Sunday, 9 September 2018

The last lecture

*ಮರಳಿ ಯತ್ನವ ಮಾಡು*

"ಅವಕಾಶ ಮತ್ತು ಪೂರ್ವ ಸಿದ್ಧತೆ ಸೇರಿದಾಗ ಅದೃಷ್ಟ ನಿಮ್ಮ ದಾಗುತ್ತದೆ".~*ಸಿನೆಕಾ*

*"ಮನಸ್ಸಿದ್ದರೆ ಮಾರ್ಗ"* ಸಂಕುಚಿತ ಮನೋಭಾವ ಬಿಡಿ, ವಿಶಾಲ ಹೃದಯಿಗಳಾಗಿ, ಮಹತ್ಕಾರ್ಯಗಳನ್ನು ಮಾಡಿ.

*ಹೋರಾಟದಲ್ಲಿ ಎದುರಾಳಿಗೆ  ನೀನು ಎಷ್ಟು ಬಲವಾದ ಹೊಡೆತವನ್ನು ಕೊಡಬಲ್ಲೆ ಎನ್ನುವುದಕ್ಕಿಂತಲೂ ಎದುರಾಳಿ ನೀಡಿದ ಏಟನ್ನು ಸಹಿಸಿಕೊಂಡು ತಿರುಗಿ ಮೈಕೊಡವಿ ಎಷ್ಟರ ಮಟ್ಟಿಗೆ ಎದ್ದು ನಿಲ್ಲಬಲ್ಲೆ ಹಾಗೂ ಮರು ಹೊಡೆತವನ್ನು ಕೊಡುವ ಮೂಲಕ ಮುಂದಿನ ಹೋರಾಟಕ್ಕೆ ಸಿದ್ಧನಾಗಬಲ್ಲೆ ಎಂಬುದು ಬಹಳ ಮುಖ್ಯ.*

*ಜನರು ನಿಮ್ಮ ಬಗ್ಗೆ  ಏನು ಯೋಚಿಸುತ್ತಾರೆಂಬ ಭ್ರಾಂತಿ ಬೇಡ.*

"ನಾನು ನಿಮ್ಮ ಬಗ್ಗೆ ಏನು ಯೋಚಿಸುತ್ತಿದ್ದೆನೆ ಎಂಬುದರ ಬಗ್ಗೆ ನೀವು ಚಿಂತಿಸಬೇಡಿ. ಅದು ಒಳ್ಳೆಯದೋ, ಕೆಟ್ಟದ್ದೋ ಎಂದು ಯೋಚಿಸಬೇಡಿ .
ನನ್ನ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಏನಾದರೂ ಅನುಮಾನ ಸುಳಿದರೆ, ಅದನ್ನು ಖಂಡಿತವಾಗಿ ನಿಮಗೆ ತಿಳಿಸುತ್ತೇನೆ. ನಿಮ್ಮ  ಬಗ್ಗೆ ಮನಸ್ಸಿನಲ್ಲೊಂದು ಭಾವನೆಯನ್ನು ಇಟ್ಟುಕೊಂಡು ಮುಂದೆ ನಯವಾಗಿ ಮಾತನಾಡುವ ಸ್ವಭಾವ ನನ್ನದಲ್ಲ . ಅಂತೆಯೇ ನಿಮಗೆ ನನ್ನ ಭರವಸೆ ಇಷ್ಟೇ. ನಾನು ಏನೂ ಮಾತನಾಡದೆ ಮೌನವಾಗಿದ್ದರೆ ನೀವು ಯಾವುದೇ ಕಾರಣಕ್ಕೂ ಯೋಜನೆ ಮಾಡುವ ಅಗತ್ಯವಿಲ್ಲ. "

*"ನಿನ್ನ ಹಳೆಯ ಬಟ್ಟೆಗಳು ಹರಿದು ಹಾಳಾಗುವವರೆಗೂ ಹೊಸ ಬಟ್ಟೆಗಳನ್ನು ಕೊಂಡುಕೊಳ್ಳಬೇಡ."*

  (ನಾನು 'ಅಂತಿಮ ಉಪನ್ಯಾಸ' ನೀಡಿದ ಸಂದರ್ಭಲ್ಲಿ ಧರಿಸಿದ್ದ ಬಟ್ಟೆಯನ್ನು ನೋಡಿದವರಿಗೆಲ್ಲಾ ಬಹುಶಃ ಇದು ಅರ್ಥವಾಗಿರಬಹುದು.)

*ಸಮಸ್ಯೆಗಳನ್ನೇ ಬಣ್ಣಿಸುಸುತ್ತಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾರಿರಿ. ಅದು ಎಂದಿಗೂ ಕಾರ್ಯನಿರ್ವಹಿಸುವ ವೈಖರಿಯಾಗಲಾರದು.*

*ಗೆಲ್ಲಬೇಕಾದರೆ ನಾನೆಷ್ಟು ಶ್ರಮಪಟ್ಟೆ ಮತ್ತು ಅದರ ಹಿಂದೆ ಅದೆಷ್ಟು ಸೋಲು ಮತ್ತು ನಿರಾಸೆ ಅಡಗಿರುತ್ತದೆ ಎಂಬುದನ್ನು ಇತರರು ತಿಳಿದುಕೊಳ್ಳಬೇಕಾದ ಅಗತ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ.*

*"ಗೆಲ್ಲಲಾಗದಿರುವ ಪರಿಸ್ಥಿತಿಯೊಂದಿದೆ ಎಂದು ನಾನು ನಂಬುವುದಿಲ್ಲ".*
        *~ "ಕ್ಯಾಪ್ಟನ್ ಕ್ರಿಕ್"*

*ನೀವು ಅಡ್ಡದಾರಿಯಲ್ಲಿ ಹೋಗುತ್ತಿದ್ದರೂ ಯಾರೂ  ತಿದ್ದುವ ಕಷ್ಟ ತೆಗೆದುಕೊಳ್ಳುತ್ತಿಲ್ಲ ಎಂದರೆ, ಅದು ನೀವು ಇರಬೇಕಾದ ಸ್ಥಳವಲ್ಲ ಎಂದರ್ಥ.  ನಿಮ್ಮನ್ನು ವಿಮರ್ಶಿಸುವ, ಟೀಕಿಸುವ ಮತ್ತು ನಿಮ್ಮ ತಪ್ಪುಗಳನ್ನು ಎತ್ತಿತೋರಿಸುವವರು ಬಹಳಷ್ಟು ಬಾರಿ ನಿಮ್ಮನ್ನು ಅತಿಯಾಗಿ ಪ್ರೀತಿಸುತ್ತಾರೆ.  ನಿಮ್ಮನ್ನು ಇನ್ನೂ ಉನ್ನತ ಸ್ಥಾನದಲ್ಲಿ ನೋಡಲು ಬಯಸುತ್ತಾರೆ.  ಇದು ಕಟು ಸತ್ಯ.*

*ನಾವು ಯಾವುದೇ ಕನಸುಗಳನ್ನು ಕಂಡರೂ ಅದನ್ನು ಕಾರ್ಯರೂಪಕ್ಕೆ ತರಬೇಕು, ಆಗ ಮಾತ್ರ ಅದು ನಮಗೆ ಹೆಚ್ಚಿನ ಮಾನ್ಯತೆ ಕೊಡುತ್ತದೆ.*

  *Randy pausch*

No comments:

Post a Comment

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...