Wednesday, 19 February 2020

ಇಲ್ಲಿ‌ ಕವಿತೆಗಳವಿರುದ್ಧ ಕೇಸುಹಾಕಲಾಗುತ್ತೆ ಎಚ್ಚರ...!

ನಾನೂ_ಸಿರಾಜ್

ನಿನ್ನ ದಾಖಲೆ ಯಾವಾಗ ನೀಡುತ್ತಿ?

ಆಧಾರು, ರೇಷನ್ ಕಾರ್ಡಗಳ ಕ್ಯೂನಲ್ಲಿ
ಥಂಬಿನ, ಸರ್ವರಿನ ಮಂಗನಾಟದಲ್ಲಿ
ಬದುಕ ಕಳೆದುಕೊಳ್ಳು ತ್ತಿರುವವರ ದಾಖಲೆ
ಕೇಳುವವನೇ ನಿನ್ನ ದಾಖಲೆ ಯಾವಾಗ ನೀಡುತ್ತಿ?

ನಾಡಿನ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಲೇ ನೇಣಿಗೇರಿದವರ ,
ಹೆಸರೂ ಬೇಡವೆಂದು ಹುತಾತ್ಮರಾದವರ
ಇತಿಹಾಸದ ಹಾಳೆಗಳ ಹರಿಯುತ್ತಿರುವವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ.?

ತಾಜ್ ಮಹಲ್, ಚಾರ್ ಮಿನಾರು ಗುಂಬಜಗಳಿಗೆ
ಕೆಂಪು ಕೋಟೆ ಕುತುಬ್ ಮಿನಾರುಗಳಿಗೆ ಸಾಕ್ಷಿ ಕೇಳುತ್ತಿರುವವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ?

ಬ್ರಿಟಿಷರ ಬೂಟು ನೆಕ್ಕಿದ ತಲೆಹಿಡುಕರ
ಧರ್ಮ ದ್ವೇಷದ ಅಮಲಿನಲ್ಲಿ ರಕ್ತ ಕುಡಿಯುತ್ತಿರುವ
ಗೊಬೆಲ್ ಸಂತತಿಯವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ?

ಪಕೋಡ ಮಾರಿ ಬದುಕಿದವನು
ಚಾ ಮಾರಿ ಬದುಕಿದವನು ನನ್ನೂರಿನಲ್ಲಿ
ಮನುಷ್ಯತ್ವ ಮಾರಿಕೊಂಡಿಲ್ಲ
ಸ್ವಾಭಿಮಾನ ಮಾರಿಕೊಂಡಿಲ್ಲ,
 ಸುಳ್ಳಿನ ಕಂತೆಗಳ ಕತೆ ಕಟ್ಟಿಲ್ಲ
ಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ?

ಮುಳ್ಳು ಚುಚ್ಚಿ, ಹರಿದು, ಸಿಡಿದು ಹೋದ
ಟ್ಯೂಬುಗಳ, ಟೈಯರುಗಳ ತಿದ್ದಿ ತೀಡಿ ಗಾಳಿ ತುಂಬಿದ
ಪಂಚರ್ ನವನು ತನ್ನತನವನ್ನು ಮಾರಿಕೊಳ್ಳಲಿಲ್ಲ
ನೀನು ದೇಶವನ್ನೇ ಮಾರಿಬಿಟ್ಟೆಯಲ್ಲ 
ಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ?

ದೇಶವನ್ನೇ ಯಾಮಾರಿಸಿದ ನಿನಗೆ
ನಕಲಿ ದಾಖಲೆಗಳು ದೊಡ್ಡದಲ್ಲ ಬಿಡು
ಕನಿಷ್ಟ ಮನುಷ್ಯತ್ವವೂ ನಿನಗಿದೆ
ಎನ್ನುವ ದಾಖಲೆ ಯಾವಾಗ ನೀಡುತ್ತಿ ?

ಸಿರಾಜ್ ಬಿಸ್ರಳ್ಳಿ





ಕವಿತೆ :

ಇಲ್ಲಿ‌ ಕವಿತೆಗಳ
ವಿರುದ್ಧ ಕೇಸು
ಹಾಕಲಾಗುತ್ತೆ
ಎಚ್ಚರ 

ಕವಿತೆಗಳು
ತಗ್ಗಿ ಬಗ್ಗಿ
ನಡೆಯುವುದನ್ನು
ಕಲಿಯಬೇಕು

ಕವಿತೆಗಳು
ಅಧಿಕಾರಸ್ಥರ 
ವಿರುದ್ಧ ಎದೆ ಸೆಟೆದು
ಸೆಡ್ಡು ಹೊಡೆಯುವುದನ್ನು
ಬದಲಿಸಿಕೊಳ್ಳಬೇಕು

ಕವಿತೆಗಳು
ಪ್ರಭುಗಳ ನೀತಿ ನಿಯಮಗಳನ್ನು
ಅರ್ಥ ಮಾಡಿಕೊಂಡು
ಪ್ರಭುಗಳಿಗೆ ವಿಧೇಯತೆಯನ್ನು
ತೋರಿಸಬೇಕು

ಕವಿತೆಗಳು
ತಿಕ ತೀರಿಗಿಸಿದರೆ
ತಿಕ ಗಂಜಲಿ
ಮಾಡಿದರೆ ಗೊತ್ತಿದೆ
ತಿಕ ಹೊಡೆಯುವ
ಕಲೆ ಪ್ರಭುಗಳಿಗೆ

ಕವಿತೆಗಳ
ವಿರುದ್ಧ ಪ್ರಭುಗಳು
ತಮ್ಮ ಸಾಕು ನಾಯಿಗಳನ್ನು
ಚೂ ಬಿಡುತ್ತಾರೆ
ಕೇಸು ಹಾಕಿಸುತ್ತಾರೆ
ವಾರಂಟ್ ಕಳಿಸುತ್ತಾರೆ

ಕವಿತೆಗಳು
ಪೋಲಿಸ್ ಸೆಲ್ಲಿನಲ್ಲಿ
ಕೋರ್ಟಿನ ಕಟಕಟೆಯಲ್ಲಿ
ನಿಂತು ತನ್ನ ನಿರ್ದೋಷಿತನವನ್ನು
ತಾನು ಹೇಳುತ್ತಿರುವ
ಕವಿತ್ವದ ಸಾರವನ್ನು
ಕಾವ್ಯದ ಕಾರ್ಯಕಾರಣವನ್ನು
ಪ್ರಭುಗಳಿಗೆ ತಿಳಿಸಬೇಕು
ಕವಿತೆ ತನ್ನ ಕವಿತ್ವದಲ್ಲಿ
ಪ್ರಭುಗಳ ವಿರುದ್ದದ
ಕಾವ್ಯವಿಲ್ಲವೆಂದು
ಸಾಬೀತು ಮಾಡಲು 
ಸೋತರೆ
ಕಾವ್ಯದಲ್ಲಿ ಪ್ರಭುಗಳ
ವಿರುದ್ಧದ ಪದಗಳಿವೆ
ಎಂಬುದು ಕಂಡುಬಂದರೆ
ಕವಿತೆಗಳ ವಿರುದ್ದ 
ಕೇಸು ಬೀಳುತ್ತೆ
ಎಚ್ಚರ‌ !

- ಆರ್.ಜೆ



ಪ್ರಜಾಪ್ರಭುತ್ವ

ಹಿಂದೆಲ್ಲಾ  ರಾಜ
ಸಾಲು ಮರ ನೆಡಿಸಿ
ಕೆರೆಕಟ್ಟೆ ಕಟ್ಟಿಸಿ
ಮಾನ್ಯನಾಗುತ್ತಿದ್ದನು

ಈಗ ಮರ-ಗಿಡ ಕಡಿದು
ನದಿ ಬತ್ತಿಸಿ ನೆಲ ಬಗೆಯಲು
ಪರವಾನಗಿ ಕೊಟ್ಟು
ಧನ್ಯನಾಗುತ್ತಿರುವನು

ಎಲ್ಲಿ ನೋಡಿದರಲ್ಲಿ
ರಾಕ್ಷಸ ಯಂತ್ರಗಳು

ಎಲ್ಲಾ ಮಟ್ಟಸಗೊಳಿಸಿ
ಕೇಕೆ ಹಾಕುತಿವೆ 
ತಂತ್ರ-ಕುತಂತ್ರಗಳು
 
ತೇರೆಳೆದಿಹರು...
ದೀನ ದರಿದ್ರ ದುರ್ಬಲ ಮಂದಿ
ಹೂವು-ದವನ ಎಸೆದು
ಕೈ ಮುಗಿದು ಹಿಡಿದಿಹರು ದೊಂದಿ

ಸಿಂಹಾಸನದ ಮೇಲೆ
ಕೂತವನೆ ವೇಷಧಾರಿ
ಅರಿಯದೆ ಉಘೆ ಎಂದು
ಕೂಗಿಹರು ಶಕ್ತಿ ಮೀರಿ !

#ಸವಿತಾ ನಾಗಭೂಷಣ




#ಮೌನ

#ವಿನಯ_ಒಕ್ಕುಂದ_ಅವರ_ಪದ್ಯ

ಮೌನ, ಸದ್ಯ ನನ್ನ ಕೊರಳನ್ನು
ಕುಣಿಕೆಯಿಂದ ಪಾರುಮಾಡಬಲ್ಲದು
ಆದರೆ, ಒಳಗೆ ಲಾಳಿಯಾಡುವ
ಲಾವರಸವನ್ನೆಂದಿಗೂ ತಣಿಸಲಾರದು

ಮೌನ, ನನ್ನ ಬಟ್ಟಲಿಗೆ
ಅನ್ನ ಕೊಡಬಹುದು ಮುಫತ್ತಾಗಿ
ಆದರೆ ನೆತ್ತರು ಕೀವುಗಟ್ಟುವ
ದ್ರೋಹದ ಯಾತನೆಯಿಂದ ಪಾರುಗಾಣಿಸದು

ಮೌನ, ಹೆಗಲಿಗೆ ಜರಿಶಾಲನ್ನು
ಕೈಗೆ ಸನ್ಮಾನ ಪತ್ರವನ್ನು ಕೊಡಬಹುದು
ಆದರೆ, ಲಜ್ಜೆಗೆಟ್ಟು ಕೇಡು ಸಂಧಾನಕ್ಕೆ
ಸಂದುಹೋದ ಆತ್ಮದ ಮರ್ಯಾದೆ ಕಾಯುವ
ಕಫನ್ನಿನ ಬಟ್ಟೆಯೂ ಆಗಲಾರದು 

ಮೌನ, ನಮ್ಮಷ್ಟಕ್ಕೇ ನಾವಿರುವ
ಸಭ್ಯತೆಯ ಸೋಗು ಕೊಡಬಹುದು 
ಆದರೆ ಒಳಗೊಳಗೇ ಅರೆಬೆಂದು
ಹಳಸಿದ, ಜೀವತ್ರಾಣವನೆಂದೂ ಮರಳಿಸದು

ಮೌನ ಹರಳುಗಟ್ಟಿದೆ
ಒಳಹೊಕ್ಕು ಪ್ರಾಣವ ಹೆನೆಗೆ ಮಾಡಿದೆ
ಉಪ್ಪುನೀರು ಕುದಿಯೊಡದರೂ ತಣ್ಣಗಿದೆ ಕಣ್ಣೀರು

ನನ್ನ ಮುದ್ದು ದೇಶವೇ
ನಿನ್ನ ಮೇಲಾಡುವ ಗಾಳಿಯಲೆಯಾಣೆ
ಎಲ್ಲರೆಲ್ಲರ ಉಸಿರು ತಾಕಿ ಜುಂಎನ್ನುವ ತ್ರಿವರ್ಣದಾಣೆ
ಮಕ್ಕಳ ನೆತ್ತರಂಟಿದ ಹಾದಿಯಾಣೆ
ಈ ಜವುಳು ಸವಳಿನ ದುರ್ಭರ ದಿನಗಳಲಿ
ಮೌನವೊಂದು ಮಹಾಪಾಪ
ಕಾನ್ಸಂಟ್ರೇಶನ್ ಕ್ಯಾಂಪಿನಿಂದ ಕವಿ ಹೇಳುತ್ತಿದ್ದಾನೆ
ನೊಂದವರ ದ್ವನಿಯಾಗದ ಮೌನ ಮಹಾಪಾಪ 
                             
#ವಿನಯಾ #ಒಕ್ಕುಂದ




#ಗುರುತು_ಬೇಕೇ_ಗುರುತು

ದಿನ ಬೆಳಗಾದರೆ ಎಳೆಬಿಸಿಲಿನಲಿ ಮುತ್ತಿಟ್ಟು
ಮದ್ಹಾಹ್ನ ಬಿರುಬಿಸಿಲಿನಲಿ ಚುರುಕು ಮುಟ್ಟಿಸುವ ಸೂರ್ಯನಿಗೆ
ಹಾಲು‌ಬೆಳದಿಂಗಳಲಿ ಒಲವ ಹಂಚುವ ಚಂದ್ರನಿಗೆ ನನ್ನವರ ಪರಿಚಯವಿದೆ..
ಬೇಕಾದರೆ ಅವರಿಂದ ಗುರುತು ಪಡೆಯಿರಿ..

ಜಾತಿ ಧರ್ಮ ಲಿಂಗದೆಲ್ಲೆಯ ಮೀರಿ
ಎಲ್ಲರ ಉಸಿರು ಗಾಳಿಯಲ್ಲಿ ಬೆರೆತಿದೆ
ಗಾಳಿಯ‌ ಕೊರಳಪಟ್ಟಿ ಹಿಡಿದು ನನ್ನವರ ಗುರುತುಗಳ ಪತ್ತೆಹಚ್ಚಿರಿ..

ನಿಮ್ಮದೇ ಸಿಮೆಂಟ್ ಕಾಂಕ್ರೇಟಿನ
ಹೈವೇ ಕೆಳಗೆ
ಅಜ್ಜಿ ಮುತ್ತಜ್ಜಿಯರು ನಡೆದಾಡಿದ ಹೆಜ್ಜೆಗಳು ಅಪ್ಪಚ್ಚಿಯಾಗಿವೆ..
ನಮ್ಮ ಗುರುತುಗಳಿಗಾಗಿ
ಹೈವೆಗಳನ್ನೆಲ್ಲ ಅಗೆಯುವ ಗುತ್ತಿಗೆ ಯಾರಿಗೆ ಕೊಡುತ್ತೀರಿ?

ಮನೆಯ ಗೋಡೆಗೆ 
ಕಾಲಕಾಲಕ್ಕೆ ಬಳಿದ ಸುಣ್ಣದ ಪದರುಗಳಲ್ಲಿ ಅಚ್ಚಾದ ಚರಿತ್ರೆಯ ಪುಟಗಳ ‌ನೀವು  ಓದಬೇಕು..
ಮೊದಲು ಅವರದ್ದೇ ಭಾಷೆಯ
ಸಂಕೇತಗಳು ನಿಮಗೆ ತಿಳಿದಿರಬೇಕು.

ಭಾರತವೆಂಬ  ಬ್ಲಡ್ ಬ್ಯಾಂಕಿನ
ರಕ್ತದ ಕಣಕಣಗಳಲಿ ಧರ್ಮದ ಗುರುತು ಪತ್ತೆಹಚ್ಚಲು ಸೋತ ನೀವು
ದೇಶದ ಗಡಿರೇಖೆಯಲ್ಲಿ
ಲೋಕದ ಜನರಿಗೆ ಪ್ರೀತಿ ಹಂಚುವ
ನಮ್ಮನ್ನು ದೇಶಬ್ರಷ್ಟರೆಂದಿರಿ..

ಕಡೆಯದಾಗಿ..
ನನ್ನವರ ಬೆವರಹನಿಗಳು ಆವಿಯಾಗಿ ಮೋಡಕಟ್ಟಿ ಮಳೆಯಾಗಿ ಸುರಿದಿವೆ...
ಬಿದ್ದ ಮಳೆ ನೀರಲ್ಲಿ ಕಲೆಸಿಹೋದ
ಗುರುತುಗಳ ಬೇಕಿದ್ದರೆ ಹುಡುಕಿಕೊಳ್ಳಿ...

#ಅಜೋ





Wednesday, 12 February 2020

ಸ್ತ್ರೀವಾದಿ ಚಿಂತನೆ

ಸ್ತ್ರೀವಾದಿ ಚಿಂತನೆ ಮೊದಲನೆಯದಾಗಿ ಸ್ತ್ರೀ-ಪುರುಷರ ನಡುವಿನ ಅಸಮಾನತೆಯನ್ನು ಪ್ರಕೃತಿ ಸಹಜವಲ್ಲ, ಜೈವಿಕ ವಲ್ಲ, ಅದು ಸಾಂಸ್ಕೃತಿಕ ಹಿನ್ನೆಲೆ ಯಾಗಿದ್ದು ಪರಿಸರದ ಕಾರಣದಲ್ಲಿ ಉದ್ಭವಿಸಿದ್ದು ಎಂದು ಹೇಳುತ್ತದೆ.

ಪುರುಷ ದೃಷ್ಟಿಕೋನ ಸಾರ್ವತ್ರಿಕವಲ್ಲ. ಪುರುಷಪ್ರಧಾನ ಮೌಲ್ಯಗಳು ಪ್ರಧಾನ ಸಂಸ್ಕೃತಿ ಅನುಕೂಲಕರವಾದ ಅರ್ಧಸತ್ಯವನ್ನಷ್ಟೇ ಹೇಳುತ್ತದೆ.

ಹೆಣ್ಣುತನದ ಗುಣ ಸ್ವಭಾವಗಳು  ದೈಹಿಕವಾಗಿ ಹೆಣ್ಣಾದ ಮಾತ್ರಕ್ಕೆ ಒಳಗೊಂಡಿರುತ್ತವೆ ಎಂಬ ಮೂಲ ನಂಬಿಕೆಯನ್ನೇ ಸ್ತ್ರೀವಾದ ಪ್ರಶ್ನಿಸುತ್ತದೆ.

ಹೆಣ್ಣು ಗಂಡು ಪರಸ್ಪರ ವಿರುದ್ಧ ವ್ಯಕ್ತಿತ್ವಗಳು ಎಂಬ ಕಲ್ಪನೆಯನ್ನು ಮೊದಲು ತೊಡೆದುಹಾಕಬೇಕಾದ ಅಗತ್ಯವನ್ನು ಸ್ತ್ರೀವಾದ ಗುರುತಿಸಿದೆ.

ಸ್ತ್ರೀವಾದ ದೃಷ್ಟಿಕೋನ ಮಾನವತಾವಾದಿಕ್ಕಿಂತ ಭಿನ್ನವಲ್ಲ ,ಹುಟ್ಟಿನಿಂದಲೇ ಒಂದು ಗುಂಪು ಇನ್ನೊಂದು ಗುಂಪಿನ ಶ್ರೇಷ್ಠ ಎಂಬ ಮೂಲ ಶ್ರೇಣೀಕೃತ ವ್ಯವಸ್ಥೆಯನ್ನು ಸ್ತ್ರೀವಾದ ತಿರಸ್ಕರಿಸುತ್ತದೆ.

ಇತಿಹಾಸದುದ್ದಕ್ಕೂ ಪುರುಷ ಪ್ರಪಂಚದ ಅನುಭವಗಳೇ ಸಾರ್ವತ್ರಿಕವಾಗಿ ಎಂಬಂತೆ ಅಭಿವ್ಯಕ್ತಿಗೊಂಡು, ಸ್ತ್ರೀರಿಯರ ಅನಿಸಿಕೆ ಅನುಭವ, ಸಾಧನೆ ದಾಖಲಾಗದೆ. ಏಕಮುಖ ಚರಿತ್ರೆಯಾಗಿದೆ . ಪುರಾಣ ಪುಣ್ಯಕಥೆಗಳಲ್ಲಿ ಸತಿ ಮಣಿಯರ ಪಾತಿವ್ರತ್ಯವನ್ನು ಒತ್ತಿ ಹೇಳುವಾಗ ಪ್ರತಿಭಟಿಸದೆ ಮೆದುತನವನ್ನೇ ಆದರ್ಶವಾಗಿಸುವ ನಿಂತ ನೀರಲ್ಲಿ ಪುರುಷನ ಪ್ರತಿಬಿಂಬ ಕಂಡೆ ಅಪವಿತ್ರಳಾಗುವ ರೇಣುಕೆಯ ತಲೆ ಕಡೆದಾಗ ಪ್ರಧಾನ ಸಂಸ್ಕೃತಿ ಪುರುಷ ಲಾಭಕ್ಕಾಗಿಯೇ ದುಡಿಯುತ್ತಿತ್ತು.


ಮಹಿಳೆಗೆ ಮಕ್ಕಳ ಲಾಲನೆ ಪೋಷಣೆಯನೆಲ್ಲ ಅಂಟಿಸುವಲ್ಲಿ ಅವು ಪ್ರಕೃತಿ ಸಹಜ ಎಂದು ಸಾರುವಲ್ಲಿ ಈ ಪುರುಷ ಪ್ರಧಾನ ಸಂಸ್ಕೃತಿ ತನ್ನ ತಂದೆತನದ ಜವಾಬ್ದಾರಿಯಿಂದ ಜಾರಿಕೊಂಡಿತಲ್ಲದೆ, ಮನೆಯ ಹೊರಗಿನ ಗಂಡಿನ ದಿಗ್ವಿಜಯಗಳಿಗೆ ಇದು ಅನುಕೂಲಕರವಾಯಿತು. ಪುರುಷರು ಮಹಿಳೆಗೆ ಅನಿಸ ಬೇಕಾದದ್ದನ್ನು  ಬರೆದಿಟ್ಟರು.


ಎಲ್ಲಾ ಪುರುಷಪ್ರಧಾನ ಸಂಸ್ಕೃತಿಗಳು ಸೃಷ್ಟಿಸಿದ ಹೆಣ್ಣಿನ ಪ್ರತಿಮೆ ಎರಡು ಬಗೆಯದ್ದು." ಮಾತೇ ಇಲ್ಲವೆ ಮಾಯೆ" ಮಾತೆಯಾಗಿ ಬಹು ಮಾನ್ಯಗಳು ಪೂಜ್ಯರು ಮಾಯೆಯಾಗಿ, ಮೋಹಿನಿಯಾಗಿ, ಪುರುಷನನ್ನು ಮರುಳು ಮಾಡುವವಳು, ಹಾದಿ ತಪ್ಪಿಸುವವಳು, ಜಗತ್ತಿನ ಪಾಪವನ್ನೆಲ್ಲ ಸಂಕೇತಿಸುವವಳು.

ರಾಮನ ವಚನ ಪಾಲನೆ ರಾಜ ಧರ್ಮಗಳ ಕಥೆ ಹೇಳುವ ರಾಮಾಯಣವು, ಸೀತೆಯ ತುಮುಲ ಅಪಮಾನಗಳನ್ನು ಮರೆತುಬಿಟ್ಟಿತು. ಅಣ್ಣ ತಮ್ಮಂದಿರ ಪ್ರೀತಿ ವಿಶ್ವಾಸವನ್ನು ಹಾಡಿ ಹೊಗಳುವಾಗ. ಅಣ್ಣನ ಹಿಂದೆ ಹೋದ ಲಕ್ಷ್ಮಣನ ಭ್ರಾತೃತ್ವ ಪ್ರೇಮವನ್ನು ಕೊಂಡಾಡುವಾಗ ಹದಿನಾಲ್ಕು ವರ್ಷ ಒಂಟಿಯಾಗಿ ಕಾದ ಊರ್ಮಿಳೆ ಸ್ಥಿತಿಗೆ ಮೌನ ತಾಳಿತು.

ಮಾಧವಿಯ ಹೆಣ್ಣುತನ ಹರಿದು ಹಂಚಿದ ಬಗೆಯನ್ನು ಬಣ್ಣಿಸಲೇ ಇಲ್ಲ. ರಾಜಕುಮಾರಿಯಾಗಿ ಹುಟ್ಟಿಯೂ ನಾಲ್ವರು ರಾಜರೊಡನೆ   ಒಲ್ಲದ ಮನಸ್ಸಿನಿಂದ ಕೂಡಿ, ಎದೆ ಹಾಲು ಚಿಲ್ಲೆನ್ನುವ ಹೊತ್ತಲ್ಲಿ, ಹೆತ್ತ ಕೂಸು ತೊರೆದು ನಡೆದ ಮಾಧವಿಯ ಕಥೆಯನ್ನು ಪುರಾಣಗಳು ಹೇಳಲಿಲ್ಲ.

ಬೆಂಕಿಗಟ್ಟಿದರು ,ಕಾಡಿಗಟ್ಟಿದರು, ಕರುಣಾಳು ರಾಮನಲ್ಲಿ ತಪ್ಪು ಕಾಣದ, ಬುಟ್ಟಿಯಲ್ಲಿ ಗಂಡನನ್ನು ಹೊತ್ತು ಸೂಳೆಮನೆ ತಲುಪಿಸಿದ ಮಹಿಳೆಯರ ಶೀಲ ಪಾತಿವ್ರತ್ಯ ವಿಧೇಯತೆಗಳನ್ನು ಹಾಡಿ ಕೊಂಡಾಡಿದ ಸಂಸ್ಕೃತಿಯು, ಮಹಿಳೆಯ ಗುಣ - ಸ್ವಭಾವ, ಸ್ಥಾನ-ಮಾನ, ಸದಾ ಕಾಲ ಪುರುಷ ಕೇಂದ್ರಿತ ದೃಷ್ಟಿಕೋನದಿಂದ ಅರ್ಥೈಸಲ್ಪಟ್ಟಿತು.


ಪುರುಷ ಕೇಂದ್ರಿತ ಕೃತಿಗಳಲ್ಲಿ, ಕೃತಿ ಹೇಳುವುದಷ್ಟನ್ನೇ ಪೂರ್ಣ ಸತ್ಯವೆಂದು, ಸುಮ್ಮನಾಗದೆ,ಹೇಳದ್ದನ್ನು  ಪದ-ಪದಗಳ ನಡುವಿನ ಮೌನವನ್ನು ಆಲಿಸುತ್ತದೆ.

ಸ್ತ್ರೀವಾದಿಗಳ ಹೋರಾಟವೇನಿದ್ದರೂ ಪುರುಷ ಪ್ರಧಾನ ವ್ಯವಸ್ಥೆಯ ಪುರುಷ ಕೇಂದ್ರಿತ ನಿಲುವುಗಳನ್ನು ಎತ್ತಿಹಿಡಿಯುವ ವ್ಯವಸ್ಥೆಯ ವಿರುದ್ಧವೇ ಹೊರತು ಪುರುಷನ ವಿರುದ್ಧವಲ್ಲ.

ಸ್ತ್ರೀಪರವಾದ ವಿಚಾರಗಳ ಬಗೆಗೆ ವಿಶೇಷವಾದ ಕಾಳಜಿ ಹೊಂದಿದ್ದು , ಪ್ರತಿಸ್ಪಂದಿಸುವವರನ್ನು ಸ್ತ್ರೀವಾದಿಗಳೆಂದು ಗುರುತಿಸಬಹುದು.ಹೆಣ್ಣಾದವರಿಗೆ, ಹೆಣ್ಣಾಗಬಲ್ಲವರಿಗೆ ತಟ್ಟಬಲ್ಲ ಮುಟ್ಟಬಲ್ಲ ಆ ಕೋನವೇ ಸ್ತ್ರೀ ದೃಷ್ಟಿಕೋನ.

ಈ ಕಾರಣಕ್ಕಾಗಿಯೇ ಮುಡಚೆಟ್ಟು, ಮೃಲಿಗೆಗಳು ಹೆಣ್ತನದೊಂದಿಗೆ ತಳುಕು ಹಾಕಿಕೊಂಡು ಯಾಜಮಾನ್ಯ ಸಂಸ್ಕೃತಿ ನಿರ್ಧರಿಸುವ ಚೌಕಟ್ಟಿನೋಳಗೆ ಪ್ರವಹಿಸುತ್ತವೆ. ಅದರಲ್ಲೂ ವೈದಿಕ ವ್ಯವಸ್ಥೆಯ ಕರ್ಮಸಿದ್ಧಾಂತವು ಹೆಣ್ಣು ಹೆರಿಗೆ, ಮುಟ್ಟು ಮುಂತಾದವುಗಳನ್ನು ತುಚ್ಚೀಕರಿಸಿದೆ. ಸೂತಕಗೋಳಿಸಿದೆ " ನೀಲಾ"


ಸ್ತ್ರೀಗೆ ಪತಿಯೇ ಪರದೈವ

ಗಂಡನ ಊಟವಾದ ನಂತರ ಹೆಂಡತಿಯಾದವಳು ಊಟ ಮಾಡಬೇಕು. ಗಂಡನು ಎಷ್ಟೇ ಉದ್ರೇಕಗೊಳಿಸುವ ಮಾತುಗಳನ್ನಾಡಿದರು ಹೆಂಡತಿ ಹಿಂತಿರುಗಿ ಮಾತನಾಡಿಸಬಾರದು. ಹಾಗಿದ್ದರೆ ಮಾತ್ರ ಅವಳು ಗಂಡಿನ ಪ್ರಶಂಸೆಗೆ ಪಾತ್ರಳಾಗತ್ತಾಳೆ.

ಧರ್ಮ ಶಾಸ್ತ್ರಗಳೂ, ಪುರಾಣಗಳು ಸ್ತ್ರೀಯು ಪಾಲಿಗೆ ಆಶಾದಾಯಕವಾಗಿರಲಿಲ್ಲವೆನ್ನಬೇಕು. ಪುರುಷನ ಬೋಗ, ಕಾಮಾಸಕ್ತಿ,ಲೋಭತೆ, ತಮಗೆ ಬೇಕಾದ ರೀತಿಯ ಧಾರ್ಮಿಕ ಸೂತ್ರಗಳನ್ನು ನಿರ್ಮಿಸಿ ಅನೇಕ ಸ್ತ್ರೀಯರನ್ನು ಹೆಂಡತಿಯರನ್ನಾಗಿ ಪಡೆದು ಭೋಗಿಸಿ ಅವರನ್ನು ಅಲ್ಲಲ್ಲಿಯೇ ಬಿಟ್ಟು ಪುಣ್ಯ ಪುರುಷರಾಗಿ ಪೂಜನೀಯರೆನಿಸಿಕೊಳ್ಳುತ್ತಿದ್ದಾರೆ. ಹೆಂಗಸರ ಶೀಲವನ್ನೇ ಶಂಕಿಸಿ ಅವರನ್ನು ಮಾನಸಿಕ, ದೈಹಿಕವಾಗಿ,ಕ್ಷೋಭೆಗೊಳಪಡಿಸಿ ತಾವು ನಲಿದು ಮಹಿಳೆಯರನ್ನು ಶಿಕ್ಷೆಗೊಳಪಡಿಸಿದ್ದೂ ಇದೆ.


ಶಕುಂತಲೆಯನ್ನು ಪ್ರೇಮಿಸಿ ಅವಳನ್ನು ಭೋಗಿಸಿ ನಂತರ ತನ್ನ ಅರಮನೆಗೆ ಸೇರಿಸಿಕೊಳ್ಳದೆ ಕಾಡಿಗೆ ಅಟ್ಟಿದ ದುಶ್ಯಂತನು ಪುರಾಣ ಕಾವ್ಯಗಳಲ್ಲಿ ವೀರನೆನಿಸಿಕೊಂಡಿದ್ದಾನೆ.

ರಾಮನು ಅಗ್ನಿ ಸಾಕ್ಷಿಯಾಗಿ ಕೈಹಿಡಿದ ಸೀತೆಯನ್ನು ಅವಳ ಶೀಲವನ್ನು ಶಂಕಿಸಿ ಕಾಡಿಗೆ ಅಟ್ಟಿದ ಉದಾಹರಣೆಗೆ ರಾಮಾಯಣ ಗ್ರಂಥ ಸಾಕ್ಷಿಯಾಗಿದೆ.

ಮಹಾಭಾರತದಲ್ಲಿ ಮತ್ಸಯಗಂದಿ ಸತ್ಯವತಿ- ಶಂತನು ವನ್ನು ಕೂಡುವ ಮೊದಲೆ ಪರಾಶರ ಮುನಿಯನ್ನು ಕೂಡಿ ವ್ಯಾಸಮುನಿಯನ್ನು ಹಡೆಯುತ್ತಾಳೆ.

ಕುಂತಿಯ ಕತೆಯೇ ವಿಚಿತ್ರ ಆಕೆ ವಿವಾಹ ಪೂರ್ವದಲ್ಲಿ ಸುರ್ಯನಿಂದ ಕರ್ಣನನ್ನು ಪಡೆಯುತ್ತಾಳೆ.
ಮಾದ್ರಿ, ಅಶ್ವಿನಿ, ದೇವತೆಗಳಿಂದ, ಸಂತಾನವನ್ನು ಪಡೆಯುತ್ತಾಳೆ. ಪಾಂಡುವಿನ ಸತ್ತಾಗ ಚಿತೆಯಲ್ಲಿ ಸಹಗಮನ ಮಾಡುತ್ತಾಳೆ. ಹೆಂಡತಿ ಸತ್ತರೆ ಕೂಡಲೇ ಗಂಡಸಿಗೆ ಮರುಮದುವೆ ಮಾಡುವ ಸಮಾಜ.

ವೇದ, ಶಾಸ್ತ್ರ, ಪುರಾಣ, ಕಾವ್ಯಗಳೆಲ್ಲ ಬರೆದವರು ಪುರುಷರು, ಅವರಿಗೆ ಸ್ತ್ರೀಯರನ್ನು ತಮ್ಮ ಸರಿಸಮನಾಗಿ ಚಿತ್ರಿಸುವುದು ಅವಮಾನಕರವೆಂಬಂತೆ ಕಂಡಿರಬೇಕು.


ಆಧುನಿಕ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ
                       ಕಾವ್ಯ:-


ಹೆಣ್ಣೆ ನೀ ಗಂಡನ ಕೂಡಿಕೊಂಡು 
ನೋಡು ಮಂಡೂಕ ಸರ್ಪದ ನೆಳಲಿಗೆ ಹೋದಂತೆ ಬಂಡಿಗೆ ಬಸವನು ಶಿರಬಾಗಿಕೊಂಡಂತೆ

ಅಯ್ಯಾ ನನಗೊಂದು ಆಶೆ
 ಹಾಗೆ-ಹೀಗೆ ಹೆಣ್ಣು ಬುಗುರಿಯಾಡಿಸುವ 
ಇವುಗಳ ಕುಂಡಿಗೆ ಝಾಡಿಸಿ ಒದೆಯಬೇಕು ಒಮ್ಮೆಯಾದರೂ...
     (ಚಿ. ಸರ್ವಮಂಗಳಾ -`ಅಮ್ಮನಗುಡ್ಡ)



ಹುಟ್ಟೆಂಬುದು ಉರಿಕೊಳ್ಳಿ 
ಬಾಲ್ಯವೊಂದು ಅಗ್ನಿಕುಂಡ
ಯೌವನವು ಕಾಳ್ಗಿಚ್ಚಾದ ನನಗೆ 
ಬೆಳಕಿನ ಸುಖ ಗೊತ್ತಿಲ್ಲ ಸಖ
       (ಸುಕನ್ಯಾ ಮಾರುತಿ- 'ತಾಜ್ ಮಹಲಿನ ಹಾಡು')


ಅದೇ ವೀರ್ಯ ಅದೇ ಗರ್ಭಕ್ಕೆ ಹುಟ್ಟಿ 
ಅದೇ ಮೊಲೆಯ ಚೀಪಿ 
ಬೆಳೆದಿದ್ದೇವೆ ಸ್ವಾಮಿ ನಾವೂ
        (ಅನಸೂಯಾದೇವಿ -'ಪ್ರಕೃತಿ -ಪುರುಷ')

ನಾನು ಭೂಮಿಯಂತೆ 
ಸಹನಶೀಲಳಂತೆ 
ಹಾಗೆಂದು ಹೇಳುತ್ತಾರೆ ಇವರು‌.
 ನನ್ನನ್ನು ಪುಷ್ಪವತಿಯೆಂದು
ಫಲವತಿಯೆಂದು 
ವರ್ಣಿಸುತ್ತಾರೆ ಅವರು. 
ಇವರೆಲ್ಲಾ ಸೇರಿ ವರ್ಷಕ್ಕೊಮ್ಮೆ
ಭೂಮಿ ಪೂಜೆ ಮಾಡುತ್ತಾರೆ 
ವರ್ಷದುದ್ದಕ್ಕೂ ನನ್ನನ್ನು 
ತುಳಿಯುತ್ತಲೇ ಇರುತ್ತಾರೆ

---(ಡಾ. ವಿಜಯಶ್ರೀ ಸಬರದ ನೆಲ, ಜಲ ಮತ್ತು ನಾನು)


ಹೋಗಯ್ಯ ಹೋಗು ಎಲ್ಲಿಗೆ ಹೋಗುತ್ತೀ..?
 ನನಗೆ ಗೊತ್ತಿಲ್ಲವೇ..?
ನನ್ನೆದೆಗೆ ಬೇರಿಳಿದ ಕಾಲು ನಿನ್ನದು
(ಸಿ.ಉಷಾ- 'ತೊಗಲುಗೊಂಬೆಯ ಆತ್ಮಕತೆ')



ನನಗೆ ಕಾವ್ಯ ಗೊತ್ತಿಲ್ಲ ತಿಳಿಸಾರು ಗೊತ್ತು 
ಕಾವ್ಯದ ಬಗ್ಗೆ ತಿಳಿದವರೇ ಹೇಳಿ.
          (ವೈದೇಹಿ- 'ಬಿಂದು ಬಿಂದಿಗೆ')


"ಅವ್ವ ನನಗೆ ದಾರಿ ಬಿಡು 
ತುಂಬ ಯೌವನದ ಖುರಪುಟದಗ್ನಿ  ಕಿಡಿ ಕಾರುತ್ತಿದೆ"
                 --ಎಂ ಸರಸ್ವತಿ ಗೌಡ

"ನೀ ಹಾಕಿರುವ ಅಣೆಕಟ್ಟೆ| ಒಡೆದು ಬಿರುಮಳೆಗೆ ಸೂಕ್ಕಿ ಭೋರ್ಗರೆದು ನುಗ್ಗಿ| ನಿನ್ನಂತಾಗದೆ ಬದುಕುತ್ತೇನೆ
 ನನಗೆ ದಾರಿ ಬಿಡು"
           (ಸಿ.ಉಷಾ - 'ಅಮ್ಮನಿಗೆ')


"ಅಮ್ಮ ಸಾಕು ಮಾಡೆ ನಿನ್ನ ಪುರಾಣ...
 ಏನೇ ಹೇಳು ತೊಡೆ ಸಂದಿಯಲ್ಲಿ ಬದುಕ ಹುದುಗಿಸಿ
ಬದುಕಲಾರೆ, ನೀನು ಅಜ್ಜಿ ಸುತ್ತಿದ 
ವರ್ತುಲದಲ್ಲೇ ಸುತ್ತಲಾರೆ, ಕುತ್ತಿಗೆಗೊಂದು 
ಬಿಗಿದು ಹಿಡಿಯಬೇಡ ಅಮ್ಮಾ"
    --ಚ.ಸರ್ವಮಂಗಳಾ-'ತಡೆ'---(ಅಮ್ಮನ ಗುಡ್ಡ)

"ನಿಮ್ಮ ಕಾಮಾಗ್ನಿ ಕುಂಡಕ್ಕೆ| ನಮ್ಮ ಶೀಲವನ್ನು ಬಲಿಗೊಟ್ಟು 
ನಿಮ್ಮ ಮಾನಾಪಮಾನವನು| ಕಾಪಾಡಲು ನಿಮ್ಮಿಂದಲೇ
ಪತಿವ್ರತೆಯರ ಪಟ್ಟಕ್ಕೇರಿದ ಪ್ರಾತಃ ಕಾಲದ ಸ್ಮರಣೆಯಲಿ
ಇಂದಿಗೂ ಉಳಿದು ನರಳುತ್ತಿರುವವರು ನಾವು
ನಾವು ಪತಿವ್ರತೆಯರಲ್ಲ"

---(ಎಚ್ಎಸ್. ಮುಕ್ತಾಯಕ್ಕ-" ನಾವು ಪತಿವ್ರತೆಯರಲ್ಲ")


"ನಮ್ಮ ದೇಹ ಹಾಸಿಗೆ ಮಾಡಿ 
ಬೆಳಗಾಗ ಮುರುಟಿಸಿ ಹೋದದ್ದು 
ಹಂಗಿಲ್ಲದುಂಡು ಎಂಜಲು ಒಗೆದು 
ಬಿಸಿಲು ಗುದುರೆಯನೇರಿ ಹಾರಿದ್ದು"
--- ಶೀಲಾ ಅಂಕೋಲ ("ಮತ್ತೆ ಚಿಗುರುವೆವು")

"ವೇಷ ಮಾಡುತ್ತ ಒಮ್ಮೆ ಬಂದವರು 
ಮತ್ತೆ ವೇಷ ಮರೆಸಿ ಬಂದು 
ನಮ್ಮ ಮೊಸರಕುಡಿಕೆಗೇ ಕಿಮ್ಮತ್ತು ಕಟ್ಟುತ್ತಾರೆ"
---ಮಾಧವಿ ಭಂಡಾರಿ---( "ವೇಷದವರು")

"ಅಯ್ಯಾ ನನಗೆ ಬೇಕು |
ತಿಕ್ಕಾಟದ ಹೇಸಿಗೆ ನಡುವೆ 
ಹುಟ್ಟಿ ಅಲ್ಲಿಯೇ ಇನ್ನೂ ಗಿರಿಗಿಟ್ಲೆ 
ಆಡುತ್ತಿರುವ ನನ್ನ ನಾನೇ ಅರಿವುದಯ್ಯ"
--ಚಿ. ಸರ್ವಮಂಗಳ '"ನಾನು ನಾನೇ"' (ಅಮ್ಮನ ಗುಡ್ಡ)


"ನಾನೇಕೆ ಬಳ್ಳಿ 
ನೀನೇಕೆ ಮರ 
ನನ್ನ ಕಾಲಮೇಲಲ್ಲವೇ ನನ್ನ ನಿಲುವು 
ನನ್ನ ಬಾಳಿಗೂ ಇಲ್ಲವೇ ನಿನ್ನಂತೆ ಛಲವು"
--ಎಂ.ಎಸ್ ವೇದಾ "ಸಂಗಾತಿಗೆ" (ಬಿಳಿಲುಗಳು)

ನಾನೊಬ್ಬ ಪತ್ನಿ 
ಮೂರು ಮಕ್ಕಳ ತಾಯಿ 
ಇನ್ನೂ ನನ್ನ ಸೀರೆ ಕುಪ್ಪಸ 
ಬಟ್ಟು ಬೈತಲೆ ಎಲ್ಲಾ 
ನನ್ನ ಅತ್ತೆ ಮಾವಂದಿರ ಮರ್ಜಿ
                ----ಪ್ರತಿಭಾ ನಂದಕುಮಾರ್



ನಾನು ಉರಿದು 
ಒಳಗೊಳಗೆ ಬೇಯುತ್ತ 
ಕರಗಿ ಹೋದೆ 
ಕರ್ಪೂರದಂತೆ
         (ಸರಸ್ವತಿ ಗೌಡ)

ಗೆಳೆಯಾ 
ಕೊಡುವೆಯಾ ನಿನ್ನ 
ಕರವಸ್ತ್ರ ಈ 
ಕಣ್ಣೀರ ಒರೆಸಲು
           (ತಾರಿಣಿ ಶುಭದಾಯಿನಿ)


ನಾನು 
ಹೂಂ ಗುಟ್ಟದೆ 
ನನ್ನ ನೆಲದಲ್ಲಿ ನಿನ್ನ 
ಬೀಜ ಬಿತ್ತಿ ಬೆಳೆಯಲು 
ಸಾಧ್ಯವೇ ಇಲ್ಲ 
            ----(ಜ್ಯೋತಿ ಗುರುಪ್ರಸಾದ್)


"ಮದುವೆಯಾದೊಡನೆ ಈ ಹುಡುಗಿಯರು 
ಗೋಡೆಗೆ  ಮೊಳೆ ಬಡಿಸಿಕೊಂಡ ಚಿಟ್ಟೆಗಳಾಗುತ್ತಾರೆ ಮಾತು ಮರೆತ ಗಿಳಿಗಳಾಗುತ್ತಾರೆ 
ಮಂಜು ಮುಸುಕಿದ ಹೂಗಳಾಗುತ್ತಾರೆ"
                        (ಸಂಧ್ಯಾರೆಡ್ಡಿ)


ಜಾತಿಯಲ್ಲದ ಜಾತಿಯವನಿಗೆ 
ಹುಡುಗಿ ಮನಸೋತರೆ 
ಅವರು ಸುಮ್ಮನಿರಲಾದೀತೇ 
ಸರಿಯಾದ ಗೋತ್ರ ಸೂತ್ರಕ್ಕೆ 
ಧಾರೆ ಎರೆದು ನಿಟ್ಟುಸಿರಿಟ್ಟರು
                      ---ವಿಜಯಾ ದಬ್ಬೆ

"ಮೊಲೆಗೂ ಯೋನಿಗೂ , ಮೊಲೆ ಹಾಲಿಗೂ
ತಡೆ ಹಿಡಿದ ರಕ್ತ ಸ್ರಾವಕ್ಕೂ
ಬೇರೆ ಬೇರೆಯೇ ಅರ್ಥ
ಧರ್ಮಕಾರಣದಲ್ಲಿ" 

"ಅವನ ಭವಿಷ್ಯದಲ್ಲಿ ಅವಳಿಲ್ಲ
ಅವಳ ಚೇರಿತ್ರೆಯೊಳಗೆ ಅವನಿದ್ದಾನೆ"-- (ಕಥಾನಕ)




ಸ್ತ್ರೀ ಲೋಕದ ತಲ್ಲಣಗಳು:---


೮೫ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಲಬುರ್ಗಿ

ಗೋಷ್ಠಿ:

ಸ್ತ್ರೀ ಲೋಕದ ತಲ್ಲಣಗಳು:----


೧.ಮಹಿಳೆ ಮತ್ತು ಪ್ರಭುತ್ವ:-

He Stories ಈವರೆಗಿನ ಚರಿತ್ರೆಯ ಪುಟಗಳಲ್ಲಿ ಕೇವಲ ಪುರುಷಕೇಂದ್ರಿತ ನಿಲುವುಗಳು ಹಾಗೂ ಪುರುಷನನ್ನೇ ಸಂಕೇತಿಸುವ ಸಾಧುಸಂತರು, ಸೈನಿಕರ, ಕಾರ್ಮಿಕರ, ಪ್ರಭುಗಳ ಅಟ್ಟಹಾಸ ಚಿತ್ರಿತವಾಗಿದೆ.
ಧಾರ್ಮಿಕ, ಸಾಮಾಜಿಕ, ರಾಜಕೀಯವಾಗಿ ಪ್ರಭುತ್ವ ಹೇಗೆ ಪುರುಷಕೇಂದ್ರಿತ ನಿಲುವುಗಳಿಂದ ಹೆಣ್ಣನ್ನು ಕಟ್ಟುಪಾಡುಗಳ ಚೌಕಟ್ಟಿನಲ್ಲಿ ಬಂಧಿಸಿ, ಲಿಂಗ ರಾಜಕಾರಣ ಧೋರಣೆ ಅನುಸರಿಸುತ್ತಿದೆ...
ಹೆಣ್ಣು...
" ಮಾತೇ ಇಲ್ಲವೆ ಮಾಯೆ" ಮಾತೆಯಾಗಿ ಬಹು ಮಾನ್ಯಳು, ಪೂಜ್ಯಳು ಮಾಯೆಯಾಗಿ, ಮೋಹಿನಿಯಾಗಿ, ಪುರುಷನನ್ನು ಮರುಳು ಮಾಡುವವಳು, ಹಾದಿ ತಪ್ಪಿಸುವವಳು, ಜಗತ್ತಿನ ಪಾಪವನ್ನೆಲ್ಲ ಸಂಕೇತಿಸುವವಳು.
ಹೆಣ್ಣನ್ನು ದೈವಿಕರಿಸುವ  ಹಿಂದಿನ ಸತ್ಯ ಹಾಗು ವಾಸ್ತವ ಸ್ಥಿತಿ ಅರಿವಾಗಬೇಕಿದೆ.

ಹಣ ಮತ್ತು ಅಧಿಕಾರದ ಪಾಲು ಹೆಣ್ಣು...?
ದೇವೇಂದ್ರ ಸೇರಿ ಮಹಿಳೆಗೆ ಕೊಡುವ ಸ್ಥಾನ...?

ಪಿತೃಪ್ರಧಾನ ಅಧಿಕಾರ ನಿಯಂತ್ರಣ ,ಚಾಲನೆ ವರ್ಗ ,ವರ್ಣ ಸಾರ್ವತ್ರಿಕ ಹಾಗೂ ವೈಯಕ್ತಿಕತೆಯಲ್ಲಿ ಪುರುಷ ನಿಲುವುಗಳು ಹೇಗೆ ನಿಯಂತ್ರಿಸುತ್ತವೆ ಹಾಗೂ ಮಹಿಳೆಯನ್ನು ಮೌಢ್ಯದ ಚೌಕಟ್ಟಿನಲ್ಲಿ ಬಂಧಿಸುತ್ತವೆ .

"ಬೆಟ್ಟದ ಮುಂದಿನ ಧೂಳು" ಎಂಬಂತೆ ಪ್ರಭುತ್ವ ಮತ್ತು ಮಹಿಳೆ ನಡುವಿನ ಅಗಾಧ ಕಂದರವನ್ನುಂಟು ಮಾಡಿದೆ.

ಕುಂತಿ, ಗಾಂಧಾರಿ, ದ್ರೌಪದಿ, ಸೀತಾ, ಕಥೆಯೇ ಬೇರೆ .. ಸಂಕೋಲೆಗಳ ಸರಮಾಲೆ, ಬಹುರೂಪದ ಬೇಡಿ.
ಅಸಮಾನತೆಯನ್ನು ಜೀವಂತಿಕೆ ರೂಪಿಸುವುದೇ ಪ್ರಭುತ್ವದ ಮೂಲ ಮಂತ್ರ.

ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನ ಸಮಾನತೆಯ, ಬಿಡುಗಡೆ, ಹಕ್ಕು -- ಎಂಬುದು ಪೂರ್ಣವಾಗಿ ಹೆಣ್ಣಿಗೆ ದಕ್ಕಿದಾಗ ಮಾತ್ರ ಅವಳು ಪ್ರಭುತ್ವದ
 ಪ್ರತಿನಿಧಿಯಾಗುವಳು...

ಸರ್ಕಾರ ಮಹಿಳಾ ಸಬಲೀಕರಣ ಹೆಸರಿನಲ್ಲಿ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತದೆ ಆದರೆ ಮಹಿಳೆಯರಿಗೆ ಕೇವಲ ವಿನಾಯಿತಿಗಳು - ರಿಯಾತಿಗಳು ಎಂಬ ಹೆಸರಲ್ಲೇ ಕೊನೆಯಾಗವುದು. ಇದರಿಂದ ನಿಜವಾಗಿಯೂ ಮಹಿಳೆಯರ ಏಳ್ಗೆ ಅಸಾಧ್ಯ..!

ಮೊದಲು ಹೆಣ್ಣಿಗೆ ಹುಟ್ಟುವ ಹಕ್ಕಾದರೂ ಇತ್ತು. ಈಗ ಹುಟ್ಟುವ ಮೊದಲೇ ಹೊಸಕಿಹಾಕುವ ತಂತ್ರಜ್ಞಾನ -ಬೇಟಿಯ ಬೇಟೆ.

ಮಹಿಳೆಗೆ ಶೌಚಾಲಯವು ಬೇಕು .ಅದನ್ನು ರೂಪಿಸುವ ನಿರ್ದೇಶಿಸುವ ಹಕ್ಕು, ರಾಜಕೀಯ ಅಡಿಪಾಯದ ಅಧಿಕಾರದ ಚುಕ್ಕಾಣಿ ಬೇಕು.

"ಭಾರತ್ ಮಾತಾಕಿ ಜೈ "ಎಂದರೆ ಅಷ್ಟೇ ಸಾಲದು .ಮಹಿಳೆಗೆ ಸಂಸತ್ತಿಗೆ ಸ್ಪರ್ಧಿಸುವ ಹಕ್ಕು,  ಮಹಿಳೆಗೆ ಸಂಬಂಧಿಸಿದ ಮಸೂದೆ ಸಂಸತ್ತಿನಲ್ಲಿ ಅಂಗೀಕಾರ, ಹಾಗೆ ಸಂಪೂರ್ಣ ಮೀಸಲಾತಿ ಹಕ್ಕು ದೊರೆಯುವಂತಾಗಬೇಕು...

ಪ್ರಭುತ್ವದ ವಿರುದ್ಧ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದಾಗ, ಅದನ್ನು ಉಳಿಸಲು ಮಹಿಳೆ ಸವಾಲು ಹಾಕುತ್ತಿದ್ದಾಳೆ ಬಹಿರಂಗ ಹೋರಾಟ ,ಪ್ರತಿರೋಧ ಪ್ರದರ್ಶನಕ್ಕೆ ಇಳಿದಿದ್ದಾಳೆ.


"ಮೂಲ ಸೆಲೆ ಅವರ ಕರುಳಿನಲ್ಲಿ ನೆಲೆಯೂರಿರುವ ಕರುಳಿನ ಸಮಾನತೆ"
ದೊರಕಿದಾಗ ಮಾತ್ರ ಹೆಣ್ಣು ಆಳುವ ವರ್ಗವಾಗಿ ಪ್ರವೇಶ ಪಡೆಯುತ್ತಾಳೆ... ಪಡೆಯುತ್ತಿದ್ದಾಳೆ.




೨.ಮಹಿಳೆ ಮತ್ತು ಸೃಜನಶೀಲತೆ
                    ---ತಾರಿಣಿ ಶುಭದಾಯಿನಿ.

ಸ್ತ್ರೀತ್ವ- ಪ್ರಕೃತಿ ಸೃಷ್ಟಿಶೀಲತೆ.

೧.ವ್ಯವಸ್ಥೆಯ ವಿರುದ್ಧವಾಗಿ ಮೌಲ್ಯಗಳನ್ನು ಪ್ರತಿರೋಧದ ನೆಲೆ

೨.ಅನನ್ಯತೆ ನೆಲೆ

ಪುರಾಣದ (ಮಿಥ್ ) ಪರ್ಯಾಯ ರೂಪಿಸಿಕೊಳ್ಳುವುದು:

ಕಂಬಾರರ ಪುಣ್ಯಕೋಟಿ: ಜನಪದ- ಅಮ್ಮ ಹೇಳಿದ ಸುಳ್ಳು ಒಂದು ಹೆಣ್ಣು ಮತ್ತೊಂದು ಹೆಣ್ಣನ್ನು ರಕ್ಷಿಸುವಂತೆ ಇರಬೇಕು.
ಹೆಣ್ಣು ಕಟ್ಟಿದ ಕಥೆಗಳು: ಸೃಷ್ಟಿ ಕಡೆ, ಬದುಕು ಜೀವನದೆಡೆಗೆ ಸಹಜತೆ ಬಯಸುತ್ತವೆ.

ಪ್ರಧಾನ ಸಂಸ್ಕೃತಿಯ ಅಡಿಯಲ್ಲಿ ಹೆಣ್ಣು ಕೇವಲ ಅಡುಗೆ ಮನೆಗೆ, ಹಿತ್ತಲು, ಮಕ್ಕಳು, ಸಂಸಾರ, ಜೈವಿಕ ಬಂಧನಕ್ಕೆ ಸೀಮಿತವಾಗಿದ್ದರೂ... ಕಲೆ, ಕಸೂತಿ, ರಂಗೋಲಿ, ತನ್ನ ದುಡಿಮೆ ಮತ್ತು ಸೃಜನಶೀಲತೆಯಿಂದ ಆಧುನಿಕೋತ್ತರ ಮಾರುಕಟ್ಟೆಗೆ ಸಾಕ್ಷಿಯಾಗುತ್ತಾಳೆ...

ಹೆಣ್ಣು ಬಳಸುವ ಅಹಿಂಸಾ ತಂತ್ರ ಹಾಗೂ ಉಪ್ಪು ವಸಹತೋತ್ತರ ಚಿಂತನೆಯಿಂದ --ಗಾಂಧಿ ಪ್ರಭಾವಿತ...





೩.ಮಹಿಳಾ ಮತ್ತು ಲೋಕಗ್ರಹಿಕೆ
                 ---ಪ್ರೊ// ಶ್ರೀಮತಿ ಶಿವಗಂಗಾ ರುಮ್ಮಾ.


ಲೋಕದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಎಲ್ಲಾ ಅನಿಷ್ಟಕ್ಕೆ ಮಹಿಳೆಯೇ ಕಾರಣ ಎಂದು ಸಾರುತ್ತ ಬಂದಿರುವುದನ್ನು-- ಪರಂಪರೆ , ದೈವತ್ವ ನಂಬಿಕೆ-ಮೂಢನಂಬಿಕೆಯ ಇನ್ನೊಂದು ದೃಷ್ಟಿಕೋನ.

ಪ್ರಭುತ್ವ -"ಮೌಢ್ಯದ ಮುಖಾಂತರ ಜನರನ್ನು ಆಳುತ್ತದೆ".

ಜನರಿಗೆ ಪೂರಕವಾಗಿರುವುದು ಕಾಮನ್ ಸೆನ್ಸ್:
ಹೆಣ್ಣು ಅಬಲೆ, ಚಂಚಲೇ, ಬುದ್ಧಿ-ಮನ್ ಕಾಲ್ಕೆಳಗೆ ,ಅಪಶಕುನ ,ಕನಿಷ್ಠ, ದಾರಿದ್ರ್ಯ ಎಂಬ ಇತ್ಯಾದಿ ಲೋಕಗ್ರಹಿಕೆಗಳಿವೆ.

"ಕಾರ್ಯಕಾರಣ ಸಂಬಂಧ" - ನಂಬಿಕೆ ಲೋಕವನ್ನಾಳುತ್ತದೆ.

"ಹೆಣ್ಣು ಮಗು ಹುಟ್ಟಿದರೆ ಮೊದಲು ಶುಭ" ಈಗ "ಗಂಡು ಮಗು" ಎಂಬ ಲೋಕಗ್ರಹಿಕೆ ಕಾಲಕಾಲಕ್ಕೆ "ಪ್ರಭುತ್ವದ" ಭಾಗವಾಗಿ ಬದಲಾವಣೆಯಾಗಿದೆ.


ಉತ್ತರ ಮತ್ತು ದಕ್ಷಿಣ ಭಾರತದ ಸಾಂಸ್ಕೃತಿಕ ಭಿನ್ನತೆ:

ವರದಕ್ಷಿಣೆ, ಬಲತ್ಕಾರ ,ಭ್ರೂಣಹತ್ಯೆ ಹೆಚ್ಚಾಗಿ ಉತ್ತರಭಾರತದಲ್ಲಿ  ಕಂಡುಬರುತ್ತವೆ...

ಉತ್ತರ ಭಾರತದಲ್ಲಿನ ಮಹಿಳೆಗೆ ಸಾಹಿತ್ಯ ರಚನೆಯಲ್ಲಿ (ಸಂಸ್ಕೃತ) ಅವಕಾಶ ಗೌಣ.

ಮಹಿಳೆಯರಿಗೆ ಸಾಹಿತ್ಯ ರಚನೆಯಲ್ಲಿ ಅವಕಾಶ ದೊರೆತ್ತಿದ್ದು ಮೊದಲು ದಕ್ಷಿಣ ಭಾರತದಲ್ಲಿ...
ವಿಜ್ಜಿಕ... ಗಂಗಾದೇವಿ...

•ನೀತಿ ಕಾವ್ಯ ದ.ಭಾ---ಶಂಕರ್ ಮೊಕಾಶಿ
•ದಲಿತ ಆತ್ಮಕಥೆಗಳು ಆರಂಭ--ದ.ಭಾ
•ಮಿತಾಕ್ಷರ ಸಂಹಿತೆ: (ಹಿಂದೂ ಕಾನೂನು ಗ್ರಂಥ)
ಮಹಿಳೆಗೆ ಆಸ್ತಿ ಹಕ್ಕು ಪ್ರತಿಪಾದಿಸಿದ್ದು.
•ಮಹಿಳೆಯನ್ನು ಕಥ ನಾಯಕಿಯಾಗಿ ಕಾವ್ಯರಚನೆ:
ಮಣಿಮೇಖಲೆ, ಶಿಲಪ್ಪದಿಗಾರಂ ,ಶಾಕುಂತಲ (ದಕ್ಷಿಣ ಭಾರತದ ನಂಟು) ಬಾಣ ಕಾದಂಬರಿ, ಕರ್ನಾಟಕ ಕಾದಂಬರಿ...


ಮಹಿಳೆ ಅಬಲೆ:-
ಮಹಿಳೆಗೆ ರೋಗ ನಿರೋಧಕ ಶಕ್ತಿ ಹಾಗು ಜೀವಿತಾವಧಿ ಅಧಿಕ.

ಲತೆಯಂತೆ ಮರದ ಆಸರೆ ಪಡೆದವಳೆಂದು ಜೀವ ಮಹಿಳಾ ವಿರೋಧಿ ನೆಲೆಗಳು ಬಿತ್ತುತ್ತಿರುವುದು --ಪ್ರಭುತ್ವ.


ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶ:

ಪ್ರಾಚೀನ ಭಾರತದ ಲೋಕಗ್ರಹಿಕೆ: ಮಹಿಳೆಯೇ ಪೂಜಾರಿ.

ಇಂದಿನ ಮಹಿಳೆ ಸಂಸತ್ತಿನ ಪ್ರವೇಶ ಪಡೆಯಬೇಕೆ ವಿನಃ ದೇವಾಲಯಗಳ ಪ್ರವೇಶವಲ್ಲ...!

ಮನಸ್ಥಿತಿ ಬದಲಾಗದಿದ್ದರೆ ಪರಿಸ್ಥಿತಿ ಬದಲಾಗದು.!
 

Tuesday, 11 February 2020

ಸೂಫಿ ಕಥಾಲೋಕ

ನಿಜಕ್ಕೂ ಅಜ್ಞಾನಿಗಳು ಮಾತ್ರ ತಮ್ಮನ್ನು ತಾವೇ ಪಂಡಿತರು, ತತ್ವಜ್ಞಾನಿಗಳೆಂದು ಕರೆದುಕೊಂಡು ಬೀಗುತ್ತಾರೆ. ಅವರಿಗೆ ವಿಷಯದ ಸ್ಪಷ್ಟತೆ ಇರುವುದಿಲ್ಲ; ದೃಢವಾದ ಅಭಿಪ್ರಾಯವೂ ಇರುವುದಿಲ್ಲ` ಎಂದೆಲ್ಲಾ ನಸ್ರುದ್ದೀನನು  ಎಲ್ಲಾ ಕಡೆ ಹೇಳಿಕೊಂಡು ತಿರುಗುತ್ತಿದ್ದಾನೆ . ಇದರಿಂದ ನಮ್ಮ ಘನತೆಗೆ ಚ್ಯುತಿ ಬಂದಿದೆ. ಅಷ್ಟೇ ಅಲ್ಲ ದೇಶದ ಭದ್ರತೆಗೆ ಇದರಿಂದ ಅಪಾಯವಿದೆ ಎಂದು ತತ್ವಜ್ಞಾನಿಗಳು ಮತ್ತು ಪಂಡಿತರು ರಾಜನಲ್ಲಿ ದೂರಿದರು. ನಸ್ರುದ್ದೀನ್ ತಾನು ಹಾಗೆ ಹೇಳಿದ್ದು ನಿಜ ಎಂದು ಒಪ್ಪಿಕೊಳ್ಳಲು ಹಿಂಜರಿಯಲಿಲ್ಲ ಆರೋಪದ ವಿಚಾರಣೆಗಾಗಿ ರಾಜನು ಆ ತತ್ವಜ್ಞಾನಿಗಳು, ಘನಪಾಠಿಗಳು ಮತ್ತು ಕಾನೂನು ಪಂಡಿತರು ಗಳನ್ನು ಆಸ್ಥಾನದಲ್ಲಿ ಸೇರಿಸಿದ.

"ಮೊದಲು ಮಾತನಾಡುವ ಸರದಿ ನಿನ್ನದು" ಎಂದ ರಾಜ.

"ಬರೆಯಲು ಹಾಳೆ ಮತ್ತು ಲೇಖನಿಗಳನ್ನು ತರಿಸಿ" ಎಂದ ನಸ್ರುದ್ದೀನ್.

ಅವುಗಳನ್ನು ತರಿಸಲಾಯಿತು.

ಅವುಗಳನ್ನು ಇಲ್ಲಿ  ಬಂದಿರುವ ಏಳು ಮಂದಿ ಪಂಡಿತರಿಗೂ ಹಂಚಿಸಿ.

ಹಾಗೆಯೇ ಹಂಚಲಾಯಿತು.

"ರೊಟ್ಟಿ ಎಂದರೇನು?-- ಈ ಪ್ರಶ್ನೆಗೆ ಪ್ರತಿಯೊಬ್ಬರು ಪ್ರತ್ಯೇಕವಾಗಿ ಉತ್ತರ ಬರೆಯಬೇಕು".

ಏಳುಮಂದಿ ಉತ್ತರಗಳನ್ನು ಸಿದ್ಧಪಡಿಸಿದ್ದರು.
ಅವುಗಳನ್ನು ರಾಜನಿಗೆ ಒಪ್ಪಿಸಿ ಸಭೆಗೆ ಓದಿ ಹೇಳಲು  ಕೇಳಿಕೊಂಡ. ಅವರು ಬರೆದ ಉತ್ತರಗಳು ಹೀಗಿದ್ದವು:

ಮೊದಲನೆಯವನು: "ರೊಟ್ಟಿ ಎಂಬುವುದು ತಿನ್ನುವ ವಸ್ತು".

೨....."ಅದು ಹಿಟ್ಟು ಮತ್ತು ನೀರು".

೩.... "ದೇವರ ಕರುಣೆಯ ಪ್ರತಿಕ".

೪.... "ಬೇಯಿಸಲ್ಪಟ್ಟ ಮಿದ್ದಿದ ಹಿಟ್ಟಿನ ಖಾದ್ಯ".

೫.... ರೊಟ್ಟಿ ಎಂಬುದಕ್ಕೆ ಭಿನ್ನ ಭಿನ್ನ  ಅರ್ಥಗಳಿವೆ ಅರ್ಥ ಮಾಡಿಕೊಳ್ಳುವವರ ಮೇಲೆ ಅದರ ಅರ್ಥ ಅವಲಂಬಿಸಿದೆ.

೬.... "ಒಂದು ಪೌಷ್ಟಿಕ ಆಹಾರ".

ಏಳನೆಯವನು: "ಅದು ನಿಜವಾಗಿಯೂ ಏನು ಎಂಬುದು ಯಾರಿಗೂ ತಿಳಿಯದು".


ಆಗ ನಸ್ರುದ್ದೀನ್, "ಮಹಾರಾಜ ರೊಟ್ಟಿ ಎಂದರೇನು ಎಂಬುದರ ಬಗ್ಗೆಯೇ  ಇವರಲ್ಲಿ ಒಮ್ಮತದ ನಿರ್ಣಯ ಮೂಡಿಬರುವುದು ಸಾಧ್ಯವಿಲ್ಲ. ಹೀಗಿರುವಾಗ ಇತರ ವಿಷಯಗಳ ಬಗ್ಗೆ ಇವರು ನಿರ್ಣಯ ಕೊಡುವುದು ಹೇಗೆ ಸಾಧ್ಯ..? ನನ್ನ ಮೇಲಿರುವ ಆರೋಪದ ವಿಷಯವನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ: ನಾನು ಹೇಳಿದ್ದು ಸರಿಯೋ-ತಪ್ಪೋ ಅದನ್ನು ನಿರ್ಣಯಿಸಲು ಇವರನ್ನು ತೀರ್ಪುಗಾರರಾಗಿ ಕರಿಸಿದ್ದೀರಿ. ದಿನವೂ ತಿನ್ನುವ ರೊಟ್ಟಿಯ ಬಗ್ಗೆಯೇ  ಒಮ್ಮತವಿಲ್ಲದ ಇವರು ನಾನು ಧರ್ಮ ವಿರೋಧಿ ಎಂದು ಆರೋಪ ಹೊರಿಸುವಲ್ಲಿ ಮಾತ್ರ ಒಂದಾಗಿ ಬಿಡುತ್ತಾರೆ . ಎಂಥ ವಿಪರ್ಯಾಸ.?" ಎಂದು ಹೇಳಿದ.


                     -ಸೂಫಿ ಕಥಾಲೋಕ


ಸೂಫಿ ಕಥಾಲೋಕ

#ಸೂಫಿ #ಕಥಾಲೋಕ...


ನದಿಯ ಆ ದಡದಲ್ಲಿ ಒಬ್ಬ ಯ-ಹು ಅನ್ನೋದನ್ನ  ಉ-ಯ-ಹು ಎಂದು ಉಚ್ಚರಿಸುತ್ತಿದ್ದ.

ನದಿಯ ಈ ತಟದಲ್ಲಿ ಒಬ್ಬ ಜ್ಞಾನಿ ಅದನ್ನು ಅವನಿಗೆ ತಿಳಿ ಹೇಳಿ ಇದು ತಪ್ಪು ತಪ್ಪು ಎಂದು 
"ಅರಿವು ನೀಡುವವನು ಮತ್ತು ಅರಿವು ಪಡೆಯುವವನು ಇಬ್ಬರು ಅದಕ್ಕೆ ಯೋಗ್ಯ ಇದ್ದಾಗಲೇ ಇಂತಹ ಸಂಯೋಗವು ಸಾಧ್ಯ‌. ಶಬ್ದಗಳನ್ನು ಹೀಗೆ ಉಚ್ಚರಿಸಬೇಕೆಂದು"
ತಿದ್ದಿ ಹೇಳಿ ಮರಳಿ  ದಡ ಸೇರಿದ ನಿಷ್ಠಾವಂತ ಸಂಪ್ರದಾಯಿ...

ಸ್ವಲ್ಪಹೊತ್ತಿನ ನಂತರ ಯ-ಉ  ಎಂಬ ಇತ್ಯಾದಿ ಉದ್ಘೋಷವು ಮತ್ತೆ ಕೇಳಿಬಂತು...

ಮನುಷ್ಯನ ಮೊಂಡುತನಕ್ಕೆ ಏನು ಹೇಳುವುದು..? ತಪ್ಪು ಎಂದು ತಿಳಿಸಿ ಹೇಳಿದರೂ ತಿದ್ದಿಕೊಳ್ಳದ ಅವನ  ಮಂದಬುದ್ಧಿಗೆ ಏನು ಹೇಳಬೇಕು..? ಹೀಗೆ ಯೋಚಿಸುತ್ತಿರುವಂತೆಯೇ ಆಶ್ಚರ್ಯಕರ ದೃಶ್ಯವೊಂದು ಸೂಫಿಯ ಕಣ್ಣಿಗೆ ಬಿತ್ತು. ನದಿಯ ನಡುಗಡ್ಡೆಯಿಂದ ಆ ದರವೇಶಿಯು ಅವನತ್ತ ಬರುತ್ತಿದ್ದ, ನದಿಯ ಮೇಲೆ ನಡೆದುಕೊಂಡು.....!

ಸೂಫಿಯು ನಿಬ್ಬೆರಗಾದ. ದೋಣಿಯ ಹುಟ್ಟು ಹಾಕುವುದು ನಿಂತಿತು. ಧರವೇಶಿಯು  ಅವನ  ಬಳಿಗೆ ನಡೆದುಕೊಂಡು ಬಂದು:

"ಸೋದರನೆ, ತೊಂದರೆ ಕೊಡುತ್ತಿದ್ದೇನೆ. ದಯವಿಟ್ಟು ಕ್ಷಮಿಸು. ನೀನು ಹೇಳಿಕೊಟ್ಟದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಲು ಕಷ್ಟ. ನೀನು ಹೇಳಿಕೊಟ್ಟದ್ದನ್ನು ನೀನು ತೋರಿಸಿದ ಮಾದರಿಯಲ್ಲೇ ಸ್ಪುಟವಾಗಿ ನಿನ್ನ ಹಾಗೆಯೇ ಉಚ್ಚರಿಸುವುದು ಹೇಗೆ ಹೇಳಿಕೊಡು. ಅದಕ್ಕಾಗಿಯೇ ನಾನು ಈಗ ನಿನ್ನ ಬಳಿಗೆ ಬರಬೇಕಾಯಿತು". ಎಂದು ಹೇಳಿದ.



       ---ಅಸ್ಸಾಸಿನ್ ಪಂಥಕ್ಕೆ ಸೇರಿದ ಕತೆ

Wednesday, 5 February 2020

ಸೂಫಿ ಕಥಾಲೋಕ

ನಿಜಕ್ಕೂ ಅಜ್ಞಾನಿಗಳು ಮಾತ್ರ ತಮ್ಮನ್ನು ತಾವೇ ಪಂಡಿತರು, ತತ್ವಜ್ಞಾನಿಗಳೆಂದು ಕರೆದುಕೊಂಡು ಬೀಗುತ್ತಾರೆ. ಅವರಿಗೆ ವಿಷಯದ ಸ್ಪಷ್ಟತೆ ಇರುವುದಿಲ್ಲ; ದೃಢವಾದ ಅಭಿಪ್ರಾಯವೂ ಇರುವುದಿಲ್ಲ` ಎಂದೆಲ್ಲಾ ನಸ್ರುದ್ದೀನನು  ಎಲ್ಲಾ ಕಡೆ ಹೇಳಿಕೊಂಡು ತಿರುಗುತ್ತಿದ್ದಾನೆ . ಇದರಿಂದ ನಮ್ಮ ಘನತೆಗೆ ಚ್ಯುತಿ ಬಂದಿದೆ. ಅಷ್ಟೇ ಅಲ್ಲ ದೇಶದ ಭದ್ರತೆಗೆ ಇದರಿಂದ ಅಪಾಯವಿದೆ ಎಂದು ತತ್ವಜ್ಞಾನಿಗಳು ಮತ್ತು ಪಂಡಿತರು ರಾಜನಲ್ಲಿ ದೂರಿದರು. ನಸ್ರುದ್ದೀನ್ ತಾನು ಹಾಗೆ ಹೇಳಿದ್ದು ನಿಜ ಎಂದು ಒಪ್ಪಿಕೊಳ್ಳಲು ಹಿಂಜರಿಯಲಿಲ್ಲ ಆರೋಪದ ವಿಚಾರಣೆಗಾಗಿ ರಾಜನು ಆ ತತ್ವಜ್ಞಾನಿಗಳು, ಘನಪಾಠಿಗಳು ಮತ್ತು ಕಾನೂನು ಪಂಡಿತರು ಗಳನ್ನು ಆಸ್ಥಾನದಲ್ಲಿ ಸೇರಿಸಿದ.

"ಮೊದಲು ಮಾತನಾಡುವ ಸರದಿ ನಿನ್ನದು" ಎಂದ ರಾಜ.

"ಬರೆಯಲು ಹಾಳೆ ಮತ್ತು ಲೇಖನಿಗಳನ್ನು ತರಿಸಿ" ಎಂದ ನಸ್ರುದ್ದೀನ್.

ಅವುಗಳನ್ನು ತರಿಸಲಾಯಿತು.

ಅವುಗಳನ್ನು ಇಲ್ಲಿ  ಬಂದಿರುವ ಏಳು ಮಂದಿ ಪಂಡಿತರಿಗೂ ಹಂಚಿಸಿ.

ಹಾಗೆಯೇ ಹಂಚಲಾಯಿತು.

"ರೊಟ್ಟಿ ಎಂದರೇನು?-- ಈ ಪ್ರಶ್ನೆಗೆ ಪ್ರತಿಯೊಬ್ಬರು ಪ್ರತ್ಯೇಕವಾಗಿ ಉತ್ತರ ಬರೆಯಬೇಕು".

ಏಳುಮಂದಿ ಉತ್ತರಗಳನ್ನು ಸಿದ್ಧಪಡಿಸಿದ್ದರು.
ಅವುಗಳನ್ನು ರಾಜನಿಗೆ ಒಪ್ಪಿಸಿ ಸಭೆಗೆ ಓದಿ ಹೇಳಲು  ಕೇಳಿಕೊಂಡ. ಅವರು ಬರೆದ ಉತ್ತರಗಳು ಹೀಗಿದ್ದವು:

ಮೊದಲನೆಯವನು: "ರೊಟ್ಟಿ ಎಂಬುವುದು ತಿನ್ನುವ ವಸ್ತು".

೨....."ಅದು ಹಿಟ್ಟು ಮತ್ತು ನೀರು".

೩.... "ದೇವರ ಕರುಣೆಯ ಪ್ರತಿಕ".

೪.... "ಬೇಯಿಸಲ್ಪಟ್ಟ ಮಿದ್ದಿದ ಹಿಟ್ಟಿನ ಖಾದ್ಯ".

೫.... ರೊಟ್ಟಿ ಎಂಬುದಕ್ಕೆ ಭಿನ್ನ ಭಿನ್ನ  ಅರ್ಥಗಳಿವೆ ಅರ್ಥ ಮಾಡಿಕೊಳ್ಳುವವರ ಮೇಲೆ ಅದರ ಅರ್ಥ ಅವಲಂಬಿಸಿದೆ.

೬.... "ಒಂದು ಪೌಷ್ಟಿಕ ಆಹಾರ".

ಏಳನೆಯವನು: "ಅದು ನಿಜವಾಗಿಯೂ ಏನು ಎಂಬುದು ಯಾರಿಗೂ ತಿಳಿಯದು".


ಆಗ ನಸ್ರುದ್ದೀನ್, "ಮಹಾರಾಜ ರೊಟ್ಟಿ ಎಂದರೇನು ಎಂಬುದರ ಬಗ್ಗೆಯೇ  ಇವರಲ್ಲಿ ಒಮ್ಮತದ ನಿರ್ಣಯ ಮೂಡಿಬರುವುದು ಸಾಧ್ಯವಿಲ್ಲ. ಹೀಗಿರುವಾಗ ಇತರ ವಿಷಯಗಳ ಬಗ್ಗೆ ಇವರು ನಿರ್ಣಯ ಕೊಡುವುದು ಹೇಗೆ ಸಾಧ್ಯ..? ನನ್ನ ಮೇಲಿರುವ ಆರೋಪದ ವಿಷಯವನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ: ನಾನು ಹೇಳಿದ್ದು ಸರಿಯೋ-ತಪ್ಪೋ ಅದನ್ನು ನಿರ್ಣಯಿಸಲು ಇವರನ್ನು ತೀರ್ಪುಗಾರರಾಗಿ ಕರಿಸಿದ್ದೀರಿ. ದಿನವೂ ತಿನ್ನುವ ರೊಟ್ಟಿಯ ಬಗ್ಗೆಯೇ  ಒಮ್ಮತವಿಲ್ಲದ ಇವರು ನಾನು ಧರ್ಮ ವಿರೋಧಿ ಎಂದು ಆರೋಪ ಹೊರಿಸುವಲ್ಲಿ ಮಾತ್ರ ಒಂದಾಗಿ ಬಿಡುತ್ತಾರೆ . ಎಂಥ ವಿಪರ್ಯಾಸ.?" ಎಂದು ಹೇಳಿದ.


                     -ಸೂಫಿ ಕಥಾಲೋಕ


ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...