Tuesday, 12 March 2019

ಬುದ್ಧ

★★★★★★★★★★★★★★ #ಸಿದ್ಧಾರ್ಥ ಗೌತಮ್-ಭೋದಿಸತ್ವನು ಹೇಗೆ ಬುಧ್ಧನಾದನು? ಪರಿವರ್ತನಯ ಪ್ರಚಾರ ಬುದ್ಧ ಭೋಧಿಸಿದ್ದು ಏನು? ●●●●●●●●●●●●●●●●●●●●●●●● ★ಮ಼ಗ಼ನ಼ನ್ನು ರ಼ಕ್ಷಿಸ಼ಲು ತಂದೆ ಮಾಡಿದ಼ ಉಪಾಯ಼ಗ಼ಳು★ ●=<>=<><<><<<===>>><><><>=<>=● ●ತನ್ನ ಮಗ ಸಿದ್ಧಾರ್ಥನು ವಿವಾಹವಾಗಿ ಗೃಹಸ್ಥಾಶ್ರಮವನ್ನು ನೋಡಿ ರಾಜನು ಸಂತೋಷಪಟ್ಟಿದ್ದರು ಸಹ, #ಅಸಿತ ಖುಷಿಯ ಭವಿಷ್ಯವಾಣಿಯು ಸದಾ ಅವನ ಮನಸ್ಸನ್ನು ಕೋರೆಯುತ್ತಿತ್ತು. ●ಆ ಭವಿಷ್ಯವಾಣಿಯು ನಿಜವಾಗುವುದನ್ನು ತಪ್ಪಿಸಲು ಸಿದ್ಧಾರ್ಥನನ್ನು ಭೌತಿಕ ಸುಖಭೋಗದಲ್ಲಿ ತನ್ನನ್ನು ತಾನು ಮರೆಯುವಂತೆ ಮಾಡಲು ರಾಜನು ಆಲೋಚಿಸಿದನು. ●ಆ ಉದ್ದೇಶದಿಂದ ಶುದ್ಧೋದನನು ತನ್ನ ಮಗನಿಗಾಗಿ #ಚಳಿಗಾಲ, #ಬೇಸಿಗೆ, & #ಮಳೆಗಾಲಗಳಿಗೆ ತಕ್ಕಂತೆ 3~ಭವ್ಯವಾದ ಅರಮನೆಗಳನ್ನು ಕಟ್ಟಿಸಿ , ಪ್ರಣಯಾಸಕ್ತಿಗೆ ಪ್ರೇರಕವಾದ ಎಲ್ಲ ಪರಿಕರಗಳೊಂದಿಗೆ ಅವುಗಳನ್ನು ಸಜ್ಜುಗೊಳಿಸಿದನು... ●ಅವನ ಅರಮನೆಯ ಪುರೋಹಿತ #ಉದಯನೊಂದಿಗೆ ಸಮಾಲೋಚಿಸಿ, ಅತಿ ಸುಂದರವಾದ ಯುವತಿಯರನ್ನೊಳಗೊಂಡ ಒಂದು ಅಂತಃಪುರವನ್ನು ರಚಿಸಲು ಸೂಚಿಸಿದನು. ● ಕನ್ಯೆಯರನ್ನು ಆರಿಸಿದ ಮೇಲೆ ಅವರಿಗೆ ರಾಜಕುಮಾರನನ್ನು ಹೇಗೆ ಪ್ರಲೋಭನೆಗೊಳಪಡಿಸಬೇಕು ಎಂದು ಉದಯನು ಅವರಿಗೆ ಬೋಧಿಸಿದ್ದು ಹೀಗೆ . ●ನೀವು ವಶೀಕರಣ ವಿದ್ಯೆಯನ್ನು ಚನ್ನಾಗಿ ಬಲ್ಲವರು. ಕಾಮಕ್ರೀಡೆಯ ಭಾಷೆ ನಿಮಗೆ ಗೊತ್ತು .ಅಲ್ಲದೆ ಋಷಿಮುನಿಗಳನ್ನು-ದೇವತೆಗಳನ್ನೂ ನಿಮ್ಮ ಮೋಹಪಾಶದಲ್ಲಿ ಬಂಧಿಸಬಲ್ಲಿರಿ. ●ಹೃದಯದಲ್ಲಿ ಮೋಹಕ ಭಾವನೆಗಳನ್ನು ಮೂಡಿಸುವ ನಿಮ್ಮ ಚಾತುರ್ಯ, ನಿಮ್ಮ ಬೆಡಗು ಬಿನ್ನಾಣ, ನಿಮ್ಮ ಮೈ-ಸೊಗಸು & ಸೌಂದರ್ಯದಿಂದಾಗಿ ಹೆಂಗಸರು ನಿಮ್ಮಲ್ಲಿ ಮೋಹಪರವಶರಾಗುತ್ತಾರೆ. ಅಂದಮೇಲೆ ಗಂಡಸರ ಪಾಡೇನ...? ●ಈ ಮಹಾಶೂರನ (ಬುಧ್ಧ) ಕೀರ್ತಿ ಅದೆಷ್ಟೇ ಮಹತ್ವದ್ದಿರಲಿ, ನಿಮ್ಮಲ್ಲಿರುವ ಹೆಣ್ಣಿನ ಶಕ್ತಿ ಅಪಾರವಾದದ್ದು. ●ಹಿಂದೆ ಒಂದು ಕಾಲದಲ್ಲಿ ದೇವತೆಗಳಿಂದಲೂ ಸೋಲಿಸಲಾಗದ ಮಹರ್ಷಿಯೊಬ್ಬನನ್ನು ಸಾಧಾರಣ #ವೇಶ್ಯೆ ಕಾಶಿ ಎಂಬುವವಳು ಮೋಹಿಸಿ ಗೆದ್ದು, ಅವನನ್ನು ಮೆಟ್ಟಿ ನಿಂತಳು. ●ಮಹರ್ಷಿ ವಿಶ್ವಾಮಿತ್ರನು ತಪಸ್ಸಿನಲ್ಲಿ ಮೈಮರೆತಿದ್ಧಾಗ #ಘೃತಾಚಿ ಎಂಬ ಅಪ್ಸರೆ ಅವನನ್ನು ಸೆರೆಹಿಡಿದು, ಹೊತ್ತೊಯ್ದು 10 ವರ್ಷಗಳ ಕಾಲ ಅರಣ್ಯದಲ್ಲಿ ಬಂಧಿಸಿಟ್ಟಳು. ●ಈ ರೀತಿ ಅನೇಕ ಋಷಿಗಳನ್ನು ಹೆಂಗಸರು ಮೋಹಪರವಶರನ್ನಾಗಿ ಮಾಡಿರುವಾಗ, ಯೌವನದ ಮೊದಲ ಹಂತದಲ್ಲಿ ಇರುವ ಕೋಮಲ ಶರೀರದ ಈ ರಾಜಕುಮಾರನ ಮಾತಿನ್ನೇನು.? ಎಂದು #ಉದಯನು ಕನ್ಯೆಯರಿಗೆ ಬೋಧಿಸಿದ. ಆ ಕನ್ಯೆಯರು ರಾಜಕುಮಾರನನ್ನು ಮೋಹಿಸಿ ಗೆದ್ದರೆ..? ........ಮುಂದುವರೆವುದು.! ================================ ★ರಾಜಕುಮಾರನನ್ನು ಗೆಲ್ಲುವಲ್ಲಿ ಹೆಂಗಸರ ಸೋಲು★ ~~~~~~~~~~~~~~~~~~~~~~~~~ ●ಆಕರ್ಷಕವಾದ ಕುಡಿನೋಟ, ತಿದ್ದಿದ ಹುಬ್ಬು, ಮೋಹಕ ನಗು, ನಯವಾದ ಮೆಲುನುಡಿ ಯಿಂದ ಅಂತಃಪುರದ ಹೆಂಗಸರು ರಾಜಕುಮಾರನನ್ನು ಗೆಲ್ಲಲು ಮುಂದೆ ಬಂದರು. ● ಕಾಮೋದ್ರೇಕಗೊಂಡ ಕೆಲವು ಹೆಂಗಸರು ಸದೃಢವಾದ ತಮ್ಮ ವಕ್ಷದ್ವಯಗಳಿಂದ ರಾಜಕುಮಾರನನ್ನು ಮೃದುವಾಗಿ ಒತ್ತಿಹಿಡಿದರು. ●ಇನ್ನೂ ಕೆಲವರು ತಾವು ಜಾರಿಬೀಳುವಂತೆ ನಟಿಸಿ ಅವನನ್ನು ಬಲವಾಗಿ ತಬ್ಬಿಕೊಂಡು ಬಳ್ಳಿಯಂತೆ ಬದುಕುವ ತಮ್ಮ ನಳಿದೋಳುಗಳಿಂದ ಅವನನ್ನು ಬಿಗಿದಪ್ಪಿದರು. ●ಕೆಲವರು ಮೋಹಕವಾದ ಮದ್ಯದ ವಾಸನೆಯನ್ನು ಸೂಸುವ ಕೆಂಪಾದ ತಮ್ಮ ಕೆಳದುಟಿಯನ್ನು ಚಾಚುತ್ತ "ನನ್ನ ಅಂತರಂಗದ ಭಾವನೆಗಳ ರಹಸ್ಯವನ್ನು ಕೇಳು ಬಾ" ಎಂದು ಅವನ ಕಿವಿಯಲ್ಲಿ ಉಸುರಿದರು. ●ಕೆಲವರು ತಮ್ಮ ನೀಲಿ ಬಣ್ಣದ ಮೇಲುಡುಗೆಯನ್ನು ಬೇಕಂತಲೆ ಉನ್ಮತ್ತರಂತೆ ನವುರಾದ ಬಟ್ಟೆಯನ್ನು ತೊಟ್ಟು ದೇಹವನ್ನು ಪ್ರದರ್ಶಿಸತ್ತಾ ಚಿನ್ನದ ಕಾಲ್ಗೆಜ್ಜೆಗಳನ್ನು ಝೇಂಕಿಸುತ್ತಾ ಅತ್ತಿಂದಿತ್ತ ಸುಳಿದಾಡಿದರು. ●ಇನ್ನೂ ಕೆಲವರು ಮಾವಿನ ಬಿಲ್ಲನ್ನು ಕೈಯಲ್ಲಿ ಹಿಡಿದು ತಮ್ಮ ತುಂಬಿದ ಎದೆಯನ್ನು ಚಿನ್ನದ ಕಲಶದಂತೆ ಪ್ರದರ್ಶಿಸಿದರು. ●ಈ ರೀತಿ ಪ್ರೇಮಾತಿರೇಕಕ್ಕೆ ಒಳಗಾದ ಆ ಯುವತಿಯರು ರಾರಾಜಕುಮಾರನ ಮೇಲೆ ನಾನಾ ರೀತಿಯ ಯುಕ್ತಿಗಳಿಂದ ದಾಳಿ ಮಾಡಿದರು. ●ಅವರ ನೈಜ ಸ್ವರೂಪವೇನೆಂಬುದನ್ನು ಬಲ್ಲ ರಾರಾಜಕುಮಾರನು ಸ್ವಲ್ಪವೂ ವಿಚಲಿತನಾಗಲಿಲ್ಲ ದೃಢವಾದ ಮನಸ್ಸಿನಿಂದ ಅಂತರ್ ಮುಖಿಯಾಗಿ ಚಿಂತಿಸುತ್ತಿದ್ದನು. ● ಈ ಯೌವನ ಎಂಬುದು ನಶ್ವರವಾದದ್ದು. ಮುಪ್ಪು ಈ ಎಲ್ಲ ಸೌಂದರ್ಯವನ್ನು ನಾನಾಶಗೊಳಿಸುತ್ತದೆ. ಲೌಕಿಕ ಜೀವನ ನಶ್ವರವಾದದ್ದು. ಕೊನೆಗೂ ★ರಾಜಕುಮಾರನನ್ನು ಗೆಲ್ಲುವಲ್ಲಿ ಹೆಂಗಸರ ಸೋಲು★

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...