Saturday, 28 December 2019

ವಿಶ್ವ ಮಾನವ ಸಂದೇಶ

೧."ಮನುಷ್ಯ ಜಾತಿ ತಾನೊಂದೆ ವಲಂ" ಎಂಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.

೨.ವರ್ಣಾಶ್ರಮವನ್ನು ತಿದ್ದುವುದಿಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಅಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಅಂತ್ಯಜ, ಶಿಯಾ-ಸುನ್ನಿ ಕ್ಯಾಥೋಲಿಕ್ ,ನಿರಂಕಾರಿ  ಇತ್ಯಾದಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು.

೩.ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.

೪.'ಮತ' ತೊಲಗಿ "ಅಧ್ಯಾತ್ಮ" ಮಾತ್ರ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು.

೫.ಮತ 'ಮನುಜಮತ' ವಾಗಬೇಕು; ಪಥ 'ವಿಶ್ವಪಥ' ವಾಗಬೇಕು; ಮನುಷ್ಯ 'ವಿಶ್ವಮಾನವ" ನಾಗಬೇಕು.

೬.ಮತ ಗುಂಪು ಕಟ್ಟುವ ವಿಷಯವಾಗಬಾರದು ಯಾರು ಯಾವ ಒಂದು ಮತಕ್ಕೂ ಸೇರಿದೆ, ಪ್ರತಿಯೊಬ್ಬನೂ ತಾನು ಕಂಡುಕೊಳ್ಳುವ 'ತನ್ನ ಮತಕ್ಕೆ'  ಮಾತ್ರ ಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪುಕಟ್ಟಿ ಜಗಳ ಹಚ್ಚುವಂತಾಗಬಾರದು.

೭.ಯಾವ ಒಂದು ಗ್ರಂಥವೂ "ಏಕೈಕ ಪರಮ ಪೂಜೆ"ಧರ್ಮಗ್ರಂಥ ವಾಗಬಾರದು ಪ್ರತಿಯೊಬ್ಬ ವ್ಯಕ್ತಿಯು ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ 'ದರ್ಶನ'ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು.


         ----#ಕುವೆಂಪು.

Thursday, 26 December 2019

ನೀ ನನ್ನ ಜೀವ

ನೀ ನನ್ನ ಜೀವ
ನೀ ನನ್ನ ಭಾವ
ಬೇರೆತಾಂಗ ಹಾಲು ಜೇನ
ಸ್ವಚ್ಛಂದ ಬಾನ ಹಕ್ಯಾಗಿ ಹಾರಿ
ಮಿನುಗೋಣ ಚುಕ್ಕಿಹಾಂಗ...

ಕಾಣದೆಯೇ ನಿನ್ನ ಚಡಪಡಿಸಿ ಜೀವ
ಮಳೆ ಮೋಡ ಮುಸುಕಿದಾಂಗ 
ಕಂಡಾಗ ನಿನ್ನ ಬಿಂದಿಗೆಯ ಚಂದ್ರ
ಇಳಿದಾಂಗ ಮನಸಿನೋಳಗ...

ರಸಬಾಳೆ ತಿನಿಸಿ
ಮುಂಗುರುಳ ಸರಿಸಿ
ಮಗುವಾಂಗ  ತೋಡೆಯಮ್ಯಾಲ
ಬೋಗಸೆಲು ಹಿಡಿದು ಕಾಯುವೇನು ನಾನು
ಬಾಳೆಲೆಯ ನೆರಳಹಾಂಗ...

ಈ ನಿನ್ನ ನಗೆಯೂ
ಮನವೇಲ್ಲ ದುಂಬಿ
ಹರಡೈತಿ ಬಳ್ಳಿಹಾಂಗ
ಹನಿಗೂಡು ಹೊತ್ತು ಕಟೈತೆ ಕಪ್ಪು
ಮನವೆಲ್ಲ ಹಕ್ಕಿ ಹಾಡ...


ಮನವೆಲ್ಲ ಅಮಲು
ಮಲ್ಲಿಗೆಯ ಘಮಲು
ಕುಡಿದಾಂಗ ಜೇನು ಭ್ರಮರ
ನಗೆಯೊಂದು ಅರಳಿ
ಹೂ ದೂಟಿಯ ಮ್ಯಾಲ
ಹರಿದಾಂಗ ಉಕ್ಕಿ ಹಾಲ...


ಹಾರುತಲಿ ದುಂಬಿ
ಮದುವೆಲ್ಲ ಹೀರಿ
ನಿನ್ನ ತುಟಿಯ ಸೇರಿದಾಂಗ
ಮನದುಂಬಿ ನೋವು
ಬಿಂದಿಗಿಯ ಮದವು
ಹೊರ ಚೆಲ್ಲಿಚೆಲ್ಲಿದಾಂಗ....


ಚಂದುಟಿಯ ಮಾತು
ಮಸ್ಸೆಂಜೆ ಹಾದಿಯಲ್ಲಿ
ತಂಗಾಳಿ ತಿಡಿದಾಂಗ
ಬಾರದೇಯ ನೀನು
ಬರಿದಾಗಿ ಮನವು
ಮರುಭೂಮಿ ಕುದುರೆ ಹಾಂಗ...

ಮನದುಂಬಿ ನೋವು
ಬಿಂದಿಗಿಯ ಮದವು
ಹೊರ ಚೆಲ್ಲಿಚೆಲ್ಲಿದಾಂಗ....
ನೀ ಹೋದ ಹಾದಿ
ನಿಶ್ಯಬ್ದವಾಗಿ 
ಮಳೆ ಬಂದು ನಿಂತ ಹಾಂಗ.

Monday, 16 December 2019

ಬುದ್ಧ ವಾಣಿ

ದುಃಖದ  ಎಂದರೇನು...?

ಜನನವು ದುಃಖ, ಮುಪ್ಪು ದುಃಖ; ಮರಣವು ದುಃಖ; ಶೋಕ, ನೋವು, ಗೋಳು, ಚಿಂತೆ, ಕೊರಗು, ನಿರಾಸೆ ,ಆಶಾಭಂಗ ಎಲ್ಲವೂ ದುಃಖ. ಆಪ್ತಿಯವಾಗಿರುವುದರ ಜೊತೆಗೂಡುವುದು ದುಃಖ ,ಪ್ರೀಯವಾಗಿರುವುದರ ಜೊತೆಗೂಡದಿರುವುದು ದುಃಖ, ಆಸೆಪಟ್ಟಿದ್ದು ಸಿಕ್ಕದಿರುವುದು ದುಃಖ ,ಸಂಕ್ಷಿಪ್ತವಾಗಿ ಹೇಳುವುದಾದರೆ ಉಪದಾನದ (ತಿವ್ರ ಆಸಕ್ತಿ)ದಿಂದೊಡಗೂಡಿದ ಪಂಚಖಂಧಗಳನ್ನೊಳಗೊಂಡ ಜೀವನವೇ ದುಃಖ.


ಜನ್ಮ ಅಂದರೇನು..?

ಜನ್ಮ ಅಂದರೆ ಬೇರೆ ಬೇರೆ ಜೀವಿಗಳಲ್ಲಿ ಗರ್ಭಧಾರಣೆಯಾಗುವುದು ಭೌತಿಕ ಜಗತ್ತಿಗೆ ಬರುವುದು ,ಪಂಚಸ್ಕಂದಗಳನ್ನು ಹೊಂದಿ ಇಂದ್ರಿಯ ಆಯತಗಳನ್ನು ಪಡೆಯುವುದು ಇದನ್ನು ಜನ್ಮ ಎಂದು ಕರೆಯುತ್ತೇವೆ.


ಮುಪ್ಪು ಎಂದರೇನು..?

ಯಾವ ಪ್ರಾಣಿಗಳು ಎಲ್ಲಿರಬೇಕಾಗಿದೆಯೋ ಅಲ್ಲಿದ್ದು ನಶಿಸಿ ಹೋಗುವುದು, ವಯಸ್ಸಾಗುವುದು, ಸಣ್ಣಗಾಗುವುದು, ಬಣ್ಣ  ಕುಂದುವುದು, ಸುಕ್ಕು ಗೊಳ್ಳುವುದು, ಇಂದ್ರಿಯಗಳ ಮತ್ತು ಮನಸ್ಸಿನ ಶಕ್ತಿ ಕುಂದುವುದು ಇದನ್ನು ಮುಪ್ಪು ಎಂದು ಕರೆಯುತ್ತೇವೆ..


ಮರಣ ಎಂದರೇನು..?

ಜೀವಿಗಳು ತಾವು ಎಲ್ಲಿದ್ದವು ಅಲ್ಲಿಂದ ಚ್ಯುತಿಯಾಗಿ ನಿರ್ಗಮಿಸುವುದು, ಅವುಗಳ ನಾಶವಾಗುವುದು ,ಮಾಯವಾಗುವುದು, ಜೀವನ ಕಾಲವನ್ನು ಮುಗಿಸುವುದು, ಪಂಚ ಸ್ಕಂದಗಳು ವ್ಯಯವಾಗಿ ಶರೀರ ತ್ಯಾಗವಾಗುವುದು-- ಇವನ್ನು ಮರಣ ಎನ್ನುತ್ತೇವೆ.

ಶೋಕ ಎಂದರೇನು..?

ದುರದೃಷ್ಟದಿಂದ ಆದ ನಷ್ಟ ಚಿಂತೆ ಮತ್ತು ಯೋಚನೆಗೊಳಗಾದಾಗ, ತನ್ನೊಳಗೇ ಶೋಕಿತನಾದಾಗ ಉಂಟಾಗುವುದೇ ಶೋಕ.


ರೋದನೆ ಎಂದರೇನು..?

ಯಾವುದಾದರೂ ದುರಾದೃಷ್ಟ ಅಥವಾ ನಷ್ಟವು ಒದಗಿದಾಗ ಅದರಿಂದ ಗೋಳಾಡುವುದು ಮತ್ತು ಅಳುವುದು--- ಇದೇ ರೋಧನೆ.


ದುಃಖ ವೆಂದರೇನು..?

ಶಾರೀರಿಕ ನೋವು ಮತ್ತು ಮಾನಸಿಕ ಅಸಂತೋಷದಿಂದ ಉಂಟಾಗುವ ನೋವು -- ಇವೇ ದುಃಖ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...