ಟಿ ಎಂದರೇನು?-- ಈ ಪ್ರಶ್ನೆಗೆ ಪ್ರತಿಯೊಬ್ಬರು ಪ್ರತ್ಯೇಕವಾಗಿ ಉತ್ತರ ಬರೆಯಬೇಕು".

ಏಳುಮಂದಿ ಉತ್ತರಗಳನ್ನು ಸಿದ್ಧಪಡಿಸಿದ್ದರು.
ಅವುಗಳನ್ನು ರಾಜನಿಗೆ ಒಪ್ಪಿಸಿ ಸಭೆಗೆ ಓದಿ ಹೇಳಲು  ಕೇಳಿಕೊಂಡ. ಅವರು ಬರೆದ ಉತ್ತರಗಳು ಹೀಗಿದ್ದವು:

ಮೊದಲನೆಯವನು: "ರೊಟ್ಟಿ ಎಂಬುವುದು ತಿನ್ನುವ ವಸ್ತು".

೨....."ಅದು ಹಿಟ್ಟು ಮತ್ತು ನೀರು".

೩.... "ದೇವರ ಕರುಣೆಯ ಪ್ರತಿಕ".

೪.... "ಬೇಯಿಸಲ್ಪಟ್ಟ ಮಿದ್ದಿದ ಹಿಟ್ಟಿನ ಖಾದ್ಯ".

೫.... ರೊಟ್ಟಿ ಎಂಬುದಕ್ಕೆ ಭಿನ್ನ ಭಿನ್ನ  ಅರ್ಥಗಳಿವೆ ಅರ್ಥ ಮಾಡಿಕೊಳ್ಳುವವರ ಮೇಲೆ ಅದರ ಅರ್ಥ ಅವಲಂಬಿಸಿದೆ.

೬.... "ಒಂದು ಪೌಷ್ಟಿಕ ಆಹಾರ".

ಏಳನೆಯವನು: "ಅದು ನಿಜವಾಗಿಯೂ ಏನು ಎಂಬುದು ಯಾರಿಗೂ ತಿಳಿಯದು".


ಆಗ ನಸ್ರುದ್ದೀನ್, "ಮಹಾರಾಜ ರೊಟ್ಟಿ ಎಂದರೇನು ಎಂಬುದರ ಬಗ್ಗೆಯೇ  ಇವರಲ್ಲಿ ಒಮ್ಮತದ ನಿರ್ಣಯ ಮೂಡಿಬರುವುದು ಸಾಧ್ಯವಿಲ್ಲ. ಹೀಗಿರುವಾಗ ಇತರ ವಿಷಯಗಳ ಬಗ್ಗೆ ಇವರು ನಿರ್ಣಯ ಕೊಡುವುದು ಹೇಗೆ ಸಾಧ್ಯ..? ನನ್ನ ಮೇಲಿರುವ ಆರೋಪದ ವಿಷಯವನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ: ನಾನು ಹೇಳಿದ್ದು ಸರಿಯೋ-ತಪ್ಪೋ ಅದನ್ನು ನಿರ್ಣಯಿಸಲು ಇವರನ್ನು ತೀರ್ಪುಗಾರರಾಗಿ ಕರಿಸಿದ್ದೀರಿ. ದಿನವೂ ತಿನ್ನುವ ರೊಟ್ಟಿಯ ಬಗ್ಗೆಯೇ  ಒಮ್ಮತವಿಲ್ಲದ ಇವರು ನಾನು ಧರ್ಮ ವಿರೋಧಿ ಎಂದು ಆರೋಪ ಹೊರಿಸುವಲ್ಲಿ ಮಾತ್ರ ಒಂದಾಗಿ ಬಿಡುತ್ತಾರೆ . ಎಂಥ ವಿಪರ್ಯಾಸ.?" ಎಂದು ಹೇಳಿದ.


                     -ಸೂಫಿ ಕಥಾಲೋಕ


ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...