Monday, 16 December 2019

ಬುದ್ಧ ವಾಣಿ

ದುಃಖದ  ಎಂದರೇನು...?

ಜನನವು ದುಃಖ, ಮುಪ್ಪು ದುಃಖ; ಮರಣವು ದುಃಖ; ಶೋಕ, ನೋವು, ಗೋಳು, ಚಿಂತೆ, ಕೊರಗು, ನಿರಾಸೆ ,ಆಶಾಭಂಗ ಎಲ್ಲವೂ ದುಃಖ. ಆಪ್ತಿಯವಾಗಿರುವುದರ ಜೊತೆಗೂಡುವುದು ದುಃಖ ,ಪ್ರೀಯವಾಗಿರುವುದರ ಜೊತೆಗೂಡದಿರುವುದು ದುಃಖ, ಆಸೆಪಟ್ಟಿದ್ದು ಸಿಕ್ಕದಿರುವುದು ದುಃಖ ,ಸಂಕ್ಷಿಪ್ತವಾಗಿ ಹೇಳುವುದಾದರೆ ಉಪದಾನದ (ತಿವ್ರ ಆಸಕ್ತಿ)ದಿಂದೊಡಗೂಡಿದ ಪಂಚಖಂಧಗಳನ್ನೊಳಗೊಂಡ ಜೀವನವೇ ದುಃಖ.


ಜನ್ಮ ಅಂದರೇನು..?

ಜನ್ಮ ಅಂದರೆ ಬೇರೆ ಬೇರೆ ಜೀವಿಗಳಲ್ಲಿ ಗರ್ಭಧಾರಣೆಯಾಗುವುದು ಭೌತಿಕ ಜಗತ್ತಿಗೆ ಬರುವುದು ,ಪಂಚಸ್ಕಂದಗಳನ್ನು ಹೊಂದಿ ಇಂದ್ರಿಯ ಆಯತಗಳನ್ನು ಪಡೆಯುವುದು ಇದನ್ನು ಜನ್ಮ ಎಂದು ಕರೆಯುತ್ತೇವೆ.


ಮುಪ್ಪು ಎಂದರೇನು..?

ಯಾವ ಪ್ರಾಣಿಗಳು ಎಲ್ಲಿರಬೇಕಾಗಿದೆಯೋ ಅಲ್ಲಿದ್ದು ನಶಿಸಿ ಹೋಗುವುದು, ವಯಸ್ಸಾಗುವುದು, ಸಣ್ಣಗಾಗುವುದು, ಬಣ್ಣ  ಕುಂದುವುದು, ಸುಕ್ಕು ಗೊಳ್ಳುವುದು, ಇಂದ್ರಿಯಗಳ ಮತ್ತು ಮನಸ್ಸಿನ ಶಕ್ತಿ ಕುಂದುವುದು ಇದನ್ನು ಮುಪ್ಪು ಎಂದು ಕರೆಯುತ್ತೇವೆ..


ಮರಣ ಎಂದರೇನು..?

ಜೀವಿಗಳು ತಾವು ಎಲ್ಲಿದ್ದವು ಅಲ್ಲಿಂದ ಚ್ಯುತಿಯಾಗಿ ನಿರ್ಗಮಿಸುವುದು, ಅವುಗಳ ನಾಶವಾಗುವುದು ,ಮಾಯವಾಗುವುದು, ಜೀವನ ಕಾಲವನ್ನು ಮುಗಿಸುವುದು, ಪಂಚ ಸ್ಕಂದಗಳು ವ್ಯಯವಾಗಿ ಶರೀರ ತ್ಯಾಗವಾಗುವುದು-- ಇವನ್ನು ಮರಣ ಎನ್ನುತ್ತೇವೆ.

ಶೋಕ ಎಂದರೇನು..?

ದುರದೃಷ್ಟದಿಂದ ಆದ ನಷ್ಟ ಚಿಂತೆ ಮತ್ತು ಯೋಚನೆಗೊಳಗಾದಾಗ, ತನ್ನೊಳಗೇ ಶೋಕಿತನಾದಾಗ ಉಂಟಾಗುವುದೇ ಶೋಕ.


ರೋದನೆ ಎಂದರೇನು..?

ಯಾವುದಾದರೂ ದುರಾದೃಷ್ಟ ಅಥವಾ ನಷ್ಟವು ಒದಗಿದಾಗ ಅದರಿಂದ ಗೋಳಾಡುವುದು ಮತ್ತು ಅಳುವುದು--- ಇದೇ ರೋಧನೆ.


ದುಃಖ ವೆಂದರೇನು..?

ಶಾರೀರಿಕ ನೋವು ಮತ್ತು ಮಾನಸಿಕ ಅಸಂತೋಷದಿಂದ ಉಂಟಾಗುವ ನೋವು -- ಇವೇ ದುಃಖ.

No comments:

Post a Comment

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...