Friday, 24 August 2018

ಸಾವಿರಾರು ನದಿಗಳು

.....

ನನ್ನ ಜನಗಳು

....

ಆಯ್ದ ಕವನ

•••"ಕಲ್ಲು ಮಣ್ಣು ಕಟ್ಟಿಗೆಗಳಿಗೆಲ್ಲ ಕೊರೆದು
ಬಣ್ಣ-ಬಣ್ಣದ ಚಿತ್ತಾರ ಬಿಡಿಸಿದಿರಿ
ರತ್ನ ವಜ್ರ ತೊಡಿಸಿ ಪಟ್ಟೆ  ಪಿತಾಂಬರ ಉಡಿಸಿ ಚೆಲುವ
ಚಲುವೆಯಕೈಗೆ ಗದಾಪದ್ಮಗಳ ಹಿಡಿಸಿದಿರಿ.!
*ಹತ್ತಾರು ಕೈಗಳು* *ಹಲವಾರು ಮುಖಗಳನ್ನು*
*ಹಂದಿ-ಆಮೆಗಳಂಥ* ಅವತಾರ ಕಥೆಗಳು
ಬೆಚ್ಚಿ ಬೀಳಿಸುವಂತೆ ಹೆಣೆದು ಹಾಡಿದಿರಿ"
--B.T *ಲಲಿತನಾಯಕ*

ದೇವರು-ದಿಂಡಿರುಗಳ ಬಗೆಗೆ ಭಯ ಹುಟ್ಟಿಸಿದ ಪುರೋಹಿತಶಾಹಿ ವ್ಯವಸ್ಥೆ ಇಲ್ಲಿಯ ಜನತೆಯ ಬದುಕನ್ನು ಹೇಗೆ ಮಣ್ಣು ಮಾಡಿದೆ ಎಂಬುದನ್ನು ಕವಯಿತ್ರಿ ಇಲ್ಲಿ ಸ್ಪಷ್ಟಪಡಿಸಿದ್ದಾರೆ.

*"ನಿಮ್ಮ ಕಲ್ಲು ಮಾಡಿದ ಜನರ ಮಣ್ಣು ಮಾಡಿರೋ"*
              -- *ಚಂಪಾ*
ಮೌಡ್ಯತೆಯನ್ನು ಪ್ರಶ್ನಿಸುತ್ತದೆ.

•••" *ನೇಗಿಲ ಮೊನೆಯಿಂದ*
ಇತಿಹಾಸ ಕೊರೆಯಲ್ಪಟ್ಟಿತು
ಆದರೆ *ಕೀರಿಟದೊಜ್ರದ ಮೊನೆಯಿಂದ*
ಎಂದು ಕಲಿಸಿದರು ನಮಗೆ
*ಗಯ್ಮೆಯ ಕೈಯಿಂದ*
ಇತಿಹಾಸ ನಿರ್ಮಾಣವಾಯಿತು
ಆದರೆ *ಪುರೋಹಿತ ಮಂತ್ರ*
ದಿಂದ ಎಂದು ಕಲಿಸಿದರು ನಮಗೆ"
    --R.v. *ಭಂಡಾರಿ*

•••ಜಗತ್ತನ್ನೇ ಗೆಲ್ಲಬಲ್ಲ ಸ್ವಾಮೀಜಿಗಳು ಕಾಮವನ್ನೇಕೆ ಗೆಲ್ಲುವುದಿಲ್ಲ ಋಷಿಗೆ ಕೇಳಿದೆ...
ಮನಸ್ಸಿಗೆ ಆಧ್ಯಾತ್ಮ , ದೇಹಕ್ಕೆ ಸುಖ, ಮೋಡ, ಮಳೆ, ಚಿಗುರು, ಬೆಳೆ, ಎಂದ..!!

•ಸ್ವಾಮೀಜಿಗಳು ಮದುವೆಯಾಗದಿದ್ದರೆ
ಏನಾಗುತ್ತೋ... ಅಜ್ಜನಿಗೆ ಕೇಳಿದೆ
ಒಲೆಯ ಮೇಲಿನ ಹಾಲು ಉಕ್ಕಿ ನೆಲಕ್ಕೆ ಸೋರುತ್ತಿತ್ತು.....!

----D.M *ನಾಟೇಕರ್*

•••"ಪಟ್ಟವೇರಿದೊಬ್ಬನಿಗಾಗಿ ಚಟ್ಟವೇರಿದವರೆಷ್ಟೋ
ತಳದ ಜನರ ತಳಮಳದ ದನಿಗೆ ಬಾಣ ಹೂಡಿದ
ಶಬ್ದವೇದಿ ನರಹಂತಕರ ನಿರಂತರ ಸಂತೆ
ಇದು ಸುವರ್ಣಯುಗದಂತೆ
ಇದು ಸುವರ್ಣಾಕ್ಷರದಲಿ ಬರೆದ ಇತಿಹಾಸವಂತೆ
ಇದೊಂದು ಕಂತೆ, ಸುಳ್ಳು,ಬೊಂಕುಗಳ ತೇಪೆ ಹಾಕಿ ಹೋಲಿದಂಥ ಬೋತೆ."

-- *ಜಂಬಣ್ಣ ಅಮರಚಿಂತ*

••• *"ಯಾವ ಅಕ್ಷರದಿಂದ ಬರೆದು ಹೇಳಲಿ ನಾನು*
*ನಮ್ಮ ಜನರಿಗಾದ ಎದೆಯ ಬ್ಯಾನಿ*
*ಲೂಟೇಗಾರರೆ ಇಲ್ಲಿ ಲೀಡರ್ ಆಗುವ  ಹೊತ್ತು*
*ನಡೆಯಲಾರವು ನಿತ್ಯ ಖೂನಿ"*

-- *ಚನ್ನಣ್ಣ ವಾಲೀಕಾರ*

•••"ನಾ ಕಟ್ಟಿರುವ
ಬೇಲಿಯನು ಮುರಿದು
ಚಂದ ಕಂಡ ಸೀರೆ, ಬ್ಲೌಸ್, ಬ್ರಾ
ಗಳಲ್ಲಿ ಹೊಕ್ಕು ಕಾವೇರಿ
ಉಬ್ಬು ತಗ್ಗುಗಳ ನೆಕ್ಕಿ ಕಣ್ಣಿಂದ
ಮಕರಂದ ಹೀರಿ ಸುಖಿಸಿ
ಹಸನ್ಮುಖಿಸುವ ನಿನ್ನ ಡೊಂಕು ಬಾಲದ
ಲೋಲತೆಗೆ ನಾನೂ
ಉತ್ತರಿಸಬೇಕಾದಿತು....
ನೀ ಕಟ್ಟಿರುವ ಬೇಲಿಯನು
ಮುರಿದೂಗೆದು"

---B.T. *ಲಲಿತನಾಯಕ*

��ಈ ಕವಿತೆಯಲ್ಲಿ ಗಂಡಿನ ಲೈಂಗಿಕ ಸ್ವೇಚ್ಛಾಚಾರದ ಬಗೆಗೆ ಪ್ರತಿಭಟನೆಯ ದನಿ ಇದೆ... ಈ ದನಿ ಪರೋಕ್ಷವಾಗಿ ಲೈಂಗಿಕ ಸ್ವಾತಂತ್ರ್ಯದ ಮಹತ್ವವನ್ನು ಸಾರುತ್ತದೆ.



•••"ದಿನಕ್ಕೊಬ್ಬರಿಬ್ಬರಾದರೂ
ದುಶ್ಯಾಸನರ ಕೈಯೊಳಗೆ
ವಿವಸ್ತ್ರಳಾಗುವ ನನಗೆ
ಕೂಗಿ ಕರೆದರೂ
ಚೀರಿ ಮೀಡಿದರೂ
ಕಿವುಡಾದ ಕೃಷ್ಣ
ಕೊಡಲಿಲ್ಲ ಒಮ್ಮೆಯೂ
ಅಕ್ಷಯದ ವಸ್ತ್ರದಾನ
ತೆಡೆದಿಲ್ಲ ಗಳಿಗೆಯೂ
ಸೋರಿ ಹೋಗುವ ಮಾನ"

-- *ವಿಜಯಾ ಸುಬ್ಬರಾಜ್*

Wednesday, 22 August 2018

ನಾವು ಹುಡುಗಿಯರೇ ಹೀಗೆ...

ನಾವು ಹುಡುಗಿಯರೇ ಹೀಗೆ...
"''''''''''''''''''''''''''''’'''''

-೧-

ಹೌದು ಕಣೆ ಉಷಾ

ನಾವು ಹುಡುಗಿಯರೇ ಹೀಗೆ...

ಏನೇನೋ ವಟಗುಟ್ಟಿದರೂ

ಹೇಳಬೇಕಾದ್ದನ್ನು ಹೇಳದೆ

ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ.

ಜುಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ

ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ

ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ.

ಹೇಳಲೇಬೇಕು ಎನಿಸಿದ್ದನ್ನು

ಹೇಳಹೋಗಿ ಹೆದರಿ ಏನೇನೋ ತೊದಳುತ್ತೇವೆ

'ಐ ಲವ್ ಯೂ' ಅಂತ ಹೇಳಲು ಕಷ್ಟಪಟ್ಟು

ಬೇರೆ ಏನೇನೋ ದಾರಿ ಹುಡುಕಿ

ಸಂದೇಶ ಮುಟ್ಟಿಸಲು ಹೆಣಗುತ್ತೇವೆ.

ಅದನ್ನು ಅರ್ಥ ಮಾಡಿಕೊಳ್ಳಲಾರದೆ

ಹುಡುಗರು ಕೈ ತಪ್ಪಿದಾಗ

ಮುಸು ಮುಸು ಅಳುತ್ತೇವೆ.

ಕೊನೆಗೆ ಬೇರೆ ಯಾರನ್ನೋ ಮದುವೆಯಾಗಬೇಕಾದಾಗ

ನಾವೇ ದುರಂತ ನಾಯಕಿಯರೆಂದು

ಭ್ರಮಿಸಿ ಎಲ್ಲರ ಅನುಕಂಪ ಬಯಸುತ್ತೇವೆ.

ಗಂಡನಲ್ಲಿ 'ಅವನನ್ನು' ಹುಡುಕುತ್ತೇವೆ.

ಗಂಡನಿಗೆ ಮಾತ್ರ ಅದರ ಸುಳಿವೂ ಸಿಗದಂತೆ ನಟಿಸುತ್ತೇವೆ.

ಅಷ್ಟರಲ್ಲಿ ಒತ್ತಿಟ್ಟ ಭಾವನೆಗಳೆಲ್ಲ ಹರಳಾಗಿಬಿಟ್ಟಿರುತ್ತವೆ

ಅರಳುವುದೇ ಇಲ್ಲ ಉಷಾ...

-೨-

ನಾಲ್ಕು ವರ್ಷಗಳಲ್ಲಿ ವಿಪರೀತ ದಪ್ಪಗಾಗಿ

ಕೈಗೊಂದು ಕಾಲಿಗೊಂದು ಮಕ್ಕಳಾಗಿ

ಏದುಸಿರು ಬಿಡುತ್ತಾ ತರಕಾರಿ ಕೊಳ್ಳುವಾಗ

'ಅವನು' ಸಿಗುತ್ತಾನೆ.

ನಮ್ಮ ಇಂದಿನ ಅವಸ್ಥೆಗೆ ಇವನೇ ಕಾರಣ

ಅಂತ ರೋಷ ತಾಳುತ್ತೇವೆ.

ಆದರೆ ಮೇಲೆ ನಗುನಗುತ್ತಾ 'ಅವನ'

ಹೆಂಡತಿ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತೇವೆ.

ಯಾಕೆಂದರೆ ಅವಳದೂ ಅದೇ ಕಥೆಯಲ್ಲವೇ?

ನಾವು ಹುಡುಗಿಯರೇ ಹೀಗೆ...

                           - ಪ್ರತಿಭಾ ನಂದಕುಮಾರ್

ಮುದ್ದು ರಾಮನ ಬದುಕು

ಮುದ್ದು ರಾಮನ ಬದುಕು

*ಮರೆತೆಲ್ಲ ತೊಡಕುಗಳ,ಸರಿಸುತ್ತ ಹಳತುಗಳ*
*"ಎಂತೋಡುತ್ತಿದೆ ಮುಂದೆ ಈ ಕಾಲಪಕ್ಷಿ! ನಾಳೆ* *ಬಾನಿನಂಚಿನಲಿ ನವರೇಖೆ ಏನಿದೆಯೋ! ಕಾಲ ಮಹಿಮೆಗೆ ನಮಿಸೊ! ಮುದ್ದುರಾಮ*.

*ಎಷ್ಟಿದೆಯೋ ಅದಕ್ಕಿಂತ ಒಂದಿಂಚು ಹೆಚ್ಚಿಲ್ಲ; ಉದ್ದ ಇಲ್ಲವೆ ಮೊಟಕು ನೀ ಮಾಡಲಾರೆ. ಕಾಲವೆಂಬುದಕಿಲ್ಲಿ ಪರ್ಯಾಯ ಯಾವುದಿದೆ? ಕಾಲ ಚಕಿತವ ಅರಿಯೋ! ಮುದ್ದುರಾಮ*

*ತನ್ನ ಬಲೆ ರಚನೆಯಲ್ಲಿ ನಿತ್ಯ ಗೆಲ್ಲಬಹುದೇ ಜೇಡ? ನಿನ್ನೆ ಅದು ಆಗದಿರಿ ಇಂದಾಗಬಹುದು. ಹೊಸತನ ನೀ ಕಾಣಲಿಕ್ಕೆ ಸೋಮಾರಿತನ ಸಲ್ಲ; ನವನವೀನವೊ ಕಾಲ! ಮುದ್ದುರಾಮ*

*ಸಮಯ ಪಾಲಿಸದವರ ಕಾಲ ಹಂಗಿಸದಿರದು;ಕಾಲ ಸರಿಯುವುದು ನಿತ್ಯ ತಾನೊಪ್ಪಿದಂತೆ. ಯಾರ ಕಾಯಿಸಬೇಡ, ಕಾದು ಕುಳಿತಿರಬೇಡ; ಕಾಲ ನಿರ್ಣಾಯಕವೋ! ಮುದ್ದುರಾಮ*

*ಇದ್ದಾರೆ ಬಳಿಯಲ್ಲೆ ಸಮಯ ಕಳ್ಳರು, ಜೋಕೆ! ಜೂಜಾಟವಾಡುತ್ತ ಕಿಸೆಯ ಕದಿಯುವವರು. ಕಾಲಕಿಸೆಗಿಂತಾವ ಮಿಗಿಲಾದ ಚೀಲವಿದೆ? ಕಾಲ ಬಾಳಿನ ಆಸ್ತಿ- ಮುದ್ದುರಾಮ.*

*ಇಟ್ಟಿಗೆಯ ಸೇರಿಸದೆ ಗೋಡೆ ಕಟ್ಟುವೆ ಎಂತು? ಸಮಯ ಪಾಲಿಸದೆಂತು ಗೆಲುವ ಸಾಧಿಸುವೆ? ಆಚರಣೆ ಎಲ್ಲಿರದೊ ಅಲ್ಲಿರದು ಸೌಭಾಗ್ಯ; ಕಾಲಗೌರವ ಸೊಮ್ಮ -ಮುದ್ದು ರಾಮ*.

*ಬದುಕೆಂದರೇನಯ್ಯ? ಗಳಿಗೆಗಳ ಸರಮಾಲೆ. ಒಳಿತು ಇಲ್ಲವೇ ಕೇಡು ಇದೆ ಗಳಿಗೆ ಹಿಂದೆ. ಪ್ರತಿರೋಧಿಸದೆ ಬದುಕು ಒಪ್ಪಿಕೋ ಬಂದುದನು; ನಿನ್ನ ಮಿತ್ರನೋ ಸಮಯ! ಮುದ್ದುರಾಮ.*

*ಕಾಲ ಕುಂಟುವುದಿಲ್ಲ; ಅದರ ನಡೆ ಅವಿರತವೊ!ಇದೆ ಏನೊ ವ್ಯತ್ಯಾಸ ನಿನ್ನ ನಿಲುವಿನಲಿ. ಹೆಜ್ಜೆಗತಿಯನು ಅರಿತು ಸರಿಪಡಿಸಿಕೋ ಮೇಲ್ಲ; ಕಾಲ ಶಿಸ್ತಿನ ಮಿತ್ರ- ಮುದ್ದುರಾಮ*

*ಕಳೆದು ನಿನ್ನೆಯ ನೀನು ಗುಣಿಸದಿರು ನಾಳೆಯನು; ಕೂಡಿ ನಿಂತರೆ ಭೂತ ಇಂದು ಸೊಗಸಲ್ಲ. ಇರದುದನು ವಿಭಜಿಸುವುದಾವ ಲೆಕ್ಕಾಚಾರ? ಸಮಯ ಬಾಳಿನ ಬೆರಗೊ! ಮುದ್ದುರಾಮ.*

*ನಾಳೆ ಏನೋ ಎಂದು ಇಂದೇಕೆ ಅಳುತ್ತಿರುವೆ? ಇಂದಾಗುವುದರ ಅರಿವು ನಿನ್ನೆ ನಿನಗಿತ್ತೆ? ಏನಾಗಬೇಕೊ ಅದು ಆಗುವುದು ಅದರಂತೆ; ಕಾಲ ಪ್ರಶ್ನಾತೀತ!-ಮುದ್ದುರಾಮ*

*ಒಮ್ಮೆ ಸರಿದರೆ ಮುಂದೆ ಇಲ್ಲ ಹಿಂದಕ್ಕೆ ಹೆಜ್ಜೆ; ಏಕಮುಖ ಸಂಚಾರ ಈ ಕಾಲ ಗರಿಮೆ. ಆದುದಕೆ ಶೋಕಿಸದೆ ಮುಂದೆ ನಡೆವುದೆ ಲೇಸು; ಸಮಯ ಪ್ರಸ್ತುತ ಪ್ರಜ್ಞೆ- ಮುದ್ದುರಾಮ.*

*ಸರಿದು ಹೋದರೆ ಒಮ್ಮೆ ಕೈಗೆ ಸಿಗುವುದೇ ಕಾಲ? ಕೊಂಡು ಬಳಸಲಿಕೆ ಅದು ಪೇಟೆ ಸರಕಲ್ಲ. ಇಡಬಲ್ಲೆಯೋ ನೀನು ಇದ ದಾಸ್ತಾನಿನಲ್ಲಿ? ಜಲದಂತೆ ಕಾಲಗತಿ- ಮುದ್ದು ರಾಮ*.

*ಮುನ್ನೆಡೆಯುವುದು ಲೋಕ ಯಾರಿರಲಿ ಇರದಿರಲಿ;ನೀ ಅಳಿದೆ ಎಂದೇನು ರವಿ ಮೂಡದಿಹನೆ? ಬೀಸದೇ ತಂಗಾಳಿ? ಘಮಘಮಿಸದೇ ಹೂವು? ಕಾಲ ಕಾಯದು ನಿನಗೆ- ಮುದ್ದುರಾಮ.*

*ದೂರವಿರು ಬೇಕಿರದ ಕಾಲ ಭಕ್ಷಕರಿಂದ; ಅನಗತ್ಯ ಮಾತಿಂದ ನೂರು ತಲೆಬೇನೆ. ಇರುವ ಸಮಯವನರಿತು ಜಾಣ್ಮೆಯಿಂದದ ಬಳಸು; ಪರಿಮಿತವೊ ಈ ಕಾಲ! ಮುದ್ದುರಾಮ.*

*ಸೂರ್ಯ ಪ್ರತಿ ಮುಂಜಾನೆ ಉದಿಸದಿರೆ ಮೂಡಲಲಿ  ಎಷ್ಟೊಂದು ಪರದಾಟ ಈ ಮನುಜಕುಲಕೆ? ಬರಬಾರದೇಕೆ ಆ ಶಿಸ್ತು ದಿನದಿನ ನಮಗೆ? ಶಿಸ್ತಿದ್ದರಿದೆ ಹುರುಪು- ಮುದ್ದುರಾಮ.*

*ಹೀಗಿದ್ದೆ ಹಾಗಿದ್ದೆ ಎಂದು ಕೊರಗುವೆ ಏಕೆ? ಮುಡಿದ ಮಲ್ಲಿಗೆ ಒಮ್ಮೆ ಬಾಡುವುದು ಸಹಜ. ನೆನೆಯುತ್ತ ನಿನ್ನೆಯನೆ ಮರೆಯದಿರು ಈ ದಿನವ ಇಂದು ಎಂದರೆ ಸ್ವರ್ಗ- ಮುದ್ದುರಾಮ*

*ಹಳೆ ನೆನಪು ಕಾಡಿದರೆ ಮರೆ ಒಡನೆ ಅದನ್ನೆಲ್ಲ; ಮಾಗಿ ಕೋಗಿಲೆಯಂತೆ ಇರು ಮೌನದಿಂದ. ಕಾತರಕ್ಕೆ ಬೇಸರಕ್ಕೆ ವಾಲಿದರೆ ಅದೇ ನೋವು; ವರ್ತಮಾನಕ್ಕೆ ಒರಗೊ!- ಮುದ್ದುರಾಮ.*

*ನೋವು ಬರಲಿದೆ ನಾಳೆ ಎಂದಳುವೆ ಇಂದೇಕೆ? ಬಂದಾಗ ಬರಲಿ ಬಿಡು ಚಿಂತೆ ಅದಕ್ಕೇಕೆ? ಹೂವು ಬಾಡುವುದೆಂದು ಈಗ ಕಣ್ಮುಚ್ಚುವುದೆ? ನಿನ್ನದೋ ದಿನ ಇಂದು!- ಮುದ್ದುರಾಮ.*

*ಇರುವಷ್ಟು ದಿನ ನೀ ನೂಕದಿರು ಕಸದಂತೆ; ಎಷ್ಟು ದಿನ ನಿನಗಿದೆಯೊ ಅದೇ ನಿನ್ನ ಬಾಳು. ಸುಧೆಗೆ ಹುಳಿ ಹಿಂಡಿದರೇ ಭಕ್ಷಾನ್ನವೆಲ್ಲಿಹುದೊ? ಸೆರೆಹಿಡಿಯೋ ಗಳಿಗೆಯನು- ಮುದ್ದುರಾಮ.*

*ಮಾಡಬೇಕಾದುದುನು ಮೊದಲು ಗುರುತಿಸು ನೀನು; ದೂರ ಸರಿವುದು ಆಗ ಅನಗತ್ಯ ಕಾರ್ಯ. ಬೇಡದುದ ಕೈಗೆತ್ತುಕೊಂಡೇನು ಫಲ ನಮಗೆ? ಗಮನ ಕೊಡು ಆದ್ಯತೆಗೆ- ಮುದ್ದುರಾಮ.*

*ಮಾಡಬೇಕಾದುದರ ಪಟ್ಟಿ ಮಾಡಿದ ಬಳಿಕ ಕಾರ್ಯ ಕಾರ್ಯತತ್ಪರನಾಗು  ಆದ್ಯತೆಯ ಮೇರೆ. ಬರೆದ ಪಟ್ಟಿಯ ಮತ್ತೆ ಬರೆದರೇನಿದೆ ಲಾಭ? ಮುಗಿಸೆಸಕವನು ಮೊದಲು- ಮುದ್ದುರಾಮ.*

*ಬರಿ ಪಟ್ಟಿ ಮಾಡಿದರೆ ಕಾರ್ಯ ಮುಗಿದಂತೇನು? ಮಾಡು ಯೋಜಿಸಿದಂತೆ, ನಿರ್ಧಾರದಂತೆ. ಮುಂದೂಡಿದರೆ ಆಗ ಆ ಕೆಲಸ ಕೆಟ್ಟಂತೆ; ಸಮಯ ನೀ ನಿರ್ವಹಿಸು- ಮುದ್ದುರಾಮ.*

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...